ಒನಕೆ ಓಬವ್ವ ಜಯಂತಿ ಅಚರಣೆಗೆ ಸಿಎಂ ಆದೇಶ : ಚಿತ್ರದುರ್ಗ ಛಲವಾದಿ ಸಮುದಾಯ ಹಾಗೂ ಶಾಸಕ ನೆಹರು ಓಲೆಕಾರ್ ರಿಂದ ಸಿಎಂ ಗೆ ಸನ್ಮಾನ

IMG-20211110-WA0081

ಬೆಂಗಳೂರು : ದಿನಾಂಕ 11/11/2021 ರಂದು ಒನಕೆ ಓಬವ್ವ ಜಯಂತಿಯನ್ನ ರಾಜ್ಯ ಸರ್ಕಾರದಿಂದ ಆಚರಣೆ ಮಾಡಲು ಸರ್ಕಾರದಿಂದ ಅಧಿಕೃತ ಘೋಷಣೆ ಮಾಡಿದ್ದರಿಂದ ಸಲುವಾಗಿ ಮಾನ್ಯ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿಯವರಿಗೆ ಚಿತ್ರದುರ್ಗದ ಛಲವಾದಿ ಸಮುದಾಯ.ಮತ್ತು ಎಸ್ಸಿ. ಎಸ್ಟಿ ಆಯೋಗದ ಅಧ್ಯಕ್ಷ ಹಾಗೂ ಹಾವೇರಿ ಶಾಸಕ ನೆಹರು ಚ ಓಲೇಕಾರ ಅವರು ಮುಖ್ಯಮಂತ್ರಿಗಳಿಗೆ ಹಾಗೂ ಇಂಧನ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲ್ ಕುಮಾರ್ ಅವರುಗಳಿಗ ಸನ್ಮಾನಿಸಿ.ಅಭಿನಂದನೆ ಸಲ್ಲಿಸಲಾಯಿತು,

ಮಾನ್ಯ ಮುಖ್ಯಮಂತ್ರಿ ಗಳು ಜಯಂತಿಯನ್ನು ರಾಜ್ಯಾದ್ಯಂತ ಸರ್ಕಾರದಿಂದ ಆಚರಣೆ ಮಾಡಲು ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆ ಗೆ ವಹಿಸಿ ಆದೇಶ ನೀಡಿದ್ದಾರೆ. ಇದು ರಾಜ್ಯದ ಒನಕೆ ಓಬವ್ವಳ ಅಭಿಮಾನಿಗಳು. ಹಾಗೂ ಆಕೆಯ ಸಮುದಾಯದರಿಗೆ ಬಹಳ ಸಂತೋಷದ ವಿಷಯ. ಬಹಳ ವರ್ಷಗಳಿಂದ ಸರ್ಕಾರದ ವತಿಯಿಂದ ಒನಕೆ ಓಬವ್ವಳ ಜಯಂತಿಯನ್ನು ಆಚರಣೆ ಮಾಡಬೇಕೆಂದು .ಸಾಕಷ್ಟು ಸಂಘ .ಸಂಸ್ಥೆಗಳು. ಅಭಿಮಾನಿಗಳು. ಹಾಗೂ ಸಮುದಾಯದವರು ಸೇರಿ ಜಾತ್ಯಾತೀತವಾದ ಹೋರಾಟ ನಡೆಸಿದರು. ಆ ಹೋರಾಟಕ್ಕೆ ಇಂದು ಗೌರವ ಸಿಕ್ಕಿದಂತಾಗಿದೆ.ಇನ್ಮುಂದೆ ವೀರ ವನಿತೆಯರ ಪಟ್ಟಿಗೆ ಒನಕೆ ಓಬವ್ವ ಸೇರುತ್ತಾಳೆ.ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸ್ವಾಮೀಜಿ ಸಿದ್ದಯ್ಯನಕೋಟೆ ಶಾಖಾ ಮಠ ಮೊಳಕಾಲ್ಮುರು . ಛಲವಾದಿ ಸಮುದಾಯದವರಾದ. ಎನ್. ಬಿ.ಭಾರ್ಗವಿ ದ್ರಾವಿಡ್ ರಾಜ್ಯ ಕಾರ್ಯ ಕಾರಿಣಿ ಸದಸ್ಯರು ಬಿ.ಜೆ.ಪಿ ಎಸ್ಸಿ ಮೋರ್ಚ. ಕೇಶವಮೂರ್ತಿ ವಕೀಲರು. ಗೋವರ್ಧನ ಪಿಲಾಲಿ.ಮುತ್ತಣ್ಣ ಕಹಳೆ .ನಾಗರಾಜ್ . ಹೆಚ್.ಡಿ.ನವೀನ .ದೀಪು .ಮಂಜುಳಾ ದೇವಿ . ಇದ್ದರು.

Leave a Reply

Your email address will not be published. Required fields are marked *

error: Content is protected !!