Panchapeetha: ಪಂಚಪೀಠಗಳು ಒಂದೇ ಕಡೆ ಸೇರಲು ವೇದಿಕೆ ಸಿದ್ದ.! ವೀರಶೈವ-ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಸಾಗಬೇಕಾಗಿದೆ – ರಂಭಾಪುರಿ ಶ್ರೀ

FB_IMG_1749448708048

ಬೆಂಗಳೂರು: (Panchapeetha) ವೀರಶೈವ ಲಿಂಗಾಯತ ಸಮಾಜದಲ್ಲಿನ ಎಲ್ಲಾ ಒಳಪಂಗಡಗಳು ಒಂದಾಗಿ ಸಮಷ್ಠಿ ಪ್ರಜ್ಞೆ ಮೂಲಕ ಜೊತೆಯಲ್ಲಿ ಸಾಗುವ ಅನಿವಾರ್ಯತೆ ಹಿಂದೆಂದಿಗಿಂತಲೂ ಇದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳವರು ಕರೆ ನೀಡಿದರು.

ಬೆಂಗಳೂರಿನಲ್ಲಿರುವ ಡಾ.ಶಾಮನೂರು ಶಿವಶಂಕರಪ್ಪನವರ ಗೃಹದಲ್ಲಿ ರಂಭಾಪುರಿ ,ಕಾಶಿ ಮತ್ತು ಕೇದಾರ ಜಗದ್ಗುರುಗಳವರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಸಮಾಜವು ಕವಲು ದಾರಿಯಲ್ಲಿ ಸಾಗುತ್ತಿದ್ದು ಇದರ ದುಷ್ಪರಿಣಾಮ ಮುಂದಿನ ಪೀಳಿಗೆಯ ಮೇಲೆ ಆಗಲಿದ್ದು ಇದನ್ನು ಸರಿಪಡಿಸಲು ಡಾ.ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಹಲವು ಪ್ರಯತ್ನ ಮಾಡುತ್ತಿದ್ದು ಇದರ ಮೊದಲ ಪ್ರಯತ್ನವಾಗಿ ಜಗದ್ಗುರು ಪಂಚಾಚಾರ್ಯರ ಒಕ್ಕೂಟದ ವ್ಯವಸ್ಥೆಯ ಬಗ್ಗೆ ಸಮಾಲೋಚನೆ ನೆಡೆದಿದ್ದು ಮುಂದಿನ ದಿನಗಳಲ್ಲಿ ಪಂಚಪೀಠಗಳು ಮಹಾಸಭೆಯ ಕ್ರಿಯಾತ್ಮಕ ಯೋಜನೆಗಳಲ್ಲಿ ಮುಂದು ನಿಂತು ಸಮಾಜಕ್ಕೆ ಮಾರ್ಗದರ್ಶನ ನೀಡಲಿವೆ ಎಂದು ತೀಳಿಸಿದರು.

ಕಾಶಿ ಜಗದ್ಗುರುಗಳವರ ತಮ್ಮ ಆಶೀರ್ವಚನದಲ್ಲಿ ಡಾ.ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಸಮಾಜವು ಮತ್ತಷ್ಟು ಗಟ್ಟಿಯಾಗುತ್ತಿದೆ, ಅವರ ಆಶಯದಂತೆ ಶೀಘ್ರವಾಗಿ
ಪಂಚಪೀಠಗಳು,ಗುರು-ವೀರಕ್ತರು ಮತ್ತು ಎಲ್ಲಾ ಒಳಪಂಗಡಗಳ ಮಠಾಧೀಶರಗಳು ಒಂದಾಗಿ ಸಾಗಲಿವೆ ಎಂದು ತಿಳಿಸಿ ಸಚಿವರಾದ ಎಸ್ .ಎಸ್ .ಮಲ್ಲಿಕಾರ್ಜುನ ಅವರ ಪ್ರಯತ್ನದಿಂದ ವೀರಶೈವ-ಲಿಂಗಾಯತ ಸಮಾಜವು ಸರ್ವ ಸಮಾಜಗಳೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೇದಾರ ಶ್ರೀಗಳು ತಮ್ಮ ಆಶೀರ್ವಾದಲ್ಲಿ ಶಾಮನೂರು ಶಿವಶಂಕರಪ್ಪನವರ ಜನ್ಮದಿನದ ಪ್ರಯುಕ್ತ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುವದು ಹೆಮ್ಮೆಯ ವಿಚಾರ, ಶಾಮನೂರು ಪರಿವಾರದ ಸಾಮಜಿಕ ಕಾರ್ಯಗಳು ಸರ್ವರಿಗೂ ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ವೀರಶೈವ ಮಹಾಸಭೆಯನ್ನು ಮುಂದುವರೆಸಿಕೊಂಡು ಹೊಗುತ್ತಿದ್ದು ,ಇಂದು ನಮ್ಮ ಮನೆಯಲ್ಲಿ ಮೂರು ಪೀಠದ ಜಗದ್ಗುರುಗಳವರು ಆಗಮಿಸಿರುವುದು ತುಂಬಾ ಸಂತೋಷ ಉಂಟುಮಾಡಿದ್ದು ಮುಂದಿನ ದಿನಗಳಲ್ಲಿ ಪಂಚಪೀಠಗಳು ಮತ್ತು ಎಲ್ಲಾ ಸಮಾಜದ ಮಠಾಧೀಶರಗಳು ಒಂದಾಗಿ ಸಮಾಜಕ್ಕೆ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿಕೊಂಡರು.

ಸಚಿವಾರದ ಎಸ್.ಎಸ್ ಮಲ್ಲಿಕಾರ್ಜುನ ಮಾತನಾಡಿ ನಮ್ಮ ತಂದೆಯವರ ಜನ್ಮದಿನದ ಮುಂಚಿತವಾಗಿ ಪಂಚಪೀಠಗಳಲ್ಲಿನ ಮೂರು ಪೀಠಗಳು ನಮ್ಮ ಮನೆಗೆ ದಯಮಾಡಿಸಿದ್ದು ಮುಂದಿನ ದಿನಗಳಲ್ಲಿ ಪಂಚಪೀಠಗಳೊಂದಿಗೆ ಎಲ್ಲಾ ಮಠಾಧೀಶರಗಳು ಒಂದಾಗಿ ಸೇರಿ ಎಲ್ಲಾ ಸಮಾಜಗಳು ಒಂದಾಗಿ ಬಾಳುವಂತೆ ಆಶೀರ್ವಾದ ಮಾಡಬೇಕು, ಇದರಿಂದಾಗಿ ಸಮಾಜದಲ್ಲಿ ಸಮಾರಸ್ಯ ಉಂಟಾಗುತ್ತದೆ ಎಂದು ತಿಳಿಸಿದರು.

ಸಂಸದರಾದ ಶ್ರೀಮತಿ ಡಾ.ಪ್ರಬಾ ಮಲ್ಲಿಕಾರ್ಜುನರವರು ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಡೆಯೂರು ಶ್ರೀಗಳು,ಕಣ್ವಕುಪ್ಪೆ ಶ್ರೀಗಳು ,ಜಪದಕಟ್ಟೇ ಶ್ರೀಗಳು, ಚಾನುಕೋಟಿ ಶ್ರೀಗಳು, ಶಾಮನೂರು ಪರಿವಾರದ ಸದಸ್ಯರು ಮತ್ತು ಅಣಬೇರು ರಾಜಣ್ಣ,ಎಸ್.ಕೆ ವೀರಣ್ಣ,ನಾಗಭೂಷಣ್ ಕಡೆಕೊಪ್ಪ,ಹರ್ಷವರ್ದನ್ ಆರ್.ಟಿ ಪ್ರಶಾಂತ್, ರೇಣುಕ ಪ್ರಸನ್ನ ಹರೀಶ್,ವೀಣಾ ಕಾಶಪ್ಪನವರ್, ಶ್ಯಾಗಲಿ ಜಯಣ್ಣ, ಇಂಧುದರ್, ಪರುಶುರಾಮ್, ತಿಪ್ಪೇಸ್ವಾಮಿ, ರಾಜು,ಕೊಟ್ರೇಶ್,ಉಳುವಯ್ಯ,ವಾಗೀಶ್ ಸ್ವಾಮಿ ವಿಕಾಸ್, ಸುನಂದಮ್ಮ, ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!