Part 1: ಅಕ್ರಮಗಳ ಕಿಂಗ್ ಪಿನ್ ಇಮ್ರಾನ್ ಸಿದ್ದೀಕಿಗೆ ಬಿಗಿಯಾಯ್ತು ಬಂಧನದ ಬೇಡಿ.! ಎಸ್ ಪಿ ರಿಷ್ಯಂತ್ ಕಾರ್ಯಕ್ಕೆ ಎಲ್ಲೆಡೆ ಹರ್ಷದ ವಾತಾವರಣ

garudavoice exclusive HiFi crime activists imran Siddiqee

ಬಸವ ಬೆಂಕಿಪುರ

ದಾವಣಗೆರೆ: ಆತನದ್ದು ವಿಲಾಸಿ ಜೀವನ. ಓಡಾಡುತ್ತಿದ್ದು ಸದಾ ಬೆಂಜ್ ಕಾರಿನಲ್ಲೇ. ಚುನಾವಣೆಗೆ ಸ್ಪರ್ಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಕನಸು ಕಂಡಿದ್ದ ಆತನಿಗೆ 12 ದಿವಸವಾದರೂ ಇನ್ನೂ ಬೇಲ್ ಸಿಕ್ಕಿಲ್ಲ..

ಹೌದು, ತುಂಗಭದ್ರಾ ನದಿ ತೀರಿದಲ್ಲಿ ಮರಳು ಗಣಿಗಾರಿಕೆ ಮಾಡುವವರನ್ನು ಹೆದರಿಸಿ ಹಣ ಮಾಡುತ್ತಿದ್ದ ಮೈಸೂರು  ಇಮ್ರಾನ್ ಸಿದ್ದೀಕಿ ವ್ಯಕ್ತಿ ವಿಲಾಸಿ ಬದುಕು ನಡೆಸುತ್ತಿದ್ದವ ಸದ್ಯ ದಾವಣಗೆರೆ ಜೈಲಿನಲ್ಲಿದ್ದಾನೆ. ನಗರದ ಮರಳು‌ ವ್ಯಾಪಾರಿ ಮುಬಾರಕ್ ಎಂಬುವವರು ಮರಳು ಗಣಿಗಾರಿಕೆ ಮಾಡಲು ಈತನಿಗೆ ತಿಂಗಳಿಗೆ 4 ಲಕ್ಷ ಕೊಡಬೇಕೆಂದು ಹೆದರಿಸುತ್ತಿದ್ದಾನೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇಲೆ ಮೊದಲು ಪ್ರಕರಣ ದಾಖಲಾಗುತ್ತದೆ. ನಂತರ ಎಸ್ಪಿ ರಿಷ್ಯಂತ್, ಡಿಸಿಆರ್ ಬಿ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ತಂಡ ರಚಿಸುತ್ತಾರೆ. ಬಳಿಕ ಈ ತಂಡ ರೆಡ್ ಹ್ಯಾಂಡ್ ಆಗಿ ಹಿಡಿದು ದಾವಣಗೆರೆ ಜೈಲಿಗೆ ಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿನಲ್ಲಿ ಇರುವಾಗ ಇತ್ತೀಚೆಗೆ ಕೋರ್ಟ್ ನಿಂದ ಬೇಲ್ ಸಿಕ್ಕಿತ್ತು.

ಇದಾದ ಬಳಿಕ ದಾವಣಗೆರೆ ನಿವಾಸಿ ಅಶೋಕ್ ಎಂಬ ಉದ್ಯಮಿ, ಹಫ್ತಾ ವಸೂಲಿಗೆ ಸಂಬಂಧಪಟ್ಟಂತೆ ಇಮ್ರಾನ್ ಸಿದ್ದೀಕಿ ಮೇಲೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಬೇಲ್ ಸಿಕ್ಕಿಲ್ಲ. ವಿಲಾಸಿ ಜೀವನ ನಡೆಸುತ್ತಿದ್ದವ ಜೈಲಿನಲ್ಲಿ ಸಹಪಂಕ್ತಿ ಬೋಜನ ನಡೆಸುತ್ತಿದ್ದಾನೆ. ಈತನಿಗೆ ಬೇಲ್ ಸಿಗಲು ಅವನ ಪಟಾಲಂ ಓಡಾಡುತ್ತಿದೆ. ಆದರೆ ಇಮ್ರಾನ್ ಸಿದ್ದೀಕಿ ಜೈಲಿನಲ್ಲಿ ಇನ್ನೂ ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಗಿದೆ.

ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯಲ್ಲಿ ಹೇಗೆ ಶುರುವಾಯಿತು ಅಕ್ರಮ ದಂಧೆ.!?

ಮೈಸೂರು ಮೂಲದ ಸಿದ್ದೀಕಿ ಮೊದಲು ಮೈಸೂರಿನಲ್ಲಿ ಸಣ್ಣ ಪ್ರಮಾಣದ ಕಲ್ಲು ಕ್ರಷರ್ ಗಣಿಗಾರಿಕೆ ಆರಂಭಿಸಿದ ನಂತರ ಈತನ ಕಣ್ಣು ಮರಳು ಗಣಿಗಾರಿಕೆ ನಡೆಸುವರ ಮೇಲೆ ಬರುತ್ತದೆ. ನಂತರ ತುಂಗಾಭದ್ರಾ ತಟದ, ಮಲೆನಾಡಿನ ಸೆರಗಿನ
ಶಿವಮೊಗ್ಗಕ್ಕೆ ಓರ್ವ ಐಪಿಎಸ್ ಅಧಿಕಾರಿಯ ಮೂಲಕ ಕಾಲಿಡುತ್ತಾನೆ. ಆ ಅಧಿಕಾರಿ ಮೈಸೂರಿನಲ್ಲಿ ಪರಿಚಿತರಾಗಿರುತ್ತಾರೆ. ತುಂಗಭದ್ರಾ ನದೀ ತೀರದ ಬಂಗಾರದ ಮರಳನ್ನು ಬಂಗಾರದಂತೆ ಮಾರಾಟ ಮಾಡುತ್ತಿದ್ದವರ ಮೇಲೆ ಸಿದ್ದೀಕಿ ಕಣ್ಣು ಬೀಳುತ್ತದೆ. ಅಲ್ಲಿಂದ ಇಮ್ರಾನ್ ಸಿದ್ಧಿಖೀ ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ ಹರಿಯುವ ತುಂಗಭದ್ರಾ ನದಿ ತೀರದ ವ್ಯಾಪ್ತಿಯಲ್ಲಿ ತನ್ನದೇ ಕೋಟೆ ಕಟ್ಟಿಕೊಂಡು ಕೋಟಿ ಕೋಟಿ ಹಣವನ್ನ ಸಂಪಾದನೆ ಮಾಡುತ್ತಾನೆ.

ಐಪಿಎಸ್ ಅಧಿಕಾರಿಗಳ ಕೃಪಾಕಟಾಕ್ಷ.!

ಈ ಹಿಂದೆ ಇದ್ದ ಐಪಿಎಸ್ ಅಧಿಕಾರಿಗಳಿಬ್ಬರ ಕೃಪಾಕಟಾಕ್ಷ ಇವನಿಗೆ ಇದ್ದಿದ್ದರಿಂದ ಮರಳು ವಸೂಲಿ ಮಾಡುತ್ತಿದ್ದವರ ಬಳಿ ಹಫ್ತಾ ವಸೂಲಿಗೆ ಇಳಿಯುತ್ತಾನೆ. ತನ್ನ ಮಾತನ್ನ ವಲಯದಲ್ಲಿ ಇರುವ ಯಾವ ಪೊಲೀಸ್ ಮಾತು ಕೇಳೋದಿಲ್ಲ, ಅಂತವರಿಗೆ ಉನ್ನತ ಐಪಿಎಸ್ ಅಧಿಕಾರಿಗಳ ಮೂಲಕ ಪೋನ್ ಮಾಡಿಸಿ ಹಣ ವಸೂಲಿ ಮಾಡುತ್ತಿದ್ದ. ಇಲ್ಲದಿದ್ದರೆ ಸ್ಥಳೀಯ ಪೊಲೀಸರ ಮೇಲೆ ಇಲ್ಲಸಲ್ಲದ ದೂರು ಹೇಳುವುದು, ಟ್ರಾನ್ಸಫರ್, ಸಸ್ಪೆಂಡ್ ಮಾಡಿಸುವುದು ಮಾಡುತ್ತಿದ್ದ, ಈ ಭಯಕ್ಕೆ ಹೆದರಿ ಕೆಲವರು ಹಫ್ತಾ ವಸೂಲಿ ಮಾಡಿ ಐಪಿಎಸ್ ಅಧಿಕಾರಿಯೊಬ್ಬರಿಗೆ ಡಿ ವೈ ಎಸ್ ಪಿ, ಇನ್ಸ್‌ಪೆಕ್ಟರ್ ಹಾಗೂ ಇಮ್ರಾನ್ ಸಿದ್ದೀಖ್ ಮೂಲಕ ಹಣ ನೀಡುತ್ತಿದ್ದರು ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ.

ಇಮ್ರಾನ್ ಸಿದ್ಧಿಖೀ ಬಹುತೇಕ ದಂಧೆಗಳ ಕಿಂಗ್ ಪಿನ್:

ದಿನ, ವಾರ, ತಿಂಗಳ Daily,Weekly,Monthly, ಲೆಕ್ಕದಲ್ಲಿ ಹಫ್ತಾ ವಸೂಲಿ ಮಾಡಿಕೊಡ್ತಿದ್ದ. ಈ ನಾಲ್ಕು ಜಿಲ್ಲೆಗಳ ಮಟ್ಕಾ, ಇಸ್ಪೀಟ್, ಮರಳು, ಅನ್ನಭಾಗ್ಯ ಅಕ್ಕಿ, ಸೇರಿದಂತೆ ಎಲ್ಲ ರೀತಿಯ ದಂಧೆಗಳಿಗೆ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿ ಕೊಡಿಸುತ್ತಿದ್ದ ಎಂಬ ಮಾತನ್ನು ಪೊಲೀಸ್ ಮೂಲಗಳು ತಿಳಿಸಿವೆ.

ಸಿಡಿಆರ್ ಚೆಕ್ ಮಾಡುತ್ತಾರೆಯೇ.!?

ಸಾಮಾನ್ಯವಾಗಿ ಪೊಲೀಸರು ಯಾವುದೇ ಪ್ರಕರಣದಲ್ಲಿ ಮೊದಲು ಚೆಕ್ ಮಾಡುವುದೇ ಸಿಡಿಆರ್ (ಕಾಲ್ ಡೀಟೆಲ್ಸ್ ರೆಕಾರ್ಡ್) ಆದ್ದರಿಂದ ಇವನ ನಂಬರ್ ಸಿಡಿಆರ್ ಗೆ ಹಾಕಿದ್ರೆ ಒಂದಷ್ಟು ಹಿರಿಯ ಅಧಿಕಾರಿಗಳ ಬಂಡವಾಳ ಬಯಲಾಗುವ ಸಾಧ್ಯತೆ ಇದ್ದು, ಆ ಕೆಲಸ ನಡೆಯುತ್ತದೆಯೋ, ಅಥವಾ ಪ್ರಕರಣ ಇಲ್ಲಿಗೆ ಮುಚ್ಚಿ ಹೋಗುತ್ತದೆಯೋ ಎಂಬ ಪ್ರಶ್ನೆ ಉದ್ಬವಿಸಿದೆ!. ಇನ್ನು ಬಂಧಿತ ಸಿದ್ದಿಕ್ ನಿಂದ ಒಂದು ಐಶಾರಾಮಿ ಕಾರು, 75 ಲಕ್ಷ, 2 ಮೊಬೈಲ್ ಜಫ್ತಿ ಮಾಡಲಾಗಿದೆ.

ಮೈಸೂರಿನಲ್ಲಿ ಬಂಧನ:
ಇಮ್ರಾನ್ ಸಿದ್ಧೀಖಿ ಬಂಧಿಸಲು ದಾವಣಗೆರೆ ಡಿ ಸಿ ಆರ್ ಬಿ ಘಟಕದ ಡಿ ವೈ ಎಸ್ ಪಿ ಬಸವರಾಜ್ ಹಾಗೂ ಅವರ ತಂಡ ಮೈಸೂರಿನಲ್ಲಿ ಕಾದಿದ್ದು ನಂತರ ಮನೆಗೆ ಹೋಗಿ ಈತನನ್ನ ಎತ್ತಾಕಿಕೊಂಡು ಬಂದಿದ್ದಾರೆ. ಮನೆ ಜಾಲಾಡಿದಾಗ 75 ಲಕ್ಷ ಹಣ ಸಿಕ್ಕಿದೆ. ಇನ್ನೂ ಚಿತ್ರದುರ್ಗ ಮೂಲದ ಆಶೋಕ್ ಅಲಿಯಾಸ್ ಜಿಮ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಶಿವಮೊಗ್ಗ ಮೂಲದ ರೌಡಿ ಶೀಟರ್ ಜುಲ್ಫೀಕರ್ ಎಂಬಾತನ ಹುಡುಕಾಟದಲ್ಲಿ ಪೊಲೀಸ್ ಪಡೆ ಬೆನ್ನು ಬಿದ್ದಿದೆ.

ವಿದೇಶದಲ್ಲಿ ಬಿಸಿನೆಸ್: ವೈಟ್ ಕಾಲರ್ ಕ್ರೈಂ ದಂಧೆ ನಡೆಸುತ್ತಿದ್ದ ಇವನು ತಿಂಗಳಲ್ಲಿ ಹೆಚ್ಚಾಗಿ ದುಬೈ ಸೇರಿದಂತೆ ಇನ್ನಿತರ ದೇಶಗಳಿಗೆ ಹೋಗುತ್ತಿದ್ದ. ಅಲ್ಲಿ ಬಿಸಿನೆಸ್ ಇನ್ನಿತರೆ ಕೆಲಸ ಮಾಡುತ್ತಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ ಇವನು ಮಾತಿ‌ನಲ್ಲಿ ಬಲು ಚಾಲು, ಹಲವು ಭಾಷೆಯನ್ನು ಇಮ್ರಾನ್ ಸಿದ್ದೀಖ್ ಬಲ್ಲವನಾಗಿದ್ದ. ದುಬೈನಲ್ಲಿಯೇ ಪದವಿ ಮಾಡಿದ್ದ. ಅಲ್ಲಿಂದ ಭಾರತಕ್ಕೆ ಬಂದ ಮೇಲೆ ತನ್ನ ಸಾಮ್ರಾಜ್ಯ ಕಟ್ಟಿ ಕೋಟ್ಯಾಂತರ ಕುಳ ಎನ್ನಿಸಿದ್ದಾನೆ.

ಎಂಎಲ್ಎ ಆಗುವ ಆಸೆ: ಇಮ್ರಾನ್ ಸಿದ್ದೀಖಿ ಮರಳು ಗಣಿಗಾರಿಕೆಯಿಂದ ರಾಜಕೀಯಕ್ಕೆ ಬರುವ ಆಸೆ ಹೊಂದಿದ್ದ. ಯಾವುದಾದರೂ ಪಕ್ಷದಿಂದ ಟಿಕೆಟ್ ಗಿಟ್ಟಿಸಿ ಎಂಎಲ್ಎ ಆಗುವ ಆಸೆ ಹೊಂದಿದ್ದ. ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದ ಎನ್ನಲಾಗಿದೆ.

ದಾವಣಗೆರೆ ಎಸ್ ಪಿ ರಿಷ್ಯಂತ್ ಗೆ ಸಖತ್ ನೇಮ್:
ಸಾಕಷ್ಟು ಐಪಿಎಸ್ ಅಧಿಕಾರಿಗಳ ನಂಟು ಹೊಂದಿದ್ದ ಇಮ್ರಾನ್ ಸಿದ್ದೀಖಿಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಯಾರು ಕೂಡ ಈತನ ವಿರುದ್ದ ಪ್ರಕರಣ ದಾಖಲಿಸಿರಲಿಲ್ಲ. ಯಾವಾಗ ಈತನ ಮೇಲೆ ದಾವಣಗೆರೆಯ ಮುಬಾರಕ್ ಪ್ರಕರಣ ದಾಖಲಿಸುತ್ತಾರೆಯೋ, ಎಸ್ ಪಿ ರಿಷ್ಯಂತ್ ಡಿ ಸಿ ಆರ್ ಬಿ ಆಫೀಸರ್ ಬಸವರಾಜ್ ಅವರ ನೇತೃತ್ವದಲ್ಲಿ ತಂಡ ನೇಮಿಸುತ್ತಾರೆ. ಎಸ್ಪಿ ಸಪೋರ್ಟ್ ಸಿಕ್ಕದ್ದೇ ತಡ ಡಿ ವೈ ಎಸ್ ಪಿ ಬಸವರಾಜ್ ಮೈಸೂರಿಗೆ ಹೋಗಿ ಇಮ್ರಾನ್ ಸಿದ್ದೀಖಿಯನ್ನು ಎತ್ತಾಕೋಂಡು ಬರುತ್ತಾರೆ. ಎಸ್ಪಿ ರಿಷ್ಯಂತ್ ಸೇರಿದಂತೆ ಬಸವರಾಜ್ ಅವರ ಈ ಕಾರ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಇಂತಹ ಅಧಿಕಾರಿ ನಮ್ಮ ಜಿಲ್ಲೆಗೆ ಮತ್ತಷ್ಟು ಬರಲಿ ಎಂದು ಜನ ಆಶಿಸುತ್ತಿದ್ದಾರೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!