Part 2: ಐ ಪಿ ಎಸ್ ಅಧಿಕಾರಿಗಳ ಜೊತೆ ಅಕ್ರಮ ದಂಧೆಗಳ ಕಿಂಗ್ ಪಿನ್ ಇಮ್ರಾನ್ ಸಿದ್ದೀಕಿ ನಂಟು.!?

Exclusive Story by Garudavoice
ದಾವಣಗೆರೆ: ಆತನದ್ದು ವಿಲಾಸಿ ಜೀವನ. ಸದಾ ಓಡಾಡುತ್ತಿದ್ದದ್ದು ಮರ್ಸಿಡಿಸ್ ಬೆಂಜ್ ಕಾರಿನಲ್ಲೇ. ಚುನಾವಣೆಗೆ ಸ್ಪರ್ಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಕನಸು ಕಂಡಿದ್ದ ಇಮ್ರಾನ್ ಸಿದ್ದೀಕಿಗೆ 22 ದಿನವಾದರೂ ದಾವಣಗೆರೆ ಜೈಲಿನ ಖೈದಿಗಳ ಜತೆ ಸಹಪಂಕ್ತಿ ಬೋಜನ ತಪ್ಪಿಲ್ಲ.
ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೃಹ ಸಚಿವ ಸ್ಥಾನದಲ್ಲಿ ಇದ್ದ ಸಂದರ್ಬದಲ್ಲಿ ದಾವಣಗೆರೆ ಕೇಂದ್ರ ಸ್ಥಾನದ ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯಲ್ಲಿ ಮರಳು ದುರುಳ ಇಮ್ರಾನ್ ಸಿದ್ದೀಕ್ ಯ ( ಐ ಎಸ್/ ಭಾಯಿ) ಮರ್ಸಿಡಿಸ್ ಬೆಂಜ್ ಕಾರು ಭಾರಿ ಚರ್ಚೆಯಲ್ಲಿ ಇದ್ದಿದ್ದು 4 ಜಿಲ್ಲೆಯ ಪ್ರತಿಯೊಂದು ಠಾಣೆಯ ಗೊಡೆಗಳಲ್ಲಿ ಪಿಸು ಪಿಸು ಸದ್ದು ಕೆಳಿಸುತ್ತಿತ್ತು. ಬಹುತೇಕ ದಂಧೆಗಳ ಕಿಂಗ್ ಪಿನ್. ಈ ಹಿಂದೆ ಇದ್ದ ಪೂರ್ವ ವಲಯ ಐಜಿಪಿಗಳಿಬ್ಬರಿಗೆ ದಿನ, ವಾರ, ತಿಂಗಳ ಲೆಕ್ಕದಲ್ಲಿ ಹಫ್ತಾ ವಸೂಲಿ ಮಾಡಿಕೊಡ್ತಿದ್ದ. ಈ ನಾಲ್ಕು ಜಿಲ್ಲೆಗಳ ಮಟ್ಕಾ, ಇಸ್ಪೀಟ್, ಮರಳು, ಅನ್ನಭಾಗ್ಯ ಅಕ್ಕಿ ಸೇರಿದಂತೆ ಎಲ್ಲ ರೀತಿಯ ದಂಧೆಗಳಿಗೆ ಪೊಲೀಸ್ ಠಾಣೆವಾರು ಅನುಮತಿ ಕೊಡಿಸುತ್ತಿದ್ದ ಎನ್ನುವುದಕ್ಕೆ ಪೊಲೀಸ್ ವಲಯದಲ್ಲಿ ಭಾರಿ ಚರ್ಚೆಯಾಗಿತ್ತು.
ಹಿರಿಯ ಐಜಿಪಿಗಳ ಹೆಸರು ಹೇಳಿಕೊಂಡು ಪೂರ್ವ ವಲಯ ಐಜಿಪಿ ಕಾರ್ಯವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡುತ್ತಿದ್ದ. ಪ್ರಮುಖವಾಗಿ ಮಟ್ಕಾ, ಜೂಜಾಟ, ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ, ಕಲ್ಲು ಗಣಿಗಾರಿಕೆಯ ಕ್ವಾರಿಗಳು, ಕಲ್ಲುಪುಡಿ ಮಾಡುವ ಘಟಕಗಳು, ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡುವವರು ಹೀಗೆ ವಿವಿದ ರೀತಿಯ ಅಕ್ರಮ ಚಟುವಟಿಕೆ ನಡೆಸಿ ಅವರುಗಳಿಂದ ಪ್ರತಿ ದಿನ, ವಾರ, ತಿಂಗಳು ಲೆಕ್ಕದ ರೂಪದ ಹಫ್ತಾ ವಸೂಲಿ ಮಾಡಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನೀಡುತ್ತಿದ್ದ. ಯಾರು ಇವನ ಮಾತು ಕೇಳುವುದಿಲ್ಲವೋ ಅವರಿಗಳಿಗೆ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಕಿವಿ ಚುಚ್ಚಿ ಚಾಡಿ ಹೇಳುವುದು, ಅಮಾನತ್ತು ಶಿಕ್ಷೆ ಮಾಡಿಸುವುದು, ವರ್ಗಾವಣೆ, ಸುಳ್ಳು ಪ್ರಕರಣ ದಾಖಲಿಸುವುದು, ಸ್ಥಳೀಯ ಗುಂಡಾಗಳಿಂದ ಗಲಾಟೆ ಮಾಡಿಸುವುದು, ಸೇರಿದಂತೆ ಅನೇಕ ರೀತಿಯಲ್ಲಿ ಕಿರುಕುಳ ನೀಡೋದು ಮಾಡುತ್ತಿದ್ದ.
ಪ್ರಾಮಾಣಿಕವಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯವಾಗದೇ ಬೇರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡಿದ್ದರು, ಈತನಿಂದ ಪೋಲೀಸ್ ವ್ಯವಸ್ಥೆ ಹದಗೆಟ್ಟಿತ್ತು, ಈತ ಅವ್ಯವಹಾರ ನಡೆಸಿ ಅದರಲ್ಲಿ ಪೊಲೀಸ್ ಇಲಾಖೆಯ ಕೆಲ ಐಪಿಎಸ್ ಅಧಿಕಾರಿಗಳಿಗೆ ಪಾಲು ಕೊಡುವಷ್ಟು ಬೆಳೆದು ಬಿಟ್ಟಿದ್ದ. ಇದೀಗ ದಾವಣಗೆರೆ ಜೈಲಿನಲ್ಲಿರುವ ಖೈದಿಗಳ ಜೊತೆ ಸಹಫಂಕ್ತಿ ಮಾಡುವಂತೆ ದಾವಣಗೆರೆ ಎಸ್ ಪಿ ರಿಷ್ಯಂತ್ ಮಾಡಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ನಾಲ್ಕೂ ಜಿಲ್ಲೆಗಳಲ್ಲಿ ಇವನ ಹೆಸರು ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ರೀತಿಯ ಎಲ್ಲಾ ಚರ್ಚೆಗಳು ಸತ್ಯ ಎಂಬುದಕ್ಕೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ದುಬೈ ಪ್ರವಾಸದಿಂದ ಬಂದ ನಂತರ ವೈಟ್ ಕಲರ್ ಮರ್ಸಿಡಿಸ್ ಬೆಂಜ್ KA 09 MD 1600 ನಂಬರಿನ ಕಾರು ದಾವಣಗೆರೆ ಫೂರ್ವ ವಲಯ ಐಜಿಪಿ ವಸತಿ ನಿವಾಸದ ಬಳಿ ನಿಂತಿರುವುದು ನೋಡಿದ್ರೆ ಇಮ್ರಾನ್ ಸಿದ್ದೀಕಿಗೆ ಐಪಿಎಸ್ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಇದೆ ಎನ್ನುವ ಸಂಗತಿ ಸತ್ಯವಾಗಿದೆ.
ದಾವಣಗೆರೆ ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟಲ್ ಆವರಣದಲ್ಲಿ ಡಿ ವೈ ಎಸ್ ಪಿ ಜೊತೆ ಇದ್ದ PHOTO Show’s Everything..!
ಮುಂದುವರೆಯುವುದು….
garudavoice21@gmail.com 9740365719