ಪೀಣ್ಯ ಕೈಗಾರಿಕಾ ಸಂಘದಿಂದ ವ್ಯಾಕ್ಸಿನೇಷನ್ ಡ್ರೈವ್ : 5 ದಿನ, 4 ಸ್ಥಳಗಳು, 6,000 ಕಾರ್ಮಿಕರಿಗೆ ಲಸಿಕೆ

ಬೆಂಗಳೂರು: ಪೀಣ್ಯದಲ್ಲಿ ಕೆಲಸ ಮಾಡುವ 12 ಲಕ್ಷ ಕಾರ್ಮಿಕರನ್ನು ಕೋವಿಡ್ ವಾರಿಯರ್ಸ್ ಗಳಾಗಿ ಪರಿಗಣಿಸಿ ಹಾಗು ವ್ಯಾಕ್ಸಿನೇಷನ್ (ಲಸಿಕೆ)ಗೆ ಆದ್ಯತೆ ನೀಡಬೇಕಾಗಿ ಕರ್ನಾಟಕ ಸರಕಾರವನ್ನು  ಒತ್ತಾಯಿಸಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಪೀಣ್ಯಾ ಇಂಡಸ್ಟ್ರೀಸ್ ಕಾರ್ಮಿಕರಿಗೆ 5 ದಿನಗಳಲ್ಲಿ ಕನಿಷ್ಠ 6,000 ಕಾರ್ಮಿಕರನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಮೆಗಾ ಕೋವಿಡ್ ಲಸಿಕೆ ಅಭಿಯಾನವನ್ನು  ಜೂನ್ 5 ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪೀಣ್ಯ ಕೈಗಾರಿಕಾ ಸಂಘ  ಕ್ಯಾಂಪಸ್ ಆವರಣದಲ್ಲಿ ಆಯೋಜಿಸಲಾಗಿದೆ.

ಲಸಿಕೆ ಅಭಿಯಾನವನ್ನು   ಪೀಣ್ಯ ಇಂಡಸ್ಟ್ರಿಸ್ ಅಸೋಸಿಯೇಷನ್, ಮುಸ್ಲಿಂ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಲೇಬರ್ ನೆಟ್ ಜಂಟಿಯಾಗಿ ಆಯೋಜಿಸಿವೆ. ವ್ಯಾಕ್ಸಿನೇಷನ್ ಡ್ರೈವ್ ಉದ್ಘಾಟಿಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪಿಐಎ ಅಧ್ಯಕ್ಷ ಸಿ. ಪ್ರಕಾಶ್, “ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ 12 ಲಕ್ಷ ಕಾರ್ಮಿಕರನ್ನು ಕೋವಿಡ್ ಯೋಧರಂತೆ ಪರಿಗಣಿಸಿ ಲಸಿಕೆ ನೀಡುವಂತೆ ಕೋರಿದ್ದೇವೆ. ಹಾಗು ಈ ಲಸಿಕಾ ಅಭಿಯಾನಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸಿದ ಮುಸ್ಲಿಂ ಕೈಗಾರಿಕೆಗಳ ಸಂಘ ಮತ್ತು ಲ್ಯಾಬೌಟ್‌ನೆಟ್‌ಗೆ ನಾವು ಅಭಾರಿಯಾಗಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!