ಹೃದಯಾಘಾತದಿಂದ ಎ ಎಸ್ ಐ ನಿಧನ: ಸಂತಾಪ ಸೂಚಿಸಿದ ಪೊಲೀಸ್ ಇಲಾಖೆ

ದಾವಣಗೆರೆ: ಹೃದಯಾಘಾತದಿಂದ ಎಎಸ್ಐ ಸುರೇಶ್ ನಿಧನ ಹೊಂದಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ಸುರೇಶ್ (58) ಸಾವನ್ನಪ್ಪಿದ ಎಎಸ್ಐ ಆಗಿದ್ದು, ತಮ್ಮ ಸ್ವಗ್ರಾಮವಾದ ಜಗಳೂರು ಗೊಲ್ಲರ ಹಟ್ಟಿಗೆ ರಜೆ ಮೇಲೆ ತೆರಳಿದ್ದರು, ಬೆಳಗ್ಗೆ 12 ಗಂಟೆ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಜಗಳೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.. ಆದರೆ ತಾಲ್ಲೂಕು ಆಸ್ಪತ್ರೆಯಲ್ಲಿ ಇಸಿಜಿ ಮಿಷನ್ ಕೆಟ್ಟುಹೋಗಿದ್ದು, ಅಲ್ಲದೆ ಎದೆ ನೋವು ಹೆಚ್ಚಾದ ಪರಿಣಾಮ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.. ಅಂಬ್ಯೂಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ಎಎಸ್ಐ ಸುರೇಶ್ ಹೆಂಡತಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.. ಸುರೇಶ್ ಅಗಲಿಕೆಗೆ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದ್ದು, ನಾಳೆ(15/02/2022) ರ ಬೆಳಗ್ಗೆ 10 ಗಂಟೆಗೆ ಜಗಳೂರು ಪಟ್ಟಣದ ಗೊಲ್ಲರಹಟ್ಟಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಭವರ್ಗ ತಿಳಿಸಿದೆ.