Politician: ಯುವ ರಾಜಕಾರಣಿ ಹುಲ್ಲುಮನೆ ಗಣೇಶ್ ಜನ್ಮದಿನಾಚರಣೆ

ದಾವಣಗೆರೆ: (Politician) ಹುಲ್ಲುಮನೆ ಗಣೇಶ್ ಗೆಳೆಯರ ಬಳಗದ ವತಿಯಿಂದ ದಾವಣಗೆರೆಯ ಬಾಡಾ ಕ್ರಾಸ್ನಲ್ಲಿರುವ ಶ್ರೀ ವೀರೇಶ್ವರ ಅಂಧ ಮಕ್ಕಳ ಪುಣ್ಯಾಶ್ರಮದಲ್ಲಿ ಯುವರಾಜಕಾರಣಿ ಮತ್ತು ಸಮಾಜಸೇವಕ ಹುಲ್ಲುಮನಿ ಗಣೇಶ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಉಪಹಾರ ನೀಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹುಲ್ಲುಮನೆ ಗಣೇಶ್ ಗೆಳೆಯರ ಬಳಗದ ಪಿ.ಬಿ. ಅಂಜುಕುಮಾರ್, ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕರಾದ ಡಿ.ಆರ್. ಅರವಿಂದಾಕ್ಷ, ಕರ್ನಾಟಕ ರಕ್ಷಣಾ ವೇದಿಕೆಯ ಗೋಪಾಲ್ ದೇವರಮನೆ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ದಾ.ಹ. ಶಿವಕುಮಾರ್, ಆರ್. ಮೋಹನ್ ಹಾಗೂ ಪುಣ್ಯಾಶ್ರಮದ ಅಮರಯ್ಯ ಶಾಸ್ತ್ರೀ ಸೇರಿದಂತೆ ಹಲವಾರು ಅಂಧಮಕ್ಕಳು ಉಪಸ್ಥಿತರಿದ್ದರು.