ಗೌರಿ ಲಂಕೇಶ್ ಹಂತಕರಿಗೆ ಎಡೆಮುರಿ ಕಟ್ಟಿದ್ದ ಅನಿಲ್ಗೆ ರಾಷ್ಟ್ರಪತಿ ಸೇವಾಪದಕ

ದಾವಣಗೆರೆ: ಪತ್ರಕರ್ತೆ ಗೌರಿ ಹಾಗೂ ಚಿಂತಕ ಕಲ್ಬುರ್ಗಿ ಕೊಲೆ ಪ್ರಕರಣ ಬೇದಿಸಿದ ಪ್ರಮುಖ ತಂಡದ ಸದಸ್ಯರಾಗಿದ್ದ ದಾವಣಗೆರೆಯ ಪೊಲೀಸ್ ವೃತ್ತ ನಿರೀಕ್ಷಕ ಆರ್.ಪಿ.ಅನಿಲ್ ಸುದೀರ್ಘ ಸೇವೆ ಸಲ್ಲಿಸಿ ವಿಶಿಷ್ಟ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪದಕ ತಾನಾಗಿಯೇ ಹುಡುಕಿಕೊಂಡು ಬಂದಿದೆ.
ಸಿಪಿಐ ಅನಿಲ್ ಪ್ರಸ್ತುತ ದಾವಣಗೆರೆ ಸಂಚಾರ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ನಾನಾ ಪ್ರಕರಣಗಳನ್ನು ಭೇದಿಸುವ ಹಿನ್ನೆಲೆಯಲ್ಲಿ 62 ಪ್ರಕರಣಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ, 31 ಕೇಸ್ಗೆ 1ಲಕ್ಷದ 33ಸಾವಿರದ 450 ರೂ.ಗಳು ರೀವಾರ್ಡ್ ಸಿಕ್ಕಿದೆ. ಬಿಕಾಂ ಓದಿರುವ ಅನಿಲ್ ತನ್ನ ತಂದೆಯಂತೆ ಪೊಲೀಸ್ ಇನ್ಸೆಪೆಕ್ಟರ್ ಆಗಿ 2003ನೇ ಸಾಲಿನಲ್ಲಿ ಪಿಎಸ್ಐ ಹುದ್ದೆಗೆ ನೇಮಕಗೊಂಡರು. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿ ದಾವಣಗೆರೆ ಜಿಲ್ಲೆಯ ಜಗಳೂರು, ಕೆಟಿಜೆ ನಗರ , ತುಮಕೂರು, ತುಮಕೂರು ಜಿಲ್ಲೆಯ ಪಶ್ಚಿಮ ಸಂಚಾರ, ತುಮಕೂರು ಟೌನ್, ಪಾವಗಡ, ತುಮಕೂರು ಸಂಚಾರ ಪೂರ್ವ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಪ್ರಶಂಸನೀಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
2012ರಲ್ಲಿ ಸಿಪಿಐ ಆಗಿ ಮುಂಬಡ್ತಿ ಹೊಂದಿದ್ದು, ಸಿಪಿಐ ಆದ ಮೇಲೆ ಲೋಕಾಯುಕ್ತ ರಾಮನಗರ , ಬನಶಂಕರಿ ಸಂಚಾರ ಠಾಣೆ, ಸಂಪಿಗೆಹಳ್ಳಿ ಶ್ರೀರಾಂಪುರ, ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಬೆಂಗಳೂರು ನಗರದ ಸಿಸಿಬಿಯಲ್ಲಿ ಕ್ಲಿಷ್ಟಕರ್ ಕೇಸ್ಗಳನ್ನು ಪತ್ತೆ ಮಾಡಿದ್ದಾರೆ.

ಎಸ್ಐಟಿ ತಂಡದಲ್ಲಿದ್ದಾಗ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ 50 ಸಾವಿರ, ಕಲ್ಬುರ್ಗಿ ಕೇಸ್ ಪ್ರಕರಣ ಬೇದಿಸಿದ ಹಿನ್ನೆಲೆಯಲ್ಲಿ 50 ಸಾವಿರ ರೂ. ರೀವಾರ್ಡ್ಸ್ ನ್ನು ಸರಕಾರ ನೀಡಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2005 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೂರು ಜನ ಅಂತರಾಜ್ಯ ಡಕಾಯಿತರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2007 ರಲ್ಲಿ ಕೆಟಿಜೆ ನಗರದಲ್ಲಿ ಮನೆಕಳ್ಳತನವಾದ ವೇಳೆ ಪ್ರಕರಣ ಭೇದಿಸಿ 2 ಲಕ್ಷದ 20 ಸಾವಿರ ರೂಪಾಯಿ ಹಾಗೂ 4 ಲಕ್ಷದ 67 ಸಾವಿರದ ಬಂಗಾರ, ಒಡವೆಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದರು. ಪಾವಗಡದ ಮಣಪ್ಪುರಂ ಗೋಲ್ಟ್ ಲೋನ್ನಲ್ಲಿ 17 ಕೆಜಿ ಬಂಗಾರದ ಆಭರಣವನ್ನು 8 ಗಂಟೆಯಲ್ಲಿ ಆರೋಪಿ ಹಿಡಿದು ವಶಪಡಿಸಿಕೊಂಡಿದ್ದರು. 5 ಸಾವಿರ ರೂ. ರೀವಾರ್ಡ್, ಪಾವಗಡದ ಶನಿ ಮಹಾತ್ಮ ಟೆಂಪಲ್ನಲ್ಲಿ ಶನಿ ಮಹಾತ್ಮದ 875 ಗ್ರಾಂ ಚಿನ್ನದ ವಿಗ್ರಹ ಹಾಗೂ 175 ಗ್ರಾಂ ಕಿರೀಟ ಕಳ್ಳತನವಾಗಿದ್ದನ್ನು 3 ಗಂಟೆಗಳಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಈ ಕೇಸ್ಗಳನ್ನು ಪತ್ತೆ ಮಾಡಿದ್ದಕ್ಕೆ 2012ನೇ ಸಾಲಿನ ಸಿಎಂ ಪದಕ ಪಡೆದರು. 2012ನೇ ವರ್ಷದಲ್ಲಿ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜಿಲ್ಲಾ ಲೋಕಾಯುಕ್ತದಲ್ಲಿದ್ದು, ಮಾಗಡಿ ಲೋಕೋಪಯೋಗಿ ವಿಭಾಗ ಇಲಾಖೆಯಲ್ಲಿ ರಸ್ತೆ ಕಾಮಗಾರಿಗಳಲ್ಲಿ 600 ಕೋಟಿ ಅವ್ಯವಹಾರ ನಡೆದಿದ್ದನ್ನು ಪ್ರಾಥಮಿಕ ತನಿಖೆ ನಡೆಸಿ ಆರೋಪಿತರ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದರು. 2016 ನೇ ಸಾಲಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಬೆಂಗಳೂರಿನ ಶ್ರೀ ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಿಯಂತ್ರಣ. ಬೆಂಗಳೂರು ಪಾಲಿಕೆ ವಾರ್ಡ್ 96 ಪಾಲಿಕೆ ಸದಸ್ಯ ಶಿವಪ್ರಕಾಶ್ ಕಿಡ್ನಾಪ್ ಪ್ರಕರಣ ಬೇಧಿಸಿದ್ದರು. ಸಿಸಿಬಿ ಘಟಕ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹರಿಯಾಣ ರಾಜ್ಯದ ಬಿವಾನಿ ಜಿಲ್ಲೆಯ ಗ್ಯಾಂಗ್ಸ್ಟಾರ್ ದೀಪಕ್ ಆಲಿಯಾಸ್ ಟೀನು ಎಂಬಾತನನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದು ಹರಿಯಾಣ ಭಿವಾನಿಯ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿ ರವೀಂದ್ರ ಕುಮಾರ್ ವಶಕ್ಕೆ ನೀಡಿದ್ದರು. ಅಲ್ಲದೇ ಬೆಂಗಳೂರಿನ ಪಾಲಿಕೆಯಿಂದ 2019ನೇ ಸಾಲಿನಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದರು. ಒಟ್ಟಾರೆ ಸಿಪಿಐ ಅನಿಲ್ ಅತ್ಯುತ್ತಮ ಅಧಿಕಾರಿಯಾಗಿದ್ದು, ತಮ್ಮ ಸೇವಾವಧಿಯಲ್ಲಿ ಅತಿ ಹೆಚ್ಚಿನ ಕಾರ್ಯತತ್ಪರತೆ, ಅತೀವ ನಿಷ್ಠೆ ಮತ್ತು ಕರ್ತವ್ಯದಲ್ಲಿ ದಕ್ಷತೆ ಪ್ರದರ್ಶನ, ಕ್ಲಿಷ್ಟರ್ಕ ಸನ್ನಿವೇಶಗಳನ್ನು ನಿಭಾಯಿಸುವ ಜಾಣ್ಮೆ , ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ, ನಾಯಕತ್ವ, ಅಪರಾಧ ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷ ಅಧಿಕಾರಿ ಅನಿಲ್ಗೆ 2023ನೇ ಸಾಲಿನ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ನೀಡಲಾಗಿದೆ.

ದಾವಣಗೆರೆಯ ಸಂಚಾರ ಪೊಲೀಸ್ ಠಾಣೆ ಸಿಪಿಐಗೆ ಸಿಎಂ ಪದಕ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಡಿಜಿ ಪ್ರವೀಣ್ ಸೂದ್ ರಾಷ್ಟ್ರಪತಿ ಸೇವಾಪದಕ ವಿತರಣೆ ಮಾಡಿದ್ರು ಈ ಸಂದರ್ಭದಲ್ಲಿ ಅನಿಲ್ ಕುಟುಂಬ ಉಪಸ್ಥಿತಿ ಇದ್ದರು.

 
                         
                       
                       
                       
                       
                      