ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀಕ್ಷಕರುಗಳಿಗೆ ಬಡ್ತಿ ಭಾಗ್ಯ! ಯಾವ್ಯಾವ ಜಿಲ್ಲೆ ಅಧೀಕ್ಷಕರುಗಳು ಬಡ್ತಿ ಹೊಂದಿದ್ದಾರೆ ಗೊತ್ತಾ?

education department

ವಿದ್ಯಾನಾಯ್ಕ್ ಅರೇಹಳ್ಳಿ

ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ಪತ್ರಾಂಕಿತ ವ್ಯವಸ್ಥಾಪಕರ, ಸಹಾಯಕ ನಿರ್ದೇಶಕರು (ಬೋಧಕೇತರ) ಹುದ್ದೆಗಳಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಅಧೀಕ್ಷಕರ ಹುದ್ದೆಯಿಂದ ಬಡ್ತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮೇ.17ರ 2022ರಂದು ನಡೆದ ಇಲಾಖಾ ಮುಂಬಡ್ತಿ ಸಭೆಯಲ್ಲಿ ಪ್ರಸ್ತುತ ಲಭ್ಯವಿರುವ 26 ಖಾಲಿ ಹುದ್ದೆಗಳಿಗೆ ನಿಯಮಾನುಸಾರ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಲು ತೀರ್ಮಾನಿಸಲಾಗಿತ್ತು.. ಈ ಕೆಳಗಿನ ಪಟ್ಟಿಯಲ್ಲಿನ ಅಧೀಕ್ಷಕರುಗಳಿಗೆ ಮೇ.26ರ 2022ರಂದು ಬೆಳಿಗ್ಗೆ 10.30ಕ್ಕೆ ಶಿಕ್ಷಕರ ಕಲ್ಯಾಣ ನಿಧಿ ಕಚೇರಿ, ಕೆ.ಜಿ. ರಸ್ತೆ, ಬೆಂಗಳೂರು ಇಲ್ಲಿ ಕೌನ್ಸಲಿಂಗ್ ನಡೆಸಲಾಗುತ್ತದೆ. ನಿಗದಿತ ದಿನಾಂಕದ0ದು ಸಕಾಲಕ್ಕೆ ಹಾಜರಾಗಬೇಕು. ಪ್ರಥಮವಾಗಿ ಇಲಾಖೆಗೆ ನೇಮಕಗೊಂಡ ನೇಮಕಾತಿ ಆದೇಶ ಪತ್ರ, ಖಾಯಂ ಪೂರ್ವ ಸೇವಾವಧಿ ಘೋಷಣೆಯ ಆದೇಶ, ಪ್ರದಸ ಮತ್ತು ಅಧೀಕ್ಷಕರ ವೃಂದಕ್ಕೆ ಬಡ್ತಿ ಹೊಂದಿರುವ ಆದೇಶ ಪ್ರತಿ, ಕ್ರಿಮಿನಲ್/ಸಿವಿಲ್ ಮತ್ತು ಇಲಾಖೆ ವಿಚಾರಣೆ ಕುರಿತು ಕಚೇರಿ ಮುಖ್ಯಸ್ಥರಿಂದ ಧೃಢೀಕರಣ ಪತ್ರ, ಇವುಗಳ ಮೂಲ ದಾಖಲೆಗಳು ಮತ್ತು ಅದರ ಒಂದು ಪ್ರತಿಯನ್ನು ಧೃಢೀಕರಿಸಿಕೊಂಡು ತರುವಂತೆ ಸೂಚಿಸಲಾಗಿದೆ.

ಬೆಂಗಳೂರು, ಉಡುಪಿ, ಚಿತ್ರದುರ್ಗ, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮಧುಗಿರಿ ಶೈಕ್ಷಣಿಕ ಜಿಲ್ಲೆ, ದಾವಣಗೆರೆ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳ ಅಧೀಕ್ಷಕರುಗಳು ಬಡ್ತಿ ಹೊಂದಿದ್ದಾರೆ. ದಾವಣಗೆರೆ ಜಿಲ್ಲೆಯ ಐವರು ಅಧೀಕ್ಷಕರುಗಳು ಬಡ್ತಿ ಹೊಂದಿದ್ದಾರೆ.

ಬಡ್ತಿ ಹೊಂದಿದ ಅಧೀಕ್ಷಕರುಗಳು?:
* ಡಿ.ಟಿ. ಮೀನಾಕುಮಾರಿ, ಅಧೀಕ್ಷಕರು, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ, ಉತ್ತರ ವಲಯ-3 ಬೆಂಗಳೂರು.

* ಎಸ್.ಪಿ. ಪ್ರಸನ್ನ, ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ.
* ಜಿ.ಎಸ್. ಸಿದ್ದೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ.
* ಹೆಚ್.ಕೆ. ಲತಾ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉತ್ತರ ವಲಯ, ಮಂಡ್ಯ.
* ಎಚ್. ಪ್ರಕಾಶ್ ಅಧೀಕ್ಷಕರು, ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಜಿಲ್ಲೆ
* ಎಸ್.ಆರ್. ರವಿಶಂಕರ್ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ
* ಟಿ.ಎಂ. ಸತೀಶ್ಚಂದ್ರ ಅಧೀಕ್ಷಕರು, ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ,
* ಎಲ್. ನಿಂಗಾನಾಯ್ಕ, ಅಧೀಕ್ಷಕರು, ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಮಗಳೂರು ಜಿಲ್ಲೆ.
* ಎ.ಸಿ. ಶಿವಲಿಂಗಯ್ಯ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ,ಕೊರಟಗೆರೆ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ.
* ಬಿ.ಸಿ.ಈರಯ್ಯ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಅರಕಲಗೂಡು ಹಾಸನ ಜಿಲ್ಲೆ.
* ಬಿ.ಆರ್. ಮಲ್ಲಿಕಾರ್ಜುನಸ್ವಾಮಿ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
* ಬಿ.ಎನ್. ಶೋಭ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ.
* ಬಿ.ವಿ.ಗಿರಿಜಮ್ಮ, ಅಧೀಕ್ಷಕರು, ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.
* ಕೆ.ಎನ್. ತಾಂಡವಮೂರ್ತಿ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕೆ.ಆರ್. ನಗರ, ಮೈಸೂರು ಜಿಲ್ಲೆ.
* ಕೆ. ನಾಗೇಶ್ ಕುಮಾರ್ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉತ್ತರ ವಲಯ-1 ರಾಜಾಜಿನಗರ, ಬೆಂಗಳೂರು.
* ಎಂ.ಸಿ. ರಾಮಚಂದ್ರ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಜಗಳೂರು, ದಾವಣಗೆರೆ ಜಿಲ್ಲೆ.
* ಸುನಂದರಾಣಿ ಎನ್. ಅಧೀಕ್ಷಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು.
* ಎ0. ದಿನೇಶ್ ಭಂಡಾರ್‌ಕರ್ ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ.
*ಸೈಯದ್ ಅಫಾಕ್ ಅಹ್ಮದ್ ಅಧೀಕ್ಷಕರು, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗ.
*ಮಹಮ್ಮದ್ ಅಸ್ಲಾಂ, ಅಧೀಕ್ಷಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ದಾವಣಗೆರೆ.
* ಎನ್.ಜಿ. ಮಲ್ಲಿಕಾರ್ಜುನಸ್ವಾಮಿ ಅಧೀಕ್ಷಕರು, ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ಜಿಲ್ಲೆ, ದಾವಣಗೆರೆ.
* ಚಂದ್ರಶೇಖರ್ ಎನ್.ಎಸ್. ಅಧೀಕ್ಷಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ, ಬೆಂಗಳೂರು.
* ಟಿ.ಎಸ್.ರಮೇಶ್, ಅಧೀಕ್ಷಕರು, ಉಪ ನಿರ್ದೇಶಕರ ಕಛೇರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.
* ಜಿ.ಆರ್. ದೇವೇಂದ್ರಪ್ಪ, ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೀರೂರು, ಚಿಕ್ಕಮಗಳೂರು ಜಿಲ್ಲೆ.
* ಟಿ. ಉಮೇಶ್‌ಕುಮಾರ್, ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹೊನ್ನಾಳಿ ತಾಲೂಕು, ದಾವಣಗೆರೆ ಜಿಲ್ಲೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!