ಜಮ್ಮಾಪುರ ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ!

WhatsApp Image 2022-03-17 at 14.45.55

ದಾವಣಗೆರೆ : ತಾಲೂಕಿನ ಜಮ್ಮಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಇಂದು ಕರ್ನಾಟಕ ರತ್ನ ಡಾ. ಪುನೀತ್‌ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬವನ್ನು ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಕೇಕ್ ಕತ್ತರಿಸುವ ಮುಖಾಂತರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಎನ್. ವೀರೇಶ್‌ನಾಯ್ಕ ನೀತಿಗೆರೆ, ಎಸ್. ನಂಜನಾಯ್ಕ ಕಬ್ಬಳ, ಬಸವರಾಜನಾಯ್ಕ, ಅರುಣ್ ಎನ್. ರಾಥೋಡ್, ಮಂಜುನಾಯ್ಕ ನಾಗರಕಟ್ಟೆ, ರವಿ ಕೆ.ಆರ್, ಬಸವರಾಜ್ ಬಿ., ಶಾಲೆಯ ಶಿಕ್ಷಕರುಗಳು ಹಾಗೂ ಗೆಳೆಯರೆಲ್ಲರೂ ಭಾಗವಹಿಸಿದ್ದರು.

ಈ ಶುಭ ಸಂದರ್ಭದ ನೆನಪಿಗೋಸ್ಕರ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಕೇವಲ ತಮ್ಮ ಗ್ರಾಮಕ್ಕಷ್ಟೆ ಅಲ್ಲದೆ ಸುತ್ತಮುತ್ತಲಿನ ಎಲ್ಲಾ ಗ್ರಾಮದ ವಿಧ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಡಿಜಿಟಲ್ ಗ್ರಂಥಾಲಯವನ್ನು ತಮ್ಮದೇ ಸ್ವಂತ ನೆರವಿ ನೊಂದಿಗೆ ನಿರ್ಮಿಸಲು ಮುಂದಾದರು. ಕಟ್ಟಡದ ಗುದ್ದಲಿ ಪೂಜೆಯನ್ನು ಅತಿಥಿಗಳಾದ ವೀರೇಶ್ ನಾಯಕ್ ಹಾಗೂ ನಂಜನಾಯ್ಕ ನೆರವೇರಿಸಿಕೊಟ್ಟರು. ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.


ನಟ ಪುನೀತ್ ರಾಜ್‌ಕುಮಾರ್ ಅವರ ನೆನಪು ಕೇವಲ ಒಂದು ದಿನದ ಹುಟ್ಟುಹಬ್ಬಕ್ಕೆ ಮಾತ್ರ ಸೀಮಿತವಾಗದೆ, ಅವರ ನೆನಪು ನಮ್ಮ ಮನದಲ್ಲಿ ಚಿರಕಾಲ ಅಚ್ಚಳಿಯದೆ ಉಳಿಯಬೇಕು ಎಂಬ ಕಾರಣಕ್ಕೆ ಸ್ಪರ್ಧಾತ್ಮಕ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪನೆಯನ್ನು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ಎಲ್ಲಾ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.
ಅರುಣ್ ಎನ್. ರಾಥೋಡ್,
ರಾಜ್ಯ ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!