ವಿಧವೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ರೆಡ್ ಕ್ರಾಸ್ ಸಂಸ್ಥೆ – ಮಾಹಿತಿಗಾಗಿ
ಸಂಪರ್ಕಿಸಿ

ದಾವಣಗೆರೆ: ಭಾರತೀಯ ರೆಡ ಕ್ರಾಸ್ ಸಂಸ್ಥೆ, ದಾವಣಗೆರೆ ಜಿಲ್ಲಾ ಶಾಖೆಯ ಛೇರ್ಮನರಾದ ಡಾ : ಎ. ಎಮ್. ಶಿವಕುಮಾರ್ ಅವರ ಮಾರ್ಗದರ್ಶನ ಮೇರೆಗೆ ಕೊರೊನಾ ಮಹಾಮಾರಿ ಸೋಂಕಿನಿಂದ ಬಹಳಷ್ಟು ಪರಿವಾರಗಳು ತಮ್ಮ ದುಡಿಯುವ ವ್ಯಕ್ತಿಯನ್ನೆ ಕಳೆದುಕೊಂಡಿದ್ದಾರೆ ಅಂತಹ ವಿಧವೆಯರಿಗಾಗಿ ನಮ್ಮ ಸಂಸ್ಥೆಯಿಂದ ಅವರಿಗೆ ಟೈಲರಿಂಗ ತರಬೇತಿ ನೀಡಿ ಜೊತೆಗೆ ಉಚಿತ ಸಿಂಗರ್ ( ಟೈಲರಿಂಗ್ ) ಎಂಬ್ರಾಯಿಡರಿ ಹೊಲಿಗೆ ಯಂತ್ರ ಕೊಟ್ಟು ಸ್ವಯಂ ಉದ್ಯೋಗ ಮಾಡಿಕೊಂಡು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ನಮ್ಮ ಸಂಸ್ಥೆಯಿಂದ ಸಹಾಯ ಮಾಡುತ್ತೆವೆ. ಅವಶ್ಯಕತೆಯಿರುವವರು ಅಗತ್ಯ ದಾಖಲೆಗಳನ್ನು ದಾವಣಗೆರೆ ನಗರದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಒದಗಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಿ.ಆರ್.ಓ. ಶ್ರೀಕಾಂತ ಬಗರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
* ನರೇಂದ್ರ ಪ್ರಕಾಶ್ : +919880144567.
* ಶ್ರೀಕಾಂತ ಬಗರೆ : 9886393695.