ಮೇ.29ರಂದು ಕೆಂಪು ಕಾಂಡದ ಹೂ ಲೋಕಾರ್ಪಣೆ

kempu kandada huu

ದಾವಣಗೆರೆ: ಪಾಪುಗುರು ಅವರ ಸಂಪಾದಕತ್ವದಲ್ಲಿ ಕಾರ್ಮಿಕರ ಕ್ಷೇತ್ರದಲ್ಲಿ ಗಮನಾರ್ಹ ಹೋರಾಟ ಮಾಡಿದ ಕಾಂ. ಹೆಚ್.ಕೆ. ರಾಮಚಂದ್ರಪ್ಪನವರ ಸಂಸ್ಕರಣ ಗ್ರಂಥ “ಕೆಂಪು ಕಾಂಡದ ಹೂ” ಲೋಕಾರ್ಪಣೆ ಕಾರ್ಯಕ್ರಮ ಮೇ.29ರಂದು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸಂಸ್ಕರಣ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಂಜಾನ್ ದರ್ಗಾ, ಹಿರಿಯ ಸಾಹಿತಿಗಳು, ಆರ್.ಜಿ. ಹಳ್ಳಿ ನಾಗರಾಜ, ಹಿರಿಯ ಸಾಹಿತಿಗಳು, ನಗರವಾಣಿ ಸಂಪಾದಕ ಬಿ.ಎನ್. ಮಲ್ಲೇಶ್ ಭಾಗವಹಿಸಲಿದ್ದಾರೆ ಎಂದು ಹೆಚ್‌ಕೆಆರ್ ಕುಟುಂಬ ವರ್ಗದವರು ತಿಳಿಸಿದ್ದಾರೆ.

 

garudavoice21@gmal.com 9740365719

Leave a Reply

Your email address will not be published. Required fields are marked *

error: Content is protected !!