ರೇಖಾರಾಣಿ ಸಿದ್ದಗಂಗಾ ಶಿವಣ್ಣರ ಭರ್ಜರಿ ಪ್ರಚಾರ

ದಾವಣಗೆರೆ: ಮಹಾನಗರ ಪಾಲಿಕೆ ಉಪಚುನಾವಣೆಯ ಪ್ರಚಾರದಲ್ಲಿ 37ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ರೇಖಾರಾಣಿ ಸಿದ್ದಗಂಗಾ ಶಿವಣ್ಣರವರು ಕೆಟಿಜೆ ನಗರದ ಶ್ಯಾವಿಗೆ ಓಣಿ ಸುತ್ತಮುತ್ತ ಭರ್ಜರಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಎಲ್ಲಾ ಕಡೆ ಮಹಿಳೆಯರು ಹಾರ ಹಾಕಿ ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು ಶುಭ ಹಾರೈಸುತ್ತಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾದ ಡಿ. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ, ಉತ್ತರವಲಯ ಬ್ಲಾಕ್ ಅಧ್ಯಕ್ಷರಾದ ಕೆ.ಜಿ. ಶಿವಕುಮಾರ್, ಮುಖಂಡರಾದ ಮುದೇಗೌಡ್ರ ಗಿರೀಶ್, ಅನಿತಾಬಾಯಿ, ಡೋಲಿ ಚಂದ್ರು, ನಿರುಪಮಾ ಸತ್ಯನಾರಾಯಣ, ಬೀಡಾ ಪ್ರಕಾಶ್, ತಿಪ್ಪೇಶ್, ಕುಮಾರ್, ಮೂರ್ತಿ, ಚಂದ್ರು, ಪರಮೇಶಿ, ಬಸಣ್ಣ, ಕುಮಾರ್, ನಾಗೇಂದ್ರ ರಾವ್, ಕವಿತಾ, ಭಾಸ್ಕರ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.