ಸೊಂಕಿತರಿಗೆ ದೈರ್ಯ ತುಂಬಲು ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ: ಶಾಸಕರ ನೃತ್ಯ ಹೇಗಿತ್ತು ಅಂತೀರಾ ಸುದ್ದಿಯ ಜೊತೆ ವಿಡಿಯೋ ನೋಡಿ

Renukacharya dance with covid patients in honnali

ದಾವಣಗೆರೆ: ಕೋವಿಡ್ ಕೇರ್ ಸೆಂಟರ್ ನಲ್ಲಿ 102 ಜನ ಸೋಂಕಿತರಿದ್ದು ಸೋಂಕಿತರಿಗಾಗೀ ಹಮ್ಮಿಕೊಂಡಿರುವ ರಸ ಮಂಜರಿ ಕಾರ್ಯಕ್ರಮವನ್ನ ಶಿವಮೊಗ್ಗದ ಗಾಯಕರು ಹಾಡಿದ ಹಾಡಿಗೆ ಶಾಸಕರು ಭರ್ಜರಿ ಸ್ಟೇಪ್ ಜೊತೆಗೆ ಚಿತ್ರ ಗೀತೆಗಳನ್ನು ಕೆಳುತ್ತಾ ನೃತ್ಯ ಮಾಡುತ್ತಾ ಸೊಂಕಿತರು ಸಂಭ್ರಮಿಸಿದ್ದಾರೆ.

ಹೊನ್ನಾಳಿ ಸರ್ಕಲ್ ಇನ್ಸ್‌ಪೆಕ್ಟರ್ ದೇವರಾಜ್ ಕೊವಿಡ್ ಸೊಂಕಿತರಿಗೆ ದೈರ್ಯ ತುಂಬಲು ಹಾಡನ್ನ ಹಾಡಿ ರಂಜಿಸಿದರು

ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತ ಬಂದುಗಳಿಗಾಗೀ ಶಾಸಕ ಎಂ.ಪಿ ರೇಣುಕಾಚಾರ್ಯ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ ನಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ರಾಜಕುಮಾರ ಚಿತ್ರದ ಹಾಡು ಹೇಳುವ ಮೂಲಕ ಸೋಂಕಿತರನ್ನು ಸಿಪಿಐ ದೇವರಾಜ್ ರಂಜಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಹುಮ್ಮಸ್ಸು ತುಂಬಲು ರೇಣುಕಾಚಾರ್ಯ ಸ್ಟೇಪ್ ಹಾಕಿ ಮನರಂಜನೆ ನೀಡಿದ್ರು. ಶಾಸಕರೊಂದಿಗೆ ಸಾಮಾಜಿಕ ಅಂತರದಲ್ಲಿ ಸೋಂಕಿತರು ಕೂಡ ಸಕತ್ ಸ್ಟೆಪ್ ಹಾಕಿದ್ರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಸಖತ್ ಸ್ಟೇಪ್. ಸೋಂಕಿತರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಬರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೂಡಿಸಿದ್ದಾರೆ. ಶಾಸಕರ ಡ್ಯಾನ್ಸ್ ಗೆ ಕೊವಿಡ್ ಸೊಂಕಿತರು ಫಿದಾ ಆಗಿದ್ದಾರೆ.

ಕೋವಿಡ್ ಕೇರ್ ಸೆಂಟರ್ ನಲ್ಲಿ 102 ಜನ ಸೋಂಕಿತರಿದ್ದು ಸೋಂಕಿತರಿಗಾಗೀ ಹಮ್ಮಿಕೊಂಡಿರುವ ರಸ ಮಂಜರಿ ಕಾರ್ಯಕ್ರಮವನ್ನ ಶಿವಮೊಗ್ಗದ ಗಾಯಕರು ಹಾಡಿದ ಹಾಡಿಗೆ ಶಾಸಕರ ಭರ್ಜರಿ ಸ್ಟೇಪ್ ಕೂಡ ಇತ್ತು. ಚಿತ್ರ ಗೀತೆಗಳನ್ನು ಕೆಳುತ್ತಾ ನೃತ್ಯ ಮಾಡುತ್ತಾ ಸೊಂಕಿತರು ಸಂಭ್ರಮಿಸಿದ್ದಾರೆ

ಸೋಂಕಿತರಿಗೆ ಭಯದ ವಾತಾವರಣದಿಂದ ಮುಕ್ತಗೊಳಿಸಲು ವಿಶೇಷವಾಗಿ ವಿನೂತನ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!