ರೇಣುಕಾಚಾರ್ಯರನ್ನು ವೇದಿಕೆಯಿಂದ ಕೆಳಗಿಸಿದ ಗ್ರಾಮಸ್ಥರು.! ಕಾರಣ ಏನು ಗೊತ್ತಾ.!?

Renukacharya was brought down from the platform by the villagers. Do you know the reason?

ನ್ಯಾಮತಿ : ಶಾಸಕ ರೇಣುಕಾಚಾರ್ಯ ಅಂದ್ರೆ ಸಾಕು ಸದಾ ಸುದ್ದಿಯಲ್ಲಿರುತ್ತಾರೆ..ಅವರ ಹಿಂದೆ ಮುಂದೆ ಜನಗಳೇ ತುಂಬಿ ತುಳುಕುತ್ತಿರುತ್ತಾರೆ…ಅಲ್ಲದೇ ಜನಗಳು ಹೊನ್ನಾಳಿ ಹುಲಿ, ಹೊನ್ನಾಳಿ ಹೋರಿ ಎಂದು ಜೈ ಕಾರ ಹಾಕುವುದು ಕಾಮನ್..ಆದರೀಗ ಅದೇ ಜನ ಶಾಸಕ ರೇಣುಕಾಚಾರ್ಯರನ್ನು ಕಾರ್ಯಕ್ರಮದ ವೇದಿಕೆಯಿಂದ ಕೆಳಗೆ ಇಳಿಸಿದ್ದಾರೆ..

ತಾಲೂಕಿನ ಚೀಲೂರು ಗ್ರಾಮದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯರನ್ನು ಸರಕಾರಿ ಶಾಲಾ ವಾರ್ಷಿಕೋತ್ಸವಕ್ಕೆ ಆಹ್ವಾನಿಸಲಾಗಿತ್ತು..ಅಂತೆಯೇ ಶಾಸಕ ರೇಣುಕಾಚಾರ್ಯ ಧಾವಿಸಿದ್ದರು. ಇದೇ ವೇದಿಕೆಯಲ್ಲಿ ಎದುರಾಳಿ ಮಾಜಿ ಶಾಸಕ ಶಾಂತನಗೌಡ ಕೂಡ ಹಾಜರಿದ್ದಾರೆ‌..ಹೀಗಿರುವಾಗ ಶಾಸಕ ರೇಣುಕಾಚಾರ್ಯ ಮಾತನಾಡುವ ವೇಳೆ ರಾಜಕೀಯ ಬೆರೆಸಿದ್ದಾರೆ..ಕೆಲ ಕಾಲ ಸುಮ್ಮನಿದ್ದ ಜನ ಆಕ್ರೋಶಗೊಂಡಿದ್ದಾರೆ. ವೇದಿಕೆಯಲ್ಲಿ ರಾಜಕೀಯ ಮಾತನಾಡಬೇಡಿ ಎಂದು ಶಾಸಕರನ್ನು ವ್ಯಕ್ತಿಯೊಬ್ಬ
ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ವೇದಿಕೆಯಿಂದ ಕೆಳಗೆ ಇಳಿಸಿದ್ದಾನೆ. ಈ ವೇಳೆ ರೇಣುಕಾಚಾರ್ಯ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ಅವರಿಗೆ ಟೀಕೆ ಮಾಡುತ್ತಿದ್ದರು ಮಾಜಿ ಶಾಸಕರು ಮೌನವಹಿಸಿದ್ದರು.

ಈ ಸಂದರ್ಭದಲ್ಲಿ ಗಲಾಟೆ ತರಾಕಕ್ಕೇ ಏರಿತ್ತು. ಆಗ ಆಕ್ರೋಶಗೊಂಡ ಶಾಸಕ ರೇಣುಕಾಚಾರ್ಯ ಬೊಟ್ಟು ತೋರಿಸಿ ಮಾತನಾಡಬೇಡಿ ಅಂತ ಅವಾಜ್ ಹಾಕಿದ್ದಾರೆ. ಇದು ಶಾಲಾ ಕಾರ್ಯಕ್ರಮ ರಾಜಕೀಯ ಬೇಡ ಅಂತ ರಾಜಕೀಯ ಮಾಡಿದ್ದಾರೆ. ಇದು ಸರಕಾರಿ ಶಾಲಾ ವಾರ್ಷಿಕೋತ್ಸವ ಕೆಳಗೆ ಇಳಿಯಿರಿ ಎಂದು ಶಾಸಕ ರೇಣುಕಾಚಾರ್ಯರನ್ನು ಗ್ರಾಮಸ್ಥರು ವೇದಿಕೆಯಿಂದ ಇಳಿಸಿದ್ದಾರೆ..ಈ ವಿಷಯ ಸಂಬಂಧ ಶಾಸಕರಿಗೆ ಇರಸುಮುರುಸಾಗಿದ್ದು, ತಮ್ಮ ಪಾಡಿಗೆ ಹೊರಟರು.

ಚುನಾವಣೆ ಸಂಬಂಧ ಶಾಸಕ ರೇಣುಕಾಚಾರ್ಯ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ‌ ಜನರ ಮನವೊಲಿಸುತ್ತಿದ್ದಾರೆ.. ಅಲ್ಲದೇ ಜನರ ಮನೆ ಬಾಗಿಲಿಗೆ ಹೋಗಿ ಕೈ ಮುಗಿದು ಮಾತನಾಡಿಸುವುದು ಮಾಮೂಲಾಗಿದ್ದು, ಎಸ್ಕಾರ್ಟ್ ಸೌಲಭ್ಯವು ಅವರಿಗೆ ಇದೆ. ವಾಲಿಬಾಲ್, ಕಬ್ಬಡಿ, ಕ್ರಿಕೆಟ್ ಸೇರಿದಂತೆ ಇನ್ನಿತರ ಆಟಗಳನ್ನು ಆಡಿಸುವ ಮೂಲಕ ಯುವಕರು ಸೇರಿದಂತೆ ಮಕ್ಕಳ ಜತೆ ಬೆರೆಯುವ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಜನರಿಗೆ ಪ್ರೀತಿ ಬರುವಂತೆ ಮಾಡುತ್ತಿದ್ದಾರೆ..ಅಲ್ಲದೇ ಬಿಜೆಪಿ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಮತಗಳನ್ನು ಸೆಳೆಯುತ್ತಿದ್ದಾರೆ..

ಅತ್ತ ಕಾಂಗ್ರೆಸ್ ನ ಶಾಂತನಗೌಡ ಹಳ್ಳಿಗಳಿಗೆ ಹೋಗುತ್ತಿದ್ದರೂ, ಅಷ್ಟೊಂದು ಪ್ರಮಾಣದಲ್ಲಿ ಜನರನ್ನು ರೀಚ್ ಆಗುತ್ತಿಲ್ಲ…ಈ ನಡುವೆ ರೇಣುಕಾಚಾರ್ಯ ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ವೇದಿಕೆ ಸಿದ್ದಪಡಿಸಿಕೊಂಡು ವಿರೋಧ ಪಕ್ಷದ ಟೀಕೆ ಮಾಡುವಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಶಾಸಕರು ಶಾಲಾ ವಾರ್ಷಿಕೋತ್ಸವನ್ನು ರಾಜಕಾರಣಕ್ಕೆ ಬಳಸುತ್ತಿರುವುದರಿಂದ ಒಂಚೂರು ಇರಸು ಮುರುಸಾಗಿದೆ.

ಒಟ್ಟಾರೆ ಹೊನ್ನಾಳಿಯಲ್ಲಿ ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ದಿನಕ್ಕೊಂದು ಹೈ ಡ್ರಾಮ್ ನಡೆಯುತ್ತಿದೆ..ಈ ನಡುವೆ ಶಾಸಕ ರೇಣುಕಾಚಾರ್ಯ ಕೇಂದ್ರ, ರಾಜ್ಯ ನಾಯಕರು ಕೂಡ ಬರುತ್ತಿದ್ದು, ಹೊನ್ನಾಳಿಯಲ್ಲಿ ರಾಜಕೀಯ ಹವಾ ಜೋರಿದೆ.

Leave a Reply

Your email address will not be published. Required fields are marked *

error: Content is protected !!