ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ಆರ್ ಅಂಜನಪ್ಪನವರು ಮಾತನಾಡುತ್ತಾ ಸಂವಿಧಾನ ಜಾರಿಯಾದ ದಿನದ ಪ್ರಯುಕ್ತ ಗಣರಾಜ್ಯೋತ್ಸವದ ದಿನವಾಗಿ ನಾವೆಲ್ಲ ಆಚರಿಸುತ್ತೇವೆ ಸಂವಿಧಾನ ಪ್ರತಿಯೊಬ್ಬರಿಗೆ ಮೂಲಭೂತ ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ನೀಡಿದೆ ನಾವು ಹಕ್ಕುಗಳಿಗಾಗಿ ಅಸ್ಟೇ ಹೋರಾಡದೆ ಕರ್ತವ್ಯಗಳನ್ನು ಪಾಲಿಸಬೇಕು ಆಗ ದೇಶವು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಂದೇಶವನ್ನು ನೀಡಿದರು.
ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾಕ್ಟರ್ ದಿನೇಶ್ ಜಿ ಎಂ ರವರು ದೇಶದ ಪ್ರತಿಯೊಬ್ಬ ನಾಗರಿಕರೂ ಈ ದಿನವನ್ನು ಹಬ್ಬದಂತೆ ಆಚರಿಸಬೇಕು ಈ ಸಂದರ್ಭದಲ್ಲಿ ನಾವೆಲ್ಲರೂ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರನ್ನು ಸ್ಮರಿಸುಸುತ್ತ ಅವರು ನೀಡಿದ ಸಂವಿಧಾನವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬ ನಾಗರಿಕರಿಗೂ ಎಲ್ಲಾ ರೀತಿಯ ಹಕ್ಕು ಕರ್ತವ್ಯ ಮತ್ತು ಸೌಕರ್ಯವನ್ನು ಸಂವಿಧಾನವು ನೀಡಿದೆ. ಭಾರತೀಯ ಪ್ರಜೆಗಳಾದ ನಾವು ಪ್ರತಿಯೊಂದನ್ನು ಅರಿತುಕೊಂಡು ಅದರಂತೆ ನಡೆದುಕೊಂಡಾಗ ಸಂವಿಧಾನಕ್ಕೆ ಮತ್ತು ದೇಶಕ್ಕೆ ನೀಡುವ ಗೌರವ ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ ಭೋದುಕೇತ ವರ್ಗದವರು ಹಾಜರಿದ್ದರು. NCC ಅಧಿಕಾರಿಗಳಾದ ಡಾ. ಸದಾಶಿವಪ್ಪನವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.