ರೈಲ್ವೆ ಪೌರ ಕಾರ್ಮಿಕರಿಂದ ರೈಲ್ವೆ ನಿಲ್ದಾಣದ ಬಳಿ ಗಣರಾಜ್ಯೋತ್ಸವ ಧ್ವಜಾರೋಹಣ.

ದಾವಣಗೆರೆ: ಈ ದಿನ ದಿನಾಂಕ 26.01.2022 ರಂದು 73 ನೇ ಗಣರಾಜ್ಯೋತ್ಸವ ಅಂಗವಾಗಿ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಎಲ್ಲಾ ರೈಲ್ವೆ ನೌಕರರು ಮತ್ತು ರೈಲ್ವೆ ಪೊಲೀಸರು ಒಗ್ಗೂಡಿ ರೈಲ್ವೆ ನಿಲ್ದಾಣದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಅದರಲ್ಲೂ ವಿಶೇಷವಾಗಿ ರೈಲ್ವೆ ಇಲಾಖೆಯ ಪೌರ ಕಾರ್ಮಿಕರಾದ ಶ್ರೀಮತಿ ಗಂಗಮ್ಮ ಮತ್ತು ಶ್ರೀ ಮಂಜುನಾಥ ರವರು ಗಳಿಂದ ಧ್ವಜಾರೋಹಣ ಮಾಡಿಸಲಾಯಿತು ಎಂದು ಪೊಲೀಸ್ ನಿರೀಕ್ಷಕರಾದ ಮುಸ್ತಾಕ್ ಅಹಮದ್ ಡಿ ಶೇಕ್
ರೈಲ್ವೆ ಪೊಲೀಸ್ ಠಾಣೆ ದಾವಣಗೆರೆ ಇವರು ಮಾಹಿತಿ ನೀಡಿದ್ದಾರೆ.