ಹೈಸ್ಕೂಲ್ ಮೈದಾನ ಹಾಗೂ ಮೋತಿವೀರಪ್ಪ ಶಾಲಾ ಆವರಣದಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆ ಆದೇಶ ಹಿಂಪಡೆಯಲು ಮನವಿ

ದಾವಣಗೆರೆ: ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತವು ಪಟಾಕಿ ಮಾರಾಟಗಾರರಿಗೆ 50 ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಜಿಲ್ಲಾಡಳಿತವು ಮರು ಪರಿಶೀಲಿಸಿ ಆದೇಶ ಹಿಂಪಡೆಯ ಬೇಕು ಎಂದು ಯುವಾ ಗ್ರೀನ ಬ್ರಿಗೆಡ್ ಸಂಸ್ಥೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇದೇ ಹೈಸ್ಕೂಲ್ ಮೈದಾನದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣವನ್ನು ಮಾಡಿದ್ದು ಇದರಲ್ಲಿ ದಿನನಿತ್ಯ ಸಾವಿರಾರು ಸಾರ್ವಜನಿಕರು ಇರುತ್ತಾರೆ ಹಾಗೂ ಬಸ್ ಗಳು ಇರುತ್ತವೆ ಅಚಾತುರ್ಯವಾಗಿ ಅಗ್ನಿ ಅವಘಡಗಳು ನಡೆದರೆ ದೊಡ್ಡ ಅನಾಹುತವೇ ಆಗುತ್ತದೆ. ಹಾಗೂ ಮೋತಿವೀರಪ್ಪ ಶಾಲೆಯಲ್ಲಿ ಇದೇ ಮೊದಲ ಬಾರಿಗೆ 30 ಪಟಾಕಿ ಅಂಗಡಿಗೆ ತಾತ್ಕಾಲಿಕವಾಗಿ ಅವಕಾಶ ನೀಡಿದ್ದು, ಇದೂ ಕೂಡ ನಗರದ ಮಧ್ಯಭಾಗದ ಜನವಸತಿ ಪ್ರದೇಶವಾಗಿದ್ದು, ಸುತ್ತಮುತ್ತಲು ಆಸ್ಪತ್ರೆ ಉದ್ಯಾನವನವಿದೆ. ಹೆಚ್ಚಿನ ಜನನಿಬಿಡ ಸ್ಥಳಗಳಲ್ಲಿ ಪಟಾಕಿ ಮಾರಾಟ ನಿಷೇಧವಿದ್ದರೂ, ಶಾಲಾ ಆವರಣಗಳು ವಾಣಿಜ್ಯ ಬಳಕೆಗೆ ಅವಕಾಶ ನೀಡಬಾರದು ಎಂದು ಸರ್ಕಾರಿ ಆದೇಶ ಇದ್ದರೂ ಶಾಲಾಕಾಲೇಜು ಆಡಳಿತ ಮಂಡಳಿಯ ಪ್ರಾಂಶುಪಾಲರು ಮುಖ್ಯಸ್ಥರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿ ಹೇಗೆ ಅಪಾಯಕಾರಿ ಪಟಾಕಿಗಳ ಮಾರಾಟಕ್ಕೆ, ಅನುಮತಿ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.
ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ತಾತ್ಕಾಲಿಕವಾಗಿ ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಸರ್ಕಾರಿ ಶಾಲಾ ಮೈದಾನವನ್ನು ವಾಣಿಜ್ಯ ಬಳಕೆಗೆ ಅವಕಾಶ ನೀಡುವುದೇ ಆದರೆ ನೀವು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಕೋರಿ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಸುರ್ವೇ ಪತ್ರ ಬರೆದಿದ್ದಾರೆ.