ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆ ಈಡೇರಿಕೆ ಭರವಸೆ ನೀಡಿದ ಕಂದಾಯ ಸಚಿವ ಆರ್. ಅಶೋಕ್

ದಾವಣಗೆರೆ: ಗ್ರಾಮ ಲೆಕ್ಕಾಧಿಕಾರಿಗಳಿಂದ ಗ್ರಾಮ ಆಡಳಿತ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ಸೇರಿದಂತೆ ನಿಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಯವರೊ0ದಿಗೆ ಚರ್ಚಿಸಿ ಶುಭ ಸುದ್ದಿ ನೀಡುವುದಾಗಿ ಕಂದಾಯ ಇಲಾಖಾ ನೌಕರರಿಗೆ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದಿ0ದ ನಗರದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಅಂದರೆ ಚೈತನ್ಯದ ಆಗರ ಸಾಮರ್ಥ್ಯದ ಸಾಗರ. ಕಂದಾಯ ಇಲಾಖೆಯಲ್ಲಿ ಜಡತ್ವ ಹೋಗಬೇಕು ಎಂಬ ಕಾರಣಕ್ಕೆ ಹಲವು ರೀತಿಯ ಬದಲಾವಣೆಗಳನ್ನು ಈಗಾಗಲೇ ಮಾಡಲಾಗಿದೆ.
ಈ ಹಿಂದೆ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮಾತ್ರ ಕೆಲಸದ ನಿಮಿತ್ತ ಓಡಾಡುತ್ತಿದ್ದರು. ಆದರೆ ಈಗ ಜಿಲ್ಲಾಧಿಕಾರಿಗಳು ಸಹ ಹಳ್ಳಿ ಕಡೆ ಓಡಾಡುವಂತಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿಗಳು ಸಹ ನಿಮ್ಮಂತೆ ಹಳ್ಳಿಗರ ಸಮಸ್ಯೆಗಳನ್ನು ಆಲಿಸುವಂತಾಯಿತು. ಅಷ್ಟೇಅಲ್ಲದೆ ರಾಜ್ಯದ ಪ್ಗರತಿಯೊಬ್ಬ ಜಿಲ್ಲಾಧಿಕಾರಿ ವಾರಕ್ಕೊಂದು ದಿನ ತಾಲೂಕು ಕಚೇರಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದರು.
40 ವರ್ಷಗಳಿಂದ ಸಿ ಅಂಡ್ ಆರ್ ರೂಲ್ಸ್ನಲ್ಲಿ ತಾರತಮ್ಯ ಆಗುತ್ತಿತ್ತು. ನಾನು ಬಂದ ನಂತರ ಅಶೋಕ ಬಂದ ನಂತರ ಶೋಕ ಮಾಯವಾಯಿತು ಎಂಬAತೆ ಅನೇಕ ಅಡೆತಡೆಗಳ ನಡುವೆಯೂ ಸಿ&ಆರ್ ರೂಲ್ಸ್ ಮಾಡಿದೆ. ಅಷ್ಟೇಅಲ್ಲದೆ ಬಡಜನತೆಗೆ ಸರಿಯಾಗಿ ವಿವಿಧ ರೀತಿಯ ವೇತನ ಸಿಗಬೇಕು ಎಂಬ ಉದ್ದೇಶದಿಂದ 72 ಗಂಟೆಗಳ ಒಳಗೆ ಪೆನ್ಷನ್ ಸಿಗುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದೆ. ಕಂದಾಯ ಇಲಾಖಾ ವ್ಯಾಪ್ತಿಯ ನೌಕರರು ಕೋವಿಡ್ನಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಎಲ್ಲಾ ಇಲಾಖೆಯವರ ಜೊತೆಗೂಡಿ ಕೆಲಸ ಮಾಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳು ರಾಜ್ಯದಲ್ಲಿದ್ದಾರೆ. ಅವರ ನ್ಯಾಯಸಮ್ಮತವಾದ ಬೇಡಿಕೆ ಈಡೇರಿಕೆಗೆ ಶ್ರಮಿಸುವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಇನ್ನಿತರೆ ಗಣ್ಯರು ಇದ್ದರು.
garudavoice21@gmail.com 9740365719