ಸಚಿವ ಆನಂದ್ ಸಿಂಗ್ ರಿಂದ ಬಿಜೆಪಿಯ ಸತೀಶ್ ಪರ ಎಂ ಎಲ್ ಸಿ ಚುನಾವಣಾ ಪ್ರಚಾರ

ಹರಪನಹಳ್ಳಿ: ಹರಪನಹಳ್ಳಿ ತಾಲ್ಲೂಕಿನ ಜಗಳೂರು ವಿಧಾನ ಸಭಾ ಕ್ಷೇತ್ರದ ಕಮ್ಮತ್ತಹಳ್ಳಿ ಗ್ರಾಮದಲ್ಲ ಹಮ್ಮಿಕೊಂಡಿದ್ದ MLC ಚುನಾವಣೆಯ ಬಿಜೆಪಿ ಅಭ್ಯರ್ಥಿ ಸತೀಶ್ ರವರ ಪರವಾಗಿ ಬಹಿರಂಗ ಪ್ರಚಾರ ಸಭೆ ನೆಡೆಸಲಾಯಿತು.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಉಸ್ತವಾರಿ ಸಚಿವರಾದ ಶ್ರೀ ಆನಂದ ಸಿಂಗ್ ರವರು ಹಾಗೂ ಜಗಳೂರಿನ ಜನಪ್ರಿಯ ಶಾಸಕರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷರಾದ ಎಸ್ ವಿ.ರಾಮಚಂದ್ರಪ್ಪ ಅವರು ನೇತೃತ್ವದಲ್ಲಿ ನೆಡೆದ ಮತ ಪ್ರಚಾರ ಸಭೆ ನೆಡೆಸಲಾಯಿತು…
ಈ ಸಂದರ್ಭ ದಲ್ಲಿ ಮಾತನಾಡಿದ ಅನಂದ ಸಿಂಗ್ ರವರು ಕಾಂಗ್ರೆಸ್ ಪಕ್ಷವನ್ನ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡರು…
ಈ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಚನ್ನಬಸವನಗೌಡ್ರು, ಜಗಳೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಮಹೇಶ್, ಹ.ಹಳ್ಳಿ ಗ್ರಾಮ ಒಕ್ಕೂಟದ ಅಧ್ಯಕ್ಷರಾದ ಕರರೂ ಹನುಮಂತಪ್ಪ, ಮುಖಂಡರಾದ ಮಹಾಬಲ್ಲೇಶ್ವರ ಗೌಡ್ರು, ನಂಜನಗೌಡ್ರು, ಬಳ್ಳಾರಿ ಸಂಸದರ ಪುತ್ರರಾದ ವೈ.ಡಿ.ಅಣ್ಣಪ್ಪ , ಆರುಂಡಿ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ,ಸಿದ್ದಪ್ಪ , ಕಮ್ಮತ್ತಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ,ಸಿದ್ದಣ್ಣ, ಮುರುಗೇಶ, ನಂದಿಕಂಭ ಚಂದ್ರನಾಯ್ಕ,, ಬೇವಿನಹಳ್ಳಿ ಕೆಂಚನಗೌಡ್ರು , ಅರಸೀಕೆರೆ ವಿಶ್ವನಾಥಯ್ಯ, ಆನಂದಪ್ಪ,, ತೌಡುರು ಮಂಜಣ್ಣ, ಓಂಕಾರಗೌಡ್ರು, ಕ್ಯಾರಕಟ್ಟೆ ಶಿವಯೋಗಿ, ಉಚ್ಚಂಗಿದುರ್ಗ ಎಸ್ ಹನುಮಂತಪ್ಪ, ಜಯಣ್ಣ, ಸೇರಿದಂತೆ ಇತರರು ಉಪಸ್ಥಿತರಿದ್ದರು….