ಮುಖ್ಯಮಂತ್ರಿಗಳೇ ನಮ್ಗೆ ಊಟದ ವ್ಯವಸ್ಥೆ ಮಾಡಿ; ವಿಡಿಯೋದಲ್ಲಿ ಹಸಿವು ತೋಡಿಕೊಂಡ ಸಂಚಾರಿ ಕುರಿಗಾಯಿ, ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ

IMG_20210503_173337

ಹೆಚ್ ಎಂ ಪಿ ಕುಮಾರ್

ದಾವಣಗೆರೆ: ಲಾಕ್ ಡೌನ್‌ನಿಂದಾಗಿ ಸಂಚಾರಿ ಕುರುಬರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ನಮಗೆ ಊಟದ ವ್ಯವಸ್ಥೆ ಮಾಡಿ ಎಂದು ಸಂಚಾರಿ ಕುರುಬನೊಬ್ಬ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾನೆ.

ಕೋವಿಡ್ ಮೊದಲ ಅಲೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರ ಏಕಾಏಕಿ ಮಾಡಿದ ಲಾಕ್ ಡೌನ್ ನಿಂದಾಗಿ ಸಂಚಾರಿ ಕುರುಬರು ಒಂದು ಹೊತ್ತಿನ ಊಟಕ್ಕೆ ಸಮಸ್ಯೆಯಾಗಿತ್ತು. ಇದೀಗ ಪುನಃ ಅದೇ ಸಮಸ್ಯೆಯನ್ನು ತಂದಿಟ್ಟಿದ್ದೀರಾ‌ ನಮಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕರ್ಫ್ಯೂನಿಂದಾಗಿ ಊರಿನಿಂದ ಊರಿಗೆ ಕುರಿಗಳ ಜತೆ ಸಾಗುವ ನಮ್ಮನ್ನು ಯಾವ ಊರಿನೊಳಗೆ ಬಿಡಿಸಿಕೊಳ್ಳುತ್ತಿಲ್ಲ. ಎಲ್ಲ ಕಡೆಯಿರುವ ಪೊಲೀಸರು ನಮ್ಮನ್ನ ಕಂಡರೆ ಸಾಕು ಲಾಠಿ ಬೀಸುತ್ತಾರೆ. ಎಷ್ಟೋ ದಿನ ನಾವು ಊಟವಿಲ್ಲದೆ ಉಪವಾಸವಿದ್ದೇವೆ. ಹಸಿವಿನಿಂದ ಸಾಯುವ ಸ್ಥಿತಿ ಎದುರಾಗಿದೆ. ನಮಗೆ ದಯವಿಟ್ಟು ಊಟದ ವ್ಯವಸ್ಥೆ ಮಾಡಿ ಸ್ವಾಮಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ನೀವು ಹಾಕಿರುವ ಎಲ್ಲ ನಿಯಮ ಪಾಲಿಸುತ್ತೇವೆ. ಊರಿಂದ ಊರಿಗೆ ಹೋಗುವ ನಮಗೆ ಪೊಲೀಸರಿಂದ ರಕ್ಷಣೆ ಕೊಡಿಸಿ ಎಂದು ವಿಡಿಯೋ ಮಾಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.

ಸಂಚಾರಿ ಕುರಿಗಾಯಿಯ ವಿಡಿಯೊ ನೋಡಲು ಈ ಲಿಂಕ್ 👇 ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!