ಸಂತೇಬೆನ್ನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವಿನೂತನ ದಾಖಲಾತಿ ಆಂದೋಲನ

ದಾವಣಗೆರೆ.ಜು.೨; ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಸಿಬ್ಬಂದಿ ನೂತನವಾಗಿ ದಾಖಲಾತಿ ಆಂದೋಲನ ಕಾರ್ಯಕ್ರಮ ಕೈಗೊಂಡರು.
ಭಿತ್ತಿಚಿತ್ರಗಳನ್ನು ಹಂಚುತ್ತಾ….ಕಾರಿಗೆ ನಾಮಫಲಕ ಕಟ್ಟಿಕೊಂಡು ಧ್ವನಿವರ್ಧಕ ದ ಮೂಲಕ ಗ್ರಾಮದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.
ಹಳ್ಳಿ ಹಳ್ಳಿಗೆ ಜಾಥಾ ರೀತಿಯಲ್ಲಿ ಓಡಾಡಿ ದಾಖಲಾತಿಗೆ ಮೆರುಗು ತಂದರು.
ಕೊರೊನ ಕಾಲದಲ್ಲಿ ಶಾಲೆಯನ್ನೇ ಮರೆತ ಮಕ್ಕಳಿಗೆ ಮೊದಲ ಹಂತ ದಾಖಲಾತಿ ಬಹಳ ಮುಖ್ಯ ಭಾಗ ಅಂತ ಸ್ವಯಂ ಪ್ರೇರಣೆ ಯಿಂದ ಇಲ್ಲಿನ ಶಿಕ್ಷಕರು ಈ ರೀತಿ ತಮ್ಮದೇ ಖರ್ಚಿನಲ್ಲಿ ದಾಖಲಾತಿ ಆಂದೋಲನ ನಡೆಸಿದರು.ಇದೇ ಸಂದರ್ಭದಲ್ಲಿ ಹಾಜರಿದ್ದ ಚನ್ನಗಿರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಜಾಥಾ ಉದ್ಘಾಟಿಸಿ ಹಿಂದಿನ ಕಾಲದ ಸಿನಿಮಾ ಗಾಡಿಯ ಪ್ರಚಾರದಂತೆ ವಿನೂತನ ಕಾರ್ಯಕ್ರಮ ಇದಾಗಿದೆ, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಈ ನೂತನ ಪ್ರಯೋಗ ಇತರೇ ಶಾಲೆಯವರಿಗೂ ಮಾದರಿ ಎಂದು ಅಭಿಪ್ರಾಯ ಪಟ್ಟರು.
ಪೋಷಕರು ಸಕರಾತ್ಮಕವಾಗಿ ಸ್ಪಂದಿಸಿ ಅಲ್ಲಿಯೇ ದಾಖಲಾತಿಗೆ ಅರ್ಜಿಗಳನ್ನು ಪಡೆದುಕೊಂಡರು. ಜೊತೆಯಲ್ಲಿ ಸಾರ್ವಜನಿಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಈ ಶಾಲೆಯ ಶ್ರಮ ಮೆಚ್ಚುವಂತಹದ್ದೆಂದು ಕೊಂಡಾಡಿದರು.
ಉಪಪ್ರಾಂಶುಪಾಲರಾದ ಜಯಣ್ಣ, ಶಿಕ್ಷಕರಾದ ಮಲ್ಲೇಶ್, ದ್ಯಾಮೇಶ್, ಜ್ಯೋತಿ ಕುಮಾರ್, ಫೈಜ್ನಟ್ರಾಜ್ ಜಾಥಾದ ನೇತೃತ್ವ ವಹಿಸಿದ್ದರು.
ಪೋಷಕರಾದ ಅಣಬೇರು ಜಾಫರ್, ಅಂಗಡಿ ರವಿ, ಸೀಮಾ ಬಾನು, ಹಾಲೇಶ್ ಹಾಜರಿದ್ದರು.