ಮೈಸೂರಿನಲ್ಲಿ ಆಗಸ್ಟ್ 17-18 ರಂದು ಪತ್ರಕರ್ತರಿಗಾಗಿ ಸಂವೇದನಾ ಕಾರ್ಯಗಾರ

ಮೈಸೂರು: ಮೈಸೂರಿನಲ್ಲಿ ನಾಳೆಯಿಂದ ಪತ್ರಕರ್ತರಿಗಾಗಿ ಎರಡು ದಿನಗಳ ಕಾರ್ಯಗಾರವನ್ನ ಆಯೋಜಿಸಲಾಗಿದೆ. ನಗರದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಈ ಕಾರ್ಯಕಾರವನ್ನ ಹಮ್ಮಿಕೊಳ್ಳಲಾಗಿದೆ.
ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಹೈದ್ರಾಬಾದ್ ನ ಯುನಿಸೆಫ್ (UNICEF) ಸಹಯೋಗದಲ್ಲಿ, ಆಗಸ್ಟ್ 17 ಮತ್ತು 18 ರಂದು ಈ ಕಾರ್ಯಗಾರ ನಡೆಯಲಿದೆ.
ಕಳೆದ ಎರಡು ವರ್ಷಗಳಿಂದ ಅಂದ್ರೆ ಕೋವಿಡ್ ಅವಧಿಯ ನಂತರ ಮಕ್ಕಳ ಸಮಸ್ಯೆ ಕುರಿತು ಪತ್ರಕರ್ತರ ಸಂವೇದನೆ ಎಂಬ ವಿಷಯದ ಬಗ್ಗೆ ಕಾರ್ಯಕಾರ ಹಮ್ಮಿಕೊಳ್ಳಲಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊಫೆಸರ್ ಶಿವಪ್ಪ ಕಾರ್ಯಗಾರಕ್ಕೆ ಚಾಲನೆ ನೀಡಲಿದ್ದಾರೆ. ಯುನಿಸೆಫ್ ಅಧಿಕಾರಿ ಪ್ರೊಫೆಸರ್ ಪ್ರೊಸೂನ್ ಸೆನ್ ಅವರು ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಲಿದ್ದಾರೆ ಕಾರ್ಯಗಾರದಲ್ಲಿ ರಾಜ್ಯದ ವಿವಿಧ ಜಿಲ್ಲಾ ವಿಭಾಗದ ಪತ್ರಕರ್ತರು ಸಹ ಭಾಗಿಯಾಗಲಿದ್ದಾರೆ.