ಸೆಪ್ಟಂಬರ್ 22 ಮಲ್ಲಣ್ಣ ಹುಟ್ಟು ಹಬ್ಬ: ದಾವಣಗೆರೆಯಲ್ಲಿ ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷ

 

ದಾವಣಗೆರೆ: ಕಳೆದ ಮೂರು ವರ್ಷಗಳಿಂದ ಸೆಪ್ಟಂಬರ್ 22 ಬಂತು ಎಂದ ಕ್ಷಣ ಕಾರ್ಯಕರ್ತರು ತಮ್ಮ ನೆಚ್ಚಿನ ಜನನಾಯಕ ಮಲ್ಲಣ್ಣನವರ ಹುಟ್ಟುಹಬ್ಬವನ್ನು ಆಚರಿಸಲು ಹಾತೊರೆಯುತ್ತಿದ್ದರೇ ವಿನಹ, ಆ ಸುಂದರ ಕ್ಷಣವನ್ನು ಸವಿಯಲು ಆಗಿರಲಿಲ್ಲ ಆದರೆ ಈ ವರ್ಷ ಕಾರ್ಯಕರ್ತರ ಬಯಕೆ ಈಡೇರುವ ಕ್ಷಣ ಬಂದಿದೆ.

ಮಾನ್ಯ ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರು ತಮ್ಮ 54ನೆಯ ಹುಟ್ಟುಹಬ್ಬವನ್ನು ಕಲ್ಲೇಶ್ವರ ಮಿಲ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಕಾರ್ಯಕರ್ತರ, ಹಿತೈಷಿಗಳ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವಂತಾಗಿದೆ.

ಈ ವರ್ಷ ನಮ್ಮೆಲ್ಲರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!