ಸೆಪ್ಟೆಂಬರ್ 29ಕ್ಕೆ ವಿಶ್ವಕರ್ಮ ಮಹೋತ್ಸವ ಹಾಗೂ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಉದ್ಘಾಟನೆ

ದಾವಣಗೆರೆ: ವಿಶ್ವಕರ್ಮ ಮಹೋತ್ಸವ ಹಾಗೂ ಅಖಿಲ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಉದ್ಘಾಟನಾ ಸಮಾರಂಭವನ್ನು ಸಪ್ಟಂಬರ್ 29ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅರಕಲಗೂಡು ತಾಲೂಕಿನ ವಿಶ್ವಕರ್ಮ ಮಹಾ ಸಂಸ್ಥಾನದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿ ಹಾಗೂ ಶಿವಾನಂದ ಸರಸ್ವತಿಮಹಾಸ್ವಾಮಿಗಳು ಹಾಗೂ ಶಂಕರ್ ಆತ್ಮಾನಂದ ಸರಸ್ವತಿ ಸ್ವಾಮಿಗಳು ದಿವ್ಯಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶಾಸಕ ಅಧ್ಯಕ್ಷ ಡಾ: ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಕರ್ಮ ಪರಿಷತ್ತನ್ನು ಉದ್ಘಾಟಿಸಲಿದ್ದಾರೆ
ಕಾರ್ಯಕ್ರಮ ಉದ್ಘಾಟನೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾರ್ಯಧ್ಯಕ್ಷ ಸಲೀಮ್ ಅಹಮದ್ ನೆರವೇರಿಸಲಿದ್ದಾರೆ
ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ನ ರಾಷ್ಟ್ರೀಯ ಅಧ್ಯಕ್ಷ ಹೆಚ್ ಪಿ ಸತೀಶ್ ಕುಮಾರ್ ತಿಳಿಸಿದರು.
ಸಂಗೀತ ನಿರ್ದೇಶಕ ಸಂಗೀತ ನಿರ್ದೇಶಕರು ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ವಿಶ್ವಕರ್ಮ ಸಮಾಜದ ಧ್ವನಿಸುರಳಿ ಬಿಡುಗಡೆ ಮಾಡಲಿದ್ದಾರೆ ಹಾಗೂ ವಿಶ್ವಕರ್ಮ ಸಮಾಜ ಕುರಿತು ಉಪನ್ಯಾಸ ನೀಡಲಿದ್ದಾರೆಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮಲ್ಲಿಕಾರ್ಜುನ್ ಶಾಸಕರುಗಳಾದ ಶಾಸಕರುಗಳಾದ ಎಸ್ ರಾಮಪ್ಪ ರಘು ಆಚಾರ್ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ಪಿ ಪಾಟೀಲ್ ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಬಿ ನಾಗೇಂದ್ರ ಚಾರ್ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಎಂ ಡಿ ಲಕ್ಷ್ಮಿ ನಾರಾಯಣ್, ಪಿಬಿ ಬಡಿಗೇರ್ ಮಾಜಿ ಶಾಸಕ ಎತ್ತಿ ಮಂಜಪ್ಪ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಹೊದಿಗೆರೆ ರಮೇಶ್ ಎಚ್ ಪಿ ರಾಜೇಶ್ ಡಿಜೆ ಶಾಂತನಗೌಡರ ಸೇರಿದಂತೆ ಸಮಾಜದ ಮುಖಂಡರುಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಿ ನಾಗೇಂದ್ರ ಚಾರ್, ಉಪಾಧ್ಯಕ್ಷ ಕಾಳಾಚಾರ್, ಪ್ರಧಾನ ಕಾರ್ಯದರ್ಶಿ ವಿ ಎಂ ಕೊಟ್ರೇಶ ಚಾರ್ ಇದ್ದರು