ಶಿಮುಲ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಸಭೆ ಕರೆದ ಅಧಿಕಾರಿ

ಶಿವಮೊಗ್ಗ: ಶಿಮುಲ್ ಅರ್ಹ ನಿರ್ದೇಶಕರ ಸಭೆ ಕರೆಯಲಾಗಿದೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., (ಶಿಮುಲ್) ನಿರ್ಧೇಶಕರ ಸಭೆಯನ್ನು 22/10/2021 ರಂದು ಬೆಳಗ್ಗೆ 11.30ಕ್ಕೆ ಕರೆಯಲಾಗಿದೆ. ಶಿಮುಲ್‌ನ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯ ಕುರಿತ ಸಭೆ ಇದಾಗಿದೆ.

ಶಿಮುಲ್ ಕೇಂದ್ರ ಕಚೇರಿ, ಶಿವಮೊಗ್ಗ ಸಮೀಪದ ಮಾಚೇನಹಳ್ಳಿಯಲ್ಲಿನ ಆಡಳಿತ ಮಂಡಳಿ ಸಭಾ ಕೊಠಡಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಅಧ್ಯಕ್ಷತೆಯಲ್ಲಿ ಶಿಮುಲ್ ಅರ್ಹ ಚುನಾಯಿತ ಆಡಳಿತ ಮಂಡಳಿಯ ಸದಸ್ಯರ ಸಭೆಯನ್ನು ನಡೆಸಲಾಗುತ್ತಿದೆ. ಶಿಮುಲ್‍ನ ಚುನಾಯಿತಿ ಅರ್ಹ ಆಡಳಿತ ಮಂಡಳಿಯ ನಿರ್ದೇಶಕರು ಸಭೆಗೆ ಹಾಜರಾಗುವಂತೆ ಶಿವಮೊಗ್ಗ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಮಾಹಿತಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!