ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್.! ಹಾಲಿ ಶಾಸಕರಿಗೂ ಎಚ್ಚರಿಕೆ ನೀಡಿದ ರಾಜ್ಯಧ್ಯಕ್ಷ ಕಟೀಲ್.!

ಬೆಂಗಳೂರ: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ದತೆ ಆರಂಭಿಸಿದ್ದು, ಕರ್ನಾಟಕವನ್ನು ವಿವಿಧ ಭಾಗಗಳನ್ನಾಗಿ ವಿಭಜಿಸಿ ಪ್ರತ್ಯೇಕ ಯೋಜನೆ ರೂಪಿಸಿದೆ.ಇದರ ಬೆನ್ನಲ್ಲೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಾಜಿ ಶಾಸಕರ ಸಭೆ ನಡೆದಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಕಮಲದ ಗುರುತಿನಡಿ ಸೋತ ಮಾಜಿ ಶಾಸಕರು ಸಭೆಗೆ ಹಾಜರಾಗಿದ್ದರು.ಇತ್ತೀಚಿಗಷ್ಟೇ ಕೇಂದ್ರಿಯ ಸಂಸದಿಯ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಿಎಸ್ ಯಡಿಯೂರಪ್ಪ ಕೂಡ ಸಭೆಯಲ್ಲಿ ಭಾಗಿಯಾಗಿದ್ದು ಮತ್ತಷ್ಟು ಮಹತ್ವ ಪಡೆದುಕೊಂಡಿತು.
2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಹಾ ಪ್ಲಾನ್ ರೂಪಿಸಿದ್ದು ಎಲ್ಲಾ ನಾಯಕರಿಕೂ ಗೆಲುವೊಂದನ್ನೆ ಮಾನದಂಡವಾಗಿರಿಸಿದೆ.ಯಾರಿಗೆ ಟಿಕೆಟ್ ನೀಡಬೇಕು,ಯಾರಿಗೆ ಟಿಕೆಟ್ ನೀಡಬಾರದು ಎಂದು ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಟಿಕೆಟ್ ಹಂಚಿಕೆಗೆ
ನಿರ್ದಿಷ್ಟ ಪ್ಲಾನ್ ಮಾಡಿರುವ ರಾಜ್ಯ ಬಿಜೆಪಿ ಹಿಂಬಾಲಕರು, ಹಳಬರು, ಮಾಜಿ ಶಾಸಕರು, ಕಳೆದ ಬಾರಿ ಸ್ಪರ್ಧೆ ಮಾಡಿದವರು ಎಂಬ ಸರ್ಟಿಫಿಕೇಟ್ ಮುಖ್ಯವಲ್ಲ
ಗೆಲುವೊಂದೆ ಮಾನದಂಡ ಎಂಬ ಸಂದೇಶ ರವಾನಿಸಿದೆ. 2023 ರ ವಿಧಾನಸಭೆ ಚುನಾವಣೆಗೆ ಈಗಾಗಲೇ ಟಿಕೆಟ್ ಲೆಕ್ಕಾಚಾರ ಹಾಕಿರುವ ರಾಜ್ಯ ಬಿಜೆಪಿ ಸೋಲು ಗೆಲುವಿನ ಲೆಕ್ಕಾಚಾರ ಹಾಕಿ ಟಿಕೆಟ್ ನೀಡುವಾಗ ಗೆಲುವು ಪಡೆಯುವ ವ್ಯಕ್ತಿಗೆ ಆದ್ಯತೆ ನೀಡುವುದಾಗಿ ತಿಳಿಸಿದೆ.
ಮಾಜಿ ಶಾಸಕರ ಜೊತೆಗೆ ಹಾಲಿ ಶಾಸಕರಿಗೂ ಶಾಕ್
ಮಾಜಿ ಶಾಸಕರ ಸಭೆಯನ್ನುದ್ದೇಶಿ ಮಾತನಾಡಿದ ರಾಜ್ಯಧಕ್ಷ ಕಟೀಲ್ ಪರೋಕ್ಷವಾಗಿ ಹಾಲಿ ಶಾಸಕರಿಗೂ ಸಂದೇಶ ರವಾನಿಸಿದ್ದಾರೆ.ಟಿಕೆಟ್ ಯಾರಿಗೆ ನೀಡಬೇಕೆಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ.ಸರ್ವೆ ಆಧಾರಿಸಿ ಗೆಲ್ಲುವ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಈ ಮೂಲಕ ಮಾಜಿ ಶಾಸಕರ ಜೊತೆಗೆ ಹಾಲಿ ಶಾಸಕರಿಗೂ ಎಚ್ಚರಿಕೆಯ ಕರೆ ಕೊಟ್ಟಿದ್ದಾರೆ.ಈ ಮೂಲಕ ಮುಂಬರುವ ಚುನಾವಣೆಗೆ ಪಕ್ಷಕ್ಕೆ ಹಿನ್ನಡೆಯಾಗಬಾರದು ಯಾರು ಕೂಟ ಟಿಕೆಟ್ಗೆ ಲಾಭಿ ನಡೆಸಕೂಡದು ಎಂಬ ಸೌಮ್ಯ ಸಂದೇಶ ರವಾನಿಸಿದ್ದಾರೆ.
ಚುನಾವಣೆಗೆ ಟಾಸ್ಕ್ ನೀಡಿದ ಬಿಜೆಪಿ ನಾಯಕರು
ಇನ್ನೂ 2023 ರ ಚುನಾವಣೆಗೆ ಸೋತ ಶಾಸಕರಿಗೆ ಬಿಜೆಪಿ ಟಾಸ್ಕ್ ನೀಡಿದ್ದು ಪಕ್ಷ ಸಂಘಟನೆಗೆ ಕರೆ ನೀಡಿದೆ.ಸೋತಿರುವ ಕ್ಷೇತ್ರದಲ್ಲಿ ಬೂತ್ ಮಟ್ಡದಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಬೇಕು,ಸ್ಥಳೀಯ ಮಟ್ಡದಲ್ಲಿ ಆಕ್ಟೀವ್ ಆಗಿರಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯನ್ನು ಜನರಿಗೆ ಮುಟ್ಟಿಸಬೇಕು.ವಿಪಕ್ಷಗಳ ವೈಫಲ್ಯವನ್ನು ಬಂಡವಾಳವಾಗಿಟ್ಟುಕೊಳ್ಳಬೇಕು ಅಲ್ಲದೇ ಕ್ಷೇತ್ರದಲ್ಲಿ ಯಾವುದೇ ಡ್ಯಾಮೇಜ್ ಮಾಡಿಕೊಳ್ಳದಂತೆ ವೈಯಕ್ತಿಕ ವರ್ಚಸ್ಸನ್ನು ಕೂಡ ಹೆಚ್ಚಿಸಿಕೊಳ್ಳಲು ಕರೆ ನೀಡಿದ್ದಾರೆ.