ಶೋಷಿತ ವರ್ಗಗಳಿಗೆ ಧ್ವನಿಯಾಗಿ ತಮ್ಮ ಹೆಸರಿನನಂತೆ ಬಸವಣ್ಣನವರ ಆಡಳಿತ ನೀಡಿ — ಬಾಡದ ಆನಂದರಾಜ್.

IMG-20210728-WA0015

 

ದಾವಣಗೆರೆ ಜು 28 – ಬಿಜೆಪಿ ಪಕ್ಷ ಎಂದರೆ ಮುಂದುವರೆದವರ ಪಕ್ಷ ಎಂಬ ಮಾತು ಇತ್ತು ಇಂದು ಶೋಷಿತ ವರ್ಗಗಳೂ ಕೂಡ ಬೆಂಬಲಿಸಿದ್ದಾವೆ ಆದ್ದರಿಂದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಮ್ಮ ಹೆಸರಿನಂತೆ ಹನ್ನೆರಡನೇ ಶತಮಾನದ ಬಸವಣ್ಣರ ಮಾದರಿ ಆಡಳಿತ ನೀಡುವಂತೆ ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಶುಭ ಕೋರುತ್ತಾ ಒತ್ತಾಯಿದ್ದಾರೆ.

ಬಸವಣ್ಣ ಮತ್ತು ಕನಕದಾಸರ ನಾಡಿನಲ್ಲಿ ಹುಟ್ಟಿ ಬೆಳೆದು ಇಂದು ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಯಿಯವರು ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಬೇಕು. ಮಾಜಿಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪರವರ ಸಚಿವ ಸಂಪುಟದಲ್ಲಿದ್ದವರನ್ನ ಕೈ ಬಿಟ್ಟು ಇನ್ನುಳಿದ ತುಳಿತಕ್ಕೆ ಒಳಗಾದ ಸಮೂದಾಯದರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಜನಪರ ಆಡಳಿತ ನೀಡಲೆಂದು ಬಾಡದ ಆನಂದರಾಜ್ ರವರು ಸಲಹೆ ನೀಡಿದ್ದಾರೆ.

ಅನೇಕ ಶೋಷಿತ ಸಮೂದಾಯಗಳಿಗೆ ರಾಜಕೀಯವಾಗಿ ಶೈಕ್ಷಣೆಕವಾಗಿ ಮತ್ತು ಸಾಮಾಜಿಕ ನ್ಯಾಯವಿಲ್ಲದೆ ತುಳಿತಕ್ಕೆ ಒಳಗಾಗಿರುವ ಸಮೂದಾಯಗಳ ಕಡೆ ಗಮನಹರಿಸಬೇಕೇಂದು ಒತ್ತಾಯಿದ್ದಾರೆ.
ಮದ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೊಬ್ಬರಿಗೆ ಮಂತ್ರಿ ಸ್ಥಾನ ನೀಡುವಂತೆ ಈ ಮೂಲಕ ಬಾಡದ ಆನಂದರಾಜ್ ಒತ್ತಾಯಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!