ಬಿ ಎಸ್ ವೈರಂತೆ ನುಡಿದಂತೆ ನಡೆಯುವವರು ಸಿದ್ದೇಶ್ವರ್ – ಶಿವನಗೌಡ ಪಾಟೀಲ್

ದಾವಣಗೆರೆ: ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುವ ಡಾ. ಜಿ. ಎಂ. ಸಿದ್ದೇಶ್ವರ ಅವರು ಅಭಿವೃದ್ಧಿಯ ಹರಿಕಾರರು. ನುಡಿದಂತೆ ನಡೆಯುವ ನಾಯಕ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಗೆ ನಡೆದಂತೆ, ನುಡಿದಂತೆ ನಡೆದುಕೊಳ್ಳುತ್ತಾರೆಯೋ ಅದೇ ರೀತಿಯಲ್ಲಿ ಇವರು ನಡೆದುಕೊಳ್ಳುತ್ತಾರೆ. ನಂಬಿದವರನ್ನು ಎಂದಿಗೂ ಕೈಬಿಟ್ಟವರಲ್ಲ.
ಲೋಕಸಭಾ ಸದಸ್ಯರಾಗಿ ನಾಲ್ಕು ಬಾರಿ ಸತತವಾಗಿ ಜಯ ಗಳಿಸಿ, ಪಕ್ಷವನ್ನು ಸದೃಢಗೊಳಿಸಿದ ನಾಯಕರೆಂದರೆ ಸಿದ್ದೇಶ್ವರ್ ಅವರು ಮಾತ್ರ. ಅನೇಕ ಕಾರ್ಯಕರ್ತರು, ಮುಖಂಡರ ಶ್ರಮ ಗುರುತಿಸಿ ಅವರಿಗೆ ಅಧಿಕಾರ ನೀಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನೇರ ನುಡಿ, ಶೀಘ್ರಿ ಕೋಪಿಯಾದರೂ ದೀರ್ಘ ದ್ವೇಷಿಯಂತೂ ಅಲ್ಲ. ಅವರದ್ದು ಮಾತೃ ಹೃದಯ. ತಪ್ಪು ಮಾಡಿದಾಗ ಕೋಪಗೊಳ್ಳುತ್ತಾರೆ. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಾರೆ.
ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದೇಶ್ವರ್ ಅವರು ಹೋಗದ ಹಳ್ಳಿಗಳಿಲ್ಲ ಎನ್ನುವ ರೀತಿಯಲ್ಲಿ ಇಡೀ ಜಿಲ್ಲೆಯನ್ನು ಸುತ್ತಿದ್ದಾರೆ. ಕೇವಲ ಚುನಾವಣೆ ವೇಳೆ ಮಾತ್ರ ಹೋಗುವುದಿಲ್ಲ. ಯಾವುದೇ ಕಾರ್ಯಕ್ರಮಗಳಿಗೂ ಕರೆದರೂ ಇಲ್ಲ ಎನ್ನದೇ ಹೋಗುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೂ ಹತ್ತಿರವಾಗಿದ್ದಾರೆ. ಇಂದಿಗೂ ಅವರು ಪಕ್ಷ ಸಂಘಟನೆಗಾಗಿ ಓಡಾಡುವ ಪರಿ ಎಲ್ಲರನ್ನೂ ನಾಚಿಸುವಂಥದ್ದು. ಸಣ್ಣ ಕಾರ್ಯಕರ್ತರಿಂದ ಹಿಡಿದು ದೊಡ್ಡ ಮುಖಂಡರಿಗೆ ಸಿಗುವ ನಾಯಕ ಎಂಬ ಹೆಗ್ಗಳಿಕೆ ಉಳಿಸಿಕೊಂಡು ಬಂದಿದ್ದಾರೆ.
ನನ್ನಂಥ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಸಿದ್ದೇಶ್ವರ್ ಅವರು ಸ್ಪೂರ್ತಿಯ ಚಿಲುಮೆ. ಎಲ್ಲರೊಟ್ಟಿಗೆ ಬೆರೆಯುವ, ಪ್ರೋತ್ಸಾಹಿಸುವ ಅದ್ಭುತ ಗುಣ ಅವರಲ್ಲಿದೆ. ಈಗಲೂ 20 ರ ಯುವಕನೂ ನಾಚುವಂತೆ ಪ್ರವಾಸ ಮಾಡುತ್ತಾರೆ.
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಾರೆ. ಯಾವುದೇ ತಾಲೂಕು ಇರಲಿ. ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಬರುತ್ತೇನೆ ಎಂದು ಹೇಳಿದರೆ ಖಂಡಿತವಾಗಿಯೂ ಹೋಗುತ್ತಾರೆ. ಎಲ್ಲರ ಮನದಲ್ಲಿ ಹೃದಯ ಸಾಮ್ರಾಟರಾಗಿ ನೆಲೆಸಿರುವ
ಭೀಮಸಮುದ್ರದ ಭೀಮ ಎಂದೇ ಕರೆಯಲ್ಪಡುವ ಸಿದ್ದೇಶ್ವರ್ ಅವರಿಗೆ ಒಳ್ಳೆಯ ಆರೋಗ್ಯವನ್ನು ದೇವರು ಕರುಣಿಸಲಿ. ಮತ್ತಷ್ಟು ಜನರ ಸೇವೆ ಮಾಡಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಶಿವನಗೌಡ ಟಿ ಪಾಟೀಲ್, ಬಿಜೆಪಿ ಯುವ ಮುಖಂಡರು,ಮಾಜಿ ಸದಸ್ಯರು ಮಹಾನಗರ ಪಾಲಿಕೆ ದಾವಣಗೆರೆ