ರಮೇಶ ಭೂಸನೂರ ಪರ ನಗರಾಭಿವೃದ್ಧಿ ಸಚಿವ ಮತಯಾಚನೆ

ಸಿಂದಗಿ :ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಅವರು ಸೋಮವಾರದಂದು ಸಿಂದಗಿ ತಾಲ್ಲೂಕಿನ ದೇವರ ನಾವದಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ್ ಭೂಸನೂರು ಪರ ಮತಯಾಚನೆ ಮಾಡಿದರು.
ಗ್ರಾಮಸ್ಥರ ಸಭೆ ನಡೆಸಿದ ಶ್ರೀ ಬೈರತಿ ಬಸವರಾಜ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದು ಉತ್ತಮ ಅಭಿವೃದ್ಧಿ ಹೊಂದುತ್ತಿರುವ ದೇಶ ರಾಜ್ಯ ನಮ್ಮದಾಗಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಈ ಉಪಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕರೆ ನೀಡಿದರು.
ಬಸವರಾಜ ಬೊಮ್ಮಣ್ಣ ಜೋಗಿ, ಶಿವಾನಂದ ಬೊಮ್ಮಣ್ಣ ಜೋಗಿ ಮಲ್ಲು ಬಂಡೆಗಾರ್, ರವಿ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.