Singer: ಜನಪದ ಉಳಿದರೆ ಸಂಸ್ಕೃತಿಯು ಉಳಿಯುತ್ತೆ – ತತ್ವಪದ ಗಾಯಕ ಪರಮೇಶ್ವರಪ್ಪ ಕತ್ತಿಗೆ

ದಾವಣಗೆರೆ: (Singer) ಇಂದಿನ ಆಧುನಿಕ ಸಂಸ್ಕೃತಿಯ ನಡುವೆ ನಮ್ಮ ಮೂಲ ಸಂಸ್ಕೃತಿ ಜನಪದವು ಸರಿ ಹೋಗುತ್ತದೆ ಇದು ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಉಳಿಸುವ ಕಾರ್ಯ ಮಹತ್ತರವಾದದ್ದು ಆ ಕಾರ್ಯದಲ್ಲಿ ಎಲ್ಲರೂ ಭಾಗಿಯಾದಾಗ ಸಂಸ್ಕೃತಿ ಉಳಿಯುತ್ತದೆ ಮತ್ತು ಬಳಿಯುತ್ತದೆ ಮುಂದಿನ ಪೀಳಿಗೆಗೆ ಅದು ಇತಿಹಾಸವಾಗುತ್ತದೆ ಎಂದು ಜನಪದ ಹಾಡುಗಾರ ತತ್ವಪದ ಗಾಯಕರಾದ ಶ್ರೀ ಪರಮೇಶ್ವರಪ್ಪ ಕತ್ತಿಗೆ ಅವರು ಹೇಳಿದರು.
ಅವರಿಂದ ನಗರದ ಸರ್ಕಾರಿ ಪ್ರಬಂಧ ರಜೆ ಕಾಲೇಜಿನ ಜಾನಪದ ಉತ್ಸವ 2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನತೆ ತಂತ್ರಜ್ಞಾನ ಆಧಾರಿತ ಸಂಸ್ಕೃತಿಗೆ ಮಾರೋ ಹೋಗಿ ನಮ್ಮ ಮೂಲ ಸಂಸ್ಕೃತಿಯ ಬೇರು ಜನಪದವನ್ನು ಮರೆತೋಗಿದ್ದಾರೆ ಎಷ್ಟೋ ಜನಕ್ಕೆ ಅದು ಗೊತ್ತೇ ಇಲ್ಲ ಇದರ ನಡುವೆ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶದೊಂದಿಗೆ ಈ ಜನಪದ ಉಳವಿಕೆಯ ಒಂದು ಕಾರ್ಯಕ್ರಮವನ್ನು ರಾಜ್ಯದಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆಚರಣೆ ಮೂಲಕ ಗ್ರಾಮೀಣತೊಡನ್ನು ಉಳಿಸುವ ಪ್ರಯತ್ನ ಸ್ವಾಗತ.
ನರದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಜನಪದ ಉತ್ಸವ ಅಡಿಗೆಲ್ಲ ಆಗಲಿ ಹಾಗೂ ಈ ಸಂಸ್ಕೃತಿಯು ಪ್ರತಿವರ್ಷ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಆಚರಣೆಯಾಗಲಿ, ಇದರಿಂದ ವಿದ್ಯಾರ್ಥಿಗಳಲ್ಲಿ ನಮ್ಮ ಗ್ರಾಮೀಣ ಜೀವನ ಅವರ ಬದುಕು ಅವರ ಸಂಸ್ಕೃತಿ ಎಲ್ಲವೂ ಕೂಡ ತಿಳಿಸಿದಂತಾಗುತ್ತದೆ.
ಜನಪದ ಸಂಸ್ಕೃತಿಗಳಾದ ಬಂಜಾರ ಸಂಸ್ಕೃತಿ ತುಳು ಸಂಸ್ಕೃತಿ, ಕೊಡವ ಸಂಸ್ಕೃತಿ ಗಳ ಆಚರಣೆ ಕಾಲೇಜಿನಲ್ಲಿ ವಿಜೃಂಭಿಸಿತ್ತು.
ಬಂಜಾರ ಸಂಸ್ಕೃತಿಯ ಹಿರಿಯರ ಪೂಜೆ ಧಬ್ಯೂಕಾರ ಪ್ರದರ್ಶನ, ಇಸ್ಲಾಂ ಸಂಸ್ಕೃತಿಯ ಆಚರಣೆ ಹಳ್ಳಿಗಳ ಸುಗ್ಗಿ ಹಬ್ಬ ,ಹಬ್ಬಗಳ ಮಾದರಿ ಹಳ್ಳಿಯ ಆಟೋಗಳು ಕೃಷಿ ಉಪಕರಣಗಳ ಪ್ರದರ್ಶನ ಕೂಡ ಪ್ರದರ್ಶನವಾಯಿತು. ಎಲ್ಲಾ ಸಂಸ್ಕೃತಿಯ ನೃತ್ಯಗಳು ತುಳು ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳು ಕಾಲೇಜಿನಲ್ಲಿ ಪ್ರದರ್ಶನಗೊಂಡವು.
ಕಂಸಾಳೆ ವೀರಗಾಸೆ ನಂದಿಕೋಲು ಕುಣಿತಗಳಲ್ಲಿ ವಿದ್ಯಾರ್ಥಿಗಳು ತುಂಬಾ ಶ್ರದ್ಧೆಯಿಂದ ಭಾಗವಹಿಸಿ ಪ್ರಸ್ತುತಪಡಿಸಿದರು.
ನಿರ್ವಣ ಶಾಸ್ತ್ರದ ವಿದ್ಯಾರ್ಥಿಗಳಿಂದ ದೇಸಿಯ ಆಹಾರಮೇಳವು ಆಯೋಜನಗೊಂಡಿತ್ತು.
ಆರಂಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಪೂರ್ಣಗೊಂಡ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಸಮೃದ್ಧಿ ಇಲಾಖೆ ನಿರ್ದೇಶಕರಾದ ಶ್ರೀ ರವಿಚಂದ್ರ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳು ಇವೆ ಆದರೆ ಅವಳನ್ನು ಪ್ರಸ್ತುತಪಡಿಸಲು ಈ ತರದ ವೇದಿಕೆಗಳು ನಿರ್ಮಾಣವಾಗುವುದು ಮುಖ್ಯ ಎಂದು ಹೇಳಿದರು. ಇಂದಿನ ದಿನಗಳಲ್ಲಿ ಕಾಲೇಜಿನಲ್ಲಿಯೇ ಯುವ ಸೌರಭ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳು ಇರತಕ್ಕಂತ ಕೌಶಲ್ಯಗಳನ್ನು ಹೊರತೈವ ಪ್ರಯತ್ನ ಇಲಾಖೆಯಿಂದ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರಫೆಸರ್ ಬಿ ಸಿ ತಹಸಿಲ್ದಾರ್ ಅವರು ವಹಿಸಿದ್ದರು ಕಾಲೇಜಿನ ಎಲ್ಲಾ ಅಭಿವೃದ್ಧಿ ಸಮಿತಿ ಸದಸ್ಯರು ಉಪಚಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಯಶಸ್ವಿನಿ ಶ್ರೀಮತಿ ಯಶಸ್ವಿನಿ ರವರು ಕಾರ್ಯಕ್ರಮ ನಿರೂಪಿಸಿದರೆ ಸಂಚಾಲಕರಾದ ಪ್ರೊ ನರೇಶ್ ರವರು ಪ್ರಾಸ್ತಾವಿಕ ಮಾತನಾಡಿದರು
ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ದೇಶಿ ಉಡುಗೆಯಲ್ಲಿ ವಿವಿಧ ರೀತಿಯ ಸಂಸ್ಕೃತಿಯನ್ನು ಬಿಂಬಿಸುವಂತೆ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು