Smart City: ನಮನ ಅಕಾಡೆಮಿಯ “ಸ್ವಾತಂತ್ರ್ಯ ನಮನ” ನೃತ್ಯರೂಪಕಕ್ಕೆ ಮನಸೋತ ಜಿಲ್ಲಾಧಿಕಾರಿ ಹಾಗೂ ಎಸ್ ಪಿ

ದಾವಣಗೆರೆ: ಅ 1- 75ನೇ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಗರದ ಗುರುಭವನ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿದ್ದು, ಕೊನೆ ದಿನವಾದ ಇಂದು ಕೆ. ಮಾಧವಿ ನೇತೃತ್ವದ ತಂಡ ‘ಸ್ವಾತಂತ್ರ್ಯ ನಮನ’ ಎಂಬ ನೃತ್ಯರೂಪಕವನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೋಲಿಸ್ ವರಿಷ್ಟಾಧೀಕಾರಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಎಇಓ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿ ರವೀಂದ್ರ ಮಲ್ಲಾಪುರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ನೃತ್ಯರೂಪಕವನ್ನು ಪ್ರಸ್ತುಪಡಿಸಿದ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದರು.