ಸೂರಗೊಂಡನಕೊಪ್ಪ : ರಜತ ಮಹೋತ್ಸವ ಸಮಾರಂಭಕ್ಕೆ ಗಿರೀಶ್ ಡಿ.ಆರ್ ಆಹ್ವಾನ

girish

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಐತಿಹಾಸಿಕ ಸುಪ್ರಸಿದ್ದ ಕ್ಷೇತ್ರ ಭಾಯಾಘಡ್  (ಸೂರಗೊಂಡನಕೊಪ್ಪ) ದಲ್ಲಿ ಮೇ. 15 ಮತ್ತು 16ರಂದು ಸಂತ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ದೇವಿ ದೇವಾಲಯದ 25ನೇ ವರ್ಷದ ಪ್ರತಿಷ್ಠಾಪನಾ ಅಂಗವಾಗಿ ರಜತ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಸಮಾಜದ ಎಲ್ಲಾ ಬಂಧು-ಬಾ0ಧವರು ಆಗಮಿಸಬೇಕೆಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್ ಪ್ರಕಟಣೆ ಮೂಲಕ ಕೋರಿದ್ದಾರೆ.

ಬಂಜಾರ ಧರ್ಮಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಮೇ.15ರ ಭಾನುವಾರ ಸಂಜೆ 5 ಗಂಟೆಗೆ ಧರ್ಮಸಭೆ ಜರುಗಲಿದೆ. ಸೋಮವಾರದಂದು ಬೆಳಿಗ್ಗೆ 8.30ಕ್ಕೆ ಭೋಗ್ ಪೂಜಾ, 10.30ರಿಂದ ವೇದಿಕೆ ಕಾರ್ಯಕ್ರಮ ಮತ್ತು ಬಂಜಾರ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಮಾಜದ ಧರ್ಮಗುರುಗಳು, ಜನಪ್ರತಿನಿಧಿಗಳು, ತಾಂಡದ ಡಾವೋ, ಕಾರ್‌ಬಾರಿಗಳು, ಸಮಾಜದ ಸಮಸ್ತ ಬಂಧು-ಬಾ0ಧವರು ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ಗಿರೀಶ್ ಡಿ.ಆರ್ ಪ್ರಕಟಣೆ ಮೂಲಕ ಕೋರಿದ್ದಾರೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!