ಸಿದ್ದರಾಮಯ್ಯನವರ ಅಮೃತಮಹೋತ್ಸವ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಎಸ್ ಎಸ್ ಮಲ್ಲಿಕಾರ್ಜುನ್

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಗಸ್ಟ್ 3 ರಂದು ದಾವಣಗೆರೆ ಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 75 ನೇ ಅಮೃತ ಮಹೋತ್ಸವದ ಸ್ಥಳ ಪರಿಶೀಲನೆ ಮಾಡಿದರು.
ಪೆಂಡಾಲ್ ಹಾಗೂ ಇನ್ನಿತರ ಕಾಮಗಾರಿ ವೀಕ್ಷಿಸಿ, ಬೇಗ ಕೆಲಸ ಮುಗಿಸಲು ಸಲಹೆ ನೀಡಿದರು, ಈ ಸಂದರ್ಬದಲ್ಲಿ ಅಮೃತ ಮಹೋತ್ಸವದ ಪೆಂಡಾಲ್ ಉಸ್ತುವಾರಿಗಳಾದ ಮುದೆಗೌಡ್ರ ಗಿರೀಶ್, ಶಿವಗಂಗಾ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಗಾನಹಳ್ಳಿ ಪರಶುರಾಮ್, ಬೂದಳ ಬಾಬು, ಹರೀಶ್ ಬಸಾಪುರ ಇನ್ನಿತರರು ಉಪಸ್ಥಿತರಿದ್ದರು.