ss phone: ಶಾಸಕ ಶಾಮನೂರು ಶಿವಶಂಕರಪ್ಪ ಡಿಸಿ ಹಾಗೂ ಎಸ್ ಪಿ ಗೆ ಪೊನ್ ಮಾಡಿದ್ದು ಯಾಕೆ.?

ದಾವಣಗೆರೆ: ದಾವಣಗೆರೆ ನಗರದ ಹಳೇಭಾಗದಲ್ಲಿ ಭಾರಿ ವಾಹನಗಳಿಗೆ ನಿಷೇದಿಸಬೇಕೆಂಬ ಜಿಲ್ಲಾಡಳಿತ ತೀರ್ಮಾನವನ್ನು ವಿರೋಧಿಸಿರುವ ಚೌಕಿಪೇಟೆ, ಎಂ.ಜಿ.ರಸ್ತೆ ಸೇರಿದಂತೆ ಹಳೆಭಾಗದ ವ್ಯಾಪಾರಸ್ಥರು ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪನವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ರಾತ್ರಿ ವೇಳೆಯಲ್ಲಿ ಲೋಡಿಂಗ್ ಆನ್ ಲೋಡಿಂಗ್ ಹಮಾಲರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂದು ವ್ಯಾಪಾರಸ್ಥರು ಶಾಸಕರ ಗಮನಕ್ಕೆ ತಂದರು.
ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿದ ಶಾಸಕರು ತಕ್ಷಣ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈಗಿರುವಂತೆಯೇ ವಾಹನಗಳ ಪ್ರವೇಶವನ್ನು ಮುಂದುವರೆಸುವಂತೆ ಸೂಚಿಸಿದರು.
ದಾವಣಗೆರೆ ಎಸ್ ಪಿ ರಿಷ್ಯಂತ್ ಇತ್ತೀಚೆಗೆ ಸಭೆ ನಡೆಸಿ ಹಳೆಭಾಗದಲ್ಲಿ ಸಂಚಾರಿ ವ್ಯವಸ್ಥೆಯ ಸುಧಾರಣೆಗಾಗಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಬವಾರಿ ವಾಹನಗಳ ಸಂಚಾರ ನಿಷೇಧ ಮಾಡುವ ಬಗ್ಗೆ ಚಿಂತಿಸಲಾಗಿತ್ತು, ಆದ್ರೆ ಇಂದು ಶಾಮನೂರು ಮಾತಿಗೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು.
ಈ ಸಂದರ್ಭದಲ್ಲಿ ವ್ಯಾಪಾರಸ್ಥರುಗಳಾದ ಬಲಭದ್ರಶೇಟ್, ಡಾ. ಎಸ್.ಬಿ.ಮುರುಗೇಶ್,ಕೃಷ್ಣಪ್ಪ, ಅನಿಲ್,ಕೆ ಎಲ್ ಪಿ ಸ್ವಾಮಿ, ಲಿಂಗರಾಜ್, ಆರ್.ಜಿ.ಸುನಿಲ್, ಬಾಗಿರೇಚಾ, ಪಂಚಣ್ಣ , ಕಕ್ಕರಗೊಳ್ಳ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.