ದಾವಣಗೆರೆಯಲ್ಲಿ ಡಿ.17 ರಂದು ಪುರುಷರ ಹಾಗೂ ಮಹಿಳೆಯರ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ

ದಾವಣಗೆರೆ: ದಾವಣಗೆರೆಯ “ಮಾಯಾ” ಸ್ ಫ್ರೆಂಡ್ಸ್ ಗ್ರೂಪ್ ಮತ್ತು ಜಿ ಎಸ್ ಎನ್ ಗ್ಲೊಬಲ್ ಸ್ಪೋರ್ಟ್ಸ್ ನ್ಯೂಟ್ರಿಷನ್ ವತಿಯಿಂದ ಡಿಸೆಂಬರ್ 17 ರ ಸಂಜೆ 6 ಗಂಟೆಗೆ ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ ನಡೆಯಲಿದೆ.
ಪುರುಷರ ಹಾಗೂ ವುಮೆನ್ಸ್ ಸ್ಪೋರ್ಟ್ಸ್ ಫಿಸಿಕ್ ವಿಭಾಗದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಮಹೇಶ್ (ಮಾಯಾ) ತಿಳಿಸಿದ್ದಾರೆ. ಅಂದು ಸಂಜೆ ರಾಜ್ಯದ ವಿವಿಧ ಭಾಗಗಳಿಂದ ದೇಹದಾರ್ಡ್ಯ ಪಟುಗಳು ದಾವಣಗೆರೆಗೆ ಬರುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ 5 ನೇ ವರ್ಷದ” ಕರ್ನಾಟಕ ಸಿರಿ” – 2022 ಎಂದು ನಾಮಕರಿಸಿ ಈ ಸ್ಪರ್ಧೆಯನ್ನ ನಡೆಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ವೀರೇಂದ್ರ ಪಪ್ಪಿ, ಸವಿತಾಭಾಯಿ ಮಲ್ಲೇಶ್ ನಾಯ್ಕ್ ಉದ್ಘಾಟಿಸಲಿದ್ದಾರೆ.
ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ ಮತ್ತು ಮೊಟ್ಟಮೊದಲ ಬಾರಿಗೆ ದಾವಣಗೆರೆಯಲ್ಲಿ ವುಮೆನ್ಸ್ ಫಿಸಿಕ್ ಮಾಡೆಲ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.ಈ ಸ್ಪರ್ಧೆಯಲ್ಲಿ 55 ಕೆಜಿ ವಿಭಾಗದಿಂದ 90 ಕೆಜಿ ವಿಭಾಗದ ದೇಹದಾರ್ಡ್ಯ ಪಟುಗಳು ಭಾಗವಹಿಸಲಿದ್ದಾರೆ. ಪ್ರತಿ ವಿಭಾಗದ 5 ವಿಜೆತರಿಗೆ 15,000 ನಗದು ಬಹುಮಾನ ನೀಡಲಾಗುತ್ತೆ.
ಕರ್ನಾಟಕ ಸಿರಿ ಪಡೆದವರಿಗೆ 30,000 ನಗದು ಪ್ರಶಸ್ತಿ, ಪಪ್ಪಿಸ್ ಕ್ಲಾಸಿಕ್ ಮೋಸ್ಟ ಮಸ್ಕೂಲರ್ ವಿಜೆತರಿಗೆ 20,000 ಸಾವಿರ ಹಾಗೂ ಶ್ರೀ ಹರಿ ಕ್ಲಾಸಿಕ್ ಮೋಸ್ಟ್ ಬೆಸ್ಟ್ ಪೋಸರ್ ವಿಜೆತರಿಗೆ 10,000 ಸಾವಿರ ನಗದು ಬಹುಮಾನ ನೀಡಲಾಗುತ್ತೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9591919162, 7338505558