ಸಕ್ಕರೆ ತಿಂದ ಶಾಣ್ಯಾ ನಾಟಕ ಪ್ರದರ್ಶನ

ಸಕ್ಕರೆ ತಿಂದ ಶಾಣ್ಯಾ ನಾಟಕ ಪ್ರದರ್ಶನ

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೃತ್ತಿರಂಗಭೂಮಿ- ರಂಗಾಯಣದಿಂದ ಏಪ್ರಿಲ್ ೧ ಮತ್ತು ೨ ರಂದು ಸಂಜೆ ೬:೩೦ಕ್ಕೆ ನಗರದ ಎಂ.ಸಿ.ಸಿ. ಬಿ’ ಬ್ಲಾಕ್ ನಲ್ಲಿರುವ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಸಕ್ಕರೆ ತಿಂದ ಶಾಣ್ಯಾ ನಾಟಕ ಪ್ರದರ್ಶನಗೊಳ್ಳಲಿದೆ.

ಮರಾಠಿಯಲ್ಲಿ ಲೇಖಕ ವಿದ್ಯಾಸಾಗರ ಅಧ್ಯಾಪಕರವರಿಂದ ರಚಿತವಾದ ನಾಟಕ ಇದಾಗಿದ್ದು, ಈಗಾಗಲೇ ಸಾವಿರಾರು ಪ್ರದರ್ಶನವನ್ನು ಕಂಡಿದೆ. ದೈನಂದಿನ ಬದುಕಿನಲ್ಲಿ ಜನಸಾಮನ್ಯರು ಎದುರಿಸುವ ಮಧುಮೇಹದ ಸುತ್ತ ಹೆಣೆಯಲ್ಪಟ್ಟಿರುವ ಕಥಾ ಹಂದರದ ನಾಟಕೀಯ ಅಂಶಗಳು ಇಲ್ಲಿ ಕಾಣಸಿಗುತ್ತವೆ. ಪ್ರವೇಶ ಶುಲ್ಕ ೧೦೦ ರೂ., ಇದ್ದು, ನಗರದ ರಸವಂತಿ ಕೂಲ್ ಡ್ರಿಂಕ್ಸ್, ವೃತ್ತಿ ರಂಗಭೂಮಿ ರಂಗಾಯಣ ಕಚೇರಿಯಲ್ಲಿ ಟಿಕೇಟ್ ದೊರೆಯುತ್ತವೆ.

Leave a Reply

Your email address will not be published. Required fields are marked *

error: Content is protected !!