Viral Video: AGM ಮೀಟಿಂಗ್ನಲ್ಲಿ ಆತ್ಮಹತ್ಯೆ ಬೆದರಿಕೆ ಒಡ್ಡಿ, ರೂಪ ಐಪಿಎಸ್ ಕಾರಣ ಎಂದು ಕರಕುಶಲ ನಿಗಮ ಅಧ್ಯಕ್ಷ

ದಾವಣಗೆರೆ: ಮೇ.27ರಂದು ನಡೆದ annual general meeting ನಲ್ಲಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ತಾನು ಖಿನ್ನತೆಗೆ ಒಳಗಾದರೆ ರೂಪಾ ಕಾರಣ ಎಂದು ಹೇಳುವ ಮೂಲಕ ಬೆದರಿಕೆ ಒಡ್ಡಿರುವ ವಿಡಿಯೋವೊಂದು ವಾಟ್ಸಾಪ್ನಲ್ಲಿ ಹರಿದಾಡಿದೆ. AGM ಮೀಟಿಂಗ್ನಲ್ಲಿ ಆತ್ಮಹತ್ಯೆ ಬೆದರಿಕೆ ಒಡ್ಡಿ, ರೂಪ ಐಪಿಎಸ್ ಕಾರಣ ಎಂದು ಕರಕುಶಲ ನಿಗಮ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಒಂದು ಗಂಟೆ ಕೂಗಾಡುತ್ತ, ಎಜಿಎಂ ನಡೆಸಲು ಬಿಟ್ಟಿರುವುದಿಲ್ಲ. ಈ ರೀತಿ ಆತ್ಮಹತ್ಯೆಯ ಬೆದರಿಕೆ ಒಡ್ಡುವುದು ಐಪಿಸಿ ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರ ಬಗ್ಗೆ case ಮಾಡಲು ಅನುಮತಿ ಕೊಡಬೇಕೆಂದು ನಾನು 6 ಪುಟಗಳ ವರದಿಯಲ್ಲಿ chief secretary ಯವರಿಗೆ ಕೋರಿದ್ದೇನೆ. ನನ್ನ ಮುಖಕ್ಕೆ acid ಎರಚಿಸುವ ಧಮಕಿ ಕೂಡ ಚೇರ್ಮನ್ ಕೊಟ್ಟಿದ್ದು, ನಾನು ಇದು ಯಾವುದೂ ಲೆಕ್ಕಿಸದೆ, ಕೆಲಸ ಮಾಡುತ್ತಾ ಇದ್ದೇನೆ. ಗೂಂಡಾ ಪ್ರವೃತ್ತಿಯ ಇವರು ಆತ್ಮಹತ್ಯೆಯ ಬೆದರಿಕೆ ಬಗ್ಗೆ ಹಾಗೂ ಆಸಿಡ್ ಬೆದರಿಕೆ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ, ಸರಕಾರಕ್ಕೆ ಮುಜುಗರ ಆಗಬಾರದೆಂದು ತಿಳಿಸಿದ್ದಾರೆ.