ಶೋಭಾ ರಂಗನಾಥ್ ರಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ.    

Swami Vivekananda Goodwill Award to Shobha Ranganath.

ದಾವಣಗೆರೆ: ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ  ನಿರ್ವಹಿಸುತ್ತಿರುವ  ಶ್ರೀಮತಿ ಶೋಭಾ ರಂಗನಾಥ್  ಅವರು ಸ್ವಾಮಿ ವಿವೇಕಾನಂದ ಸದ್ಬಾವನ ರಾಜ್ಯ  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಂಗೀತ ತರಬೇತಿ ನೀಡುತ್ತಿರುವ ಮತ್ತು ಜಿಲ್ಲಾ, ಹಾಗೂ  ರಾಜ್ಯಮಟ್ಟದ  ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾರ್ಯ  ನಿರ್ವಹಿಸುತ್ತಿರುವ ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ  ಯುವ  ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಮತ್ತು  ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಪುಂಡಲಿಕ ಮುರಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಆಯ್ಕೆ  ಮಾಡಿದೆ. 2023 ಜನವರಿ 29 ರ ಸಂಜೆ 5:30ಕ್ಕೆ ಮುದ್ದೇಬಿಹಾಳ್ ನಗರದ ವಿ ಬಿ ಸಿ  ಮೈದಾನದಲ್ಲಿ ನಡೆಲಿರುವ ಸ್ವಾಮಿ ವಿವೇಕಾನಂದ ಜಯಂತಿ ರಾಜ್ಯಯುವ ಸಮ್ಮೇಳನ. ಸಾಂಸ್ಕೃತಿಕ  ವೈಭವ. ಹಾಗೂ ಸ್ವಾಮಿ ವಿವೇಕಾನಂದ ಸದ್ಭಾವನ  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಮತಿ ಶೋಭಾ  ರಂಗನಾಥ್  ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ದಾವಣಗೆರೆ  ಜಿಲ್ಲಾಧ್ಯಕ್ಷರಾದ ಎನ್. ಕೆ ಕೊಟ್ರೇಶ್ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!