ಸುರಕ್ಷತೆಗಾಗಿ ಟೈಕ್ಟಾಂಡೋ ಅವಶ್ಯಕ: ದಿನೇಶ್ ಕೆ.ಶೆಟ್ಟಿ

WhatsApp Image 2022-03-01 at 13.55.39

ದಾವಣಗೆರೆ: ಮಕ್ಕಳು ಮತ್ತು ಮಹಿಳೆಯರಿಗೆ ಟೈಕ್ಟಾಂಡೋ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಕೇವಲ ಕಲಿಕೆಗೆ ಸೀಮಿತವಾಗದೇ ಕ್ರೀಡೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿಯವರು ತಿಳಿಸಿದರು. ಹರಿಹರ ನಗರದ ಗುರುಭವನದಲ್ಲಿ ದಾವಣಗೆರೆ ಜಿಲ್ಲೆಯ ಟೈಕ್ಟಾಂಡೋ ಸಂಸ್ಥೆಯಡಿಯಲ್ಲಿ ನಡೆದ ಕಲರ್ ಬೆಲ್ಟ್ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಕಲಿಕೆಗೆ ಸೀಮಿತವಾಗಿ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುವಂತಹ ಸ್ಥಿತಿ ಬರಲಿದ್ದು, ಈಗಿನಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜಸೇವಕ ನಂದಿಗಾವಿ ಶ್ರೀನಿವಾಸ, ಬಾಜಪ ಎಸ್ಸಿ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಕೊಂಡಜ್ಜಿ, ಸಮಾಜ ಸೇವಕ ಸಿದ್ದೇಶ ಬೆಳ್ಳೊಡಿ, ಚಿತ್ರದುರ್ಗ ಜಿಲ್ಲಾ ಟೈಕ್ಟಾಂಡೋ ಸಂಸ್ಥೆಯ ಕಾರ್ಯದರ್ಶಿ ವಿಶ್ವಕರ್ಮಚಾರಿ, ಅಂತರಾಷ್ಟ್ರೀಯ ತರಬೇತಿದಾರ ಮೂರ್ತಿ,  ಹರೀಶ್, ಪ್ರವೀಣ್, ಅಧ್ಯಕ್ಷರು ದಾವಣಗೆರೆ ಜಿಲ್ಲಾ ಟೈಕ್ಟಾಂಡೋ ಸಂಸ್ಥೆ, ಪ್ರಭಾಕರ, ದಿನೇಶ, ರಮೇಶ, ತರಬೇತಿದಾರರು ಉಪಸ್ಥಿತರಿದ್ದರು. ವೀರೇಶ್ ಅಜ್ಜಣ್ಣ ಸ್ವಾಗತಿಸಿದರು. ಚಂದನ ಪ್ರಾರ್ಥಿಸಿದರು. ಡಾಕ್ಟರ್ ಹನುಮಂತ ರಾಜು ನಿರೂಪಿಸಿದರು. ಶ್ರೀನಿವಾಸ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!