ಶಾಮನೂರು ಕುಟುಂಬದಿಂದ 45 ವರ್ಷ ಮೇಲ್ಪಟ್ಟವರ ಜೊತೆಗೆ 18 ವರ್ಷ ಮೇಲ್ಪಟ್ಟವರೆಗೂ ಸಹ ಲಸಿಕೆ ದೇಶದಲ್ಲಿ ಹೊಸ ಇತಿಹಾಸ: ಲಸಿಕೆ ಪಡೆದು ಸಾವು ತಪ್ಪಿಸಿ – ಎಸ್ ಎಸ್

ss_trust_free_vaccination_starts_above_18_plus[1]

ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಇಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಿತು.

ನಗರದಲ್ಲಿ ವ್ಯಾಕ್ಸಿನೇಷನ್ ಕ್ರಾಂತಿಯನ್ನೇ ಪ್ರಾರಂಭಿಸಿದ್ದ ಶಾಮನೂರು ಕುಟುಂಬ, ಈಗ 18 ವರ್ಷ ಮೇಲ್ಪಟ್ಟವರಿಗೂ ಉಚಿತ ವ್ಯಾಕ್ಸಿನೇಷನ್ ನೀಡುವ ಮೂಲಕ ಯುವಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸರ್ಕಾರ ಮೊದಲು 18 ವರ್ಷ ಮೇಲ್ಪಟ್ಟ ವರಿಗೆ ವ್ಯಾಕ್ಸಿನೇಷನ್ ನೀಡುವುದಾಗಿ ತಿಳಿಸಿ, ನಂತರ ತಾತ್ಕಾಲಿಕವಾಗಿ ಮುಂದೂಡಿದ್ದರು, ಆದರೆ ಶಾಮನೂರು ಕುಟುಂಬ 45 ವರ್ಷ ಮೇಲ್ಪಟ್ಟವರ ಜೊತೆಗೆ 18 ವರ್ಷ ಮೇಲ್ಪಟ್ಟವರೆಗೂ ಸಹ ವ್ಯಾಕ್ಸಿನೇಷನ್ ನೀಡುವ ಮೂಲಕ ದೇಶದಲ್ಲಿ ಹೊಸ ಇತಿಹಾಸ ನಿರ್ಮಿಸಿ ಎಲ್ಲರೂ ದಾವಣಗೆರೆ ಕಡೆ ನೋಡುವಂತೆ ಮಾಡಿದ್ದಾರೆ.

ಈ ಹಿಂದೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಶಿಕ್ಷಣ ಕ್ರಾಂತಿಯ ಮೂಲಕ ದಾವಣಗೆರೆ ನಗರವನ್ನು ದೇಶದಲ್ಲಿಯೇ ಪ್ರಸಿದ್ಧಿ ಮಾಡಿದಂತಹ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು, ಇಂದು ವೈಯಕ್ತಿಕವಾಗಿ ಉಚಿತ ಲಸಿಕೆ ನೀಡುವ ಮೂಲಕ ಮಗದೊಮ್ಮೆ ದಾವಣಗೆರೆ ನಗರವನ್ನು ದೇಶದಲ್ಲಿಯೇ ಪ್ರಸಿದ್ಧಿ ಮಾಡಿದ್ದಾರೆ.

ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆದ ನಾಗರೀಕರ ಯೋಗಕ್ಷೇಮವನ್ನು ವಿಚಾರಿಸಿದರು. ಲಸಿಕೆ ಪಡೆದವರು ಕರೋನಾ ಸಾವಿನಿಂದ ತಪ್ಪಿಸಿಕೊಂಡಂತೆ ಆಗಲಿದ್ದು, ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಮನವಿ ಮಾಡಿದರು. ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಸೂಚನೆ ಮೇರೆಗೆ ದಾವಣಗೆರೆಯ ಬಾಪೂಜಿ ಆಸ್ಪತ್ರೆ ಸಿಬ್ಬಂದಿವರ್ಗದವರು ಲಸಿಕಾ ಶಿಬಿರ ನಡೆಸಿಕೊಟ್ಟರು.ಲಸಿಕೆ ಪಡೆದ ನಾಗರೀಕರಿಗೆ ನೀರು ಮತ್ತು ಬಿಸ್ಕೇಟ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಮುಖಂಡರುಗಳಾದ ಉಮಾಶಂಕರ್, ರವಿಸ್ವಾಮಿ, ವಾರ್ಡ್‍ನ ಮುಖಂಡರುಗಳಾದ ವಿಜಯ ಎಸ್.ಜೈನ್, ಮೋಹನ್ ಲಾಲ್, ವೆಂಕಟೇಶ್, ಫಂಚಪ್ಪ ತೇರದಾಳ್, ಮಧು ಪವಾರ್, ಶ್ರೀಕಾಂತ್ ಬಗರೆ, ಪ್ರವೀಣ್ ಫಾರ್ಮ, ಪರಶುರಾಮ್, ಪ್ರದೀಪ್ ಕನ್ನವರ್, ರಾಜು ಚವಾಣ್, ಯುವರಾಜ್, ಸಿರಿಲ್, ಜಗದೀಶ್, ನಿಖಿತ್ ಶೆಟ್ಟಿ, ನಿಧಿಶ್ ಶೆಟ್ಟಿ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *

error: Content is protected !!