Viral Letter: ಕ್ರಿಯಾ ಯೋಜನೆ ಹೀಗೂ ಸಿದ್ದವಾಗುತ್ತಾ.! ಶಿಕ್ಷಕ ಬರೆದಿರುವ ವೈರಲ್ ಆಗಿರುವ ಪತ್ರದಲ್ಲಿ ಏನಿದೆ.?

ಚಿತ್ರದುರ್ಗ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಭಾವನಾತ್ಮಕ, ಸಾಮಾಜಿಕ ಮತ್ತು ಅವರ ಆರೋಗ್ಯ ಸಾಕಷ್ಟು ಪರಿಣಾಮ ಬೀರುತ್ತದೆ. ಈಗ ಈ ಮೂರು ಅಂಶಗಳನ್ನೇ ತೆಗೆದುಕೊಂಡು ಕಡಬನಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರೊಬ್ಬರು ಕ್ರಿಯಾ ಯೋಜನೆಯೊಂದನ್ನು ಸಿದ್ದಪಡಿಸಿದ್ದಾರೆ.
ಸಹ ಶಿಕ್ಷಕ ಎಂ. ವಿಶ್ವನಾಥ ಅವರು, ಕ್ರಿಯಾ ಯೋಜನೆ ತಯಾರಿಸಿದ್ದು, ಶಿಕ್ಷಕರು ಮತ್ತು ಪಾಲಕರು ಮಕ್ಕಳ ಬೌದ್ಧಿಕ ವಿಕಾಸದಲ್ಲಿ ಅವರ ಪಾತ್ರವೇನು, ಅದರ ನಿರ್ವಹಣೆ ಹೇಗೆಂಬ ಅಂಶಗಳನ್ನು ತಿಳಿಸಿದ್ದಾರೆ.
ಭಾವನಾತ್ಮಕವಾಗಿ ಮಕ್ಕಳಿಗೆ ಪಾಠ ಮಾಡಿದರೆ ಅವರಿಗೆ ಅದು ಬಹುಕಾಲ ಮನದಲ್ಲಿ ಉಳಿಯುತ್ತದೆ. ಕಲಿಸುವ ವಿಧಾನದಲ್ಲಿ ಬದಲಾವಣೆ ಮುಖ್ಯ, ಪದ್ಯವನ್ನು ರಾಗವಾಗಿ ಹೇಳುವುದರಿಂದ ಮಕ್ಕಳು ಅದನ್ನು ಹಾಗೇಯೆ ಹೇಳಲು ಕಲಿಯುತ್ತಾರೆ. ಇದರಿಂದ ಅವರಿಗೂ ಅದು ಪಠಣವಾಗುವ ಜತೆಗೆ ಭಾವಾರ್ಥವನ್ನು ಅರ್ಥೈಸಿಕೊಳ್ಳುತ್ತಾರೆ.
ಸಾಮಾಜಿಕವಾಗಿ ಮಕ್ಕಳು ಬೆಳೆಯಲು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅಗತ್ಯ ಹೆಚ್ಚಿದೆ. ಅವರಿಗೆ ಶಿಕ್ಷಣ ಏಕೆ ಮುಖ್ಯ ಎಂಬುದನ್ನು ಮಗುವಿನ ಸಾಮರ್ಥ್ಯ ಏನೆಂಬುದನ್ನು ಅದಕ್ಕೆ ತಿಳಿಸುವ ಕೆಲಸ ಮಾಡುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರಿಗಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಮಕ್ಕಳ ಪಾಲಕರನ್ನು ಶಾಲೆಗೆ ಕರೆಸಿ ಮಕ್ಕಳ ಯೋಗ ಕ್ಷೇಮ ಕುರಿತು ಅವರಿಗೆ ತಿಳಿಸಬೇಕು. ಅವರಲ್ಲೂ ಜಾಗೃತಿ ಮೂಡಿಸಬೇಕು ಈ ಮೂರು ಅಂಶಗಳು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತವೆ ಎಂಬ ಅಂಶಗಳನ್ನು ಕ್ರಿಯಾ ಯೋಜನೆಯಲ್ಲಿ ಅವರು ತಿಳಿಸಿದ್ದಾರೆ.