ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿದೆ – ಪ್ರಸನ್ನ ಕುಮಾರ್

ಪ್ರಸನ್ನ ಕುಮಾರ್
ದಾವಣಗೆರೆ: ದೇಶದ 47 ಲಕ್ಷ ಯುವಕರಿಗೆ 3 ವರ್ಷ ಕಲಿಕಾ ತರಬೇತಿ (ಸ್ಟೈ ಫಂಡ್ )ನೀಡುವುದು. ಬೇಸಿಕ್ ಅಮೆನಿಟೀಸ್ ಮತ್ತು ಫೆಸಿಲಿಟಿಗಾಗಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಿಂದ ಯುವರಿಗೆ, ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸುವ ದೂರದೃಷ್ಟಿ ಬಜೆಟ್ ಇದಾಗಿದೆ.
ಒಟ್ಟು 45,03,097 ಲಕ್ಷ ಕೋಟಿ ರೂಪಾಯಿ ಗಾತ್ರದ್ದಾಗಿದೆ. ಬಜೆಟ್ ನಲ್ಲಿ ಏಳು ಆದ್ಯತಾ ವಲಯಗಳನ್ನಾಗಿ ಮಾಡಿ ಅಂತರ್ಗತ ಅಭಿವೃದ್ದಿ, ಮೂಲಸೌಕರ್ಯ ಮತ್ತು ಹೂಡಿಕೆ, ಯುವಶಕ್ತಿ, ಹಸಿರು ಬೆಳವಣಿಗೆ, ಹಣಕಾಸು ವಲಯ ಸೇರಿದಂತೆ ಸಾಮರ್ಥ್ಯ ಸಡಿಲಿಸುವುದು, ಕೊನೆಯ ಮೈಲಿಗಲ್ಲನ್ನು ತಲುಪುವುದು ಆಗಿದೆ.
ದೇಶದ SC, ST, OBC ವರ್ಗದವರಿಗೆ ಈ ಬಜೆಟ್ ನಲ್ಲಿ ಹೆಚ್ಚಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ.
ಅಲ್ಲದೇ ನಮ್ಮ ರಾಜ್ಯದ ಬಹುದಿನಗಳ ಬೇಡಿಕೆಯಾಗಿದ್ದ ಭದ್ರ ಮೇಲ್ಡಂಡೆ ಯೋಜನೆಗೆ “ರಾಷ್ಟ್ರೀಯ ಯೋಜನೆ”ಎಂದು ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ.ಈ ಯೋಜನೆಗೆ ಸುಮಾರು 5,630 ಕೋಟಿ ರೂಪಾಯಿ ಮೀಸಲಿಟ್ಟಿರುವುದಕ್ಕೆ ಅಭಿನಂದನೆಗಳು. ಈ ಭಾಗದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಇದು ಬಹುದೊಡ್ಡ ವರದಾನವಾಗಲಿದೆ.
ದೇಶದ ಮಧ್ಯಮ ವರ್ಗಕ್ಕೆ, ಶ್ರಮಜೀವಿಗಳಿಗೆ, ತೆರಿಗೆ ವಿಧಿಸದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಹೀಗೆ ಇಂದು ಕೇಂದ್ರ ಸರ್ಕಾರ ಮಂಡಿಸಿದ “ಸರ್ವವ್ಯಾಪಿ- ಸರ್ವಸ್ಪರ್ಶಿ ಬಜೆಟ್ ನೀಡಿದ ದೇಶದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಹಾಗೂ ವಿತ್ತ ಸಚಿವರಾದ ಶ್ರೀ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಪರವಾಗಿ ಅಭಿನಂದನೆಗಳು.
ಇಂತಿ ನಿಮ್ಮ
ಪ್ರಸನ್ನ ಕುಮಾರ್
ಪಾಲಿಕೆ ಸದಸ್ಯರು.
96063 31515