ಪಾಲಿಕೆಯ 44 ನೇ ವಾರ್ಡ್ ನ ಕೆಲ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಘೋಷಣೆಗೆ ಮನವಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 44 ನೇ ವಾರ್ಡಿನಲ್ಲಿ ಶಾಂತಿ ನಗರ, ವಿನಾಯಕ ನಗರ, ಬೆಂಕಿ ನಗರ, ಹೊಸ ಕುಂದುವಾಡ, ಹಳೆಕುಂದುವಾಡ ಪ್ರದೇಶಗಳು ಆರ್ಥಿಕವಾಗಿ ಹಾಗೂ ಮೂಲಭೂತ ಸೌಲಭ್ಯಗಳಿಂದ ಹಿಂದೆ ಉಳಿದಿದ್ದು, ಈ ಪ್ರದೇಶದ ಜನರಿಗೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಅನುಕೂಲವಾಗಲು ಕೊಳಚೆ ಪ್ರದೇಶವೆಂದು ಪರಿಗಣಿಸಿ ಅಭಿವೃದ್ಧಿ ಪಡಿಸಬೇಕೆಂದು ಮನವಿ 44 ನೇ ವಾರ್ಡ್ ನಾಗರಿಕರು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್ ಎ ರವೀಂದ್ರನಾಥ್ ಅವರಿಗೆ ಮನವಿ ಸಲ್ಲಿಸಿದರು.