ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್! 21.56 ಕೋಟಿ ರೂ. ಉಳಿತಾಯ (Budget) ಬಜೆಟ್

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ 2021-22ನೇ ಸಾಲಿನ ಪರಿಷ್ಕöÈತ ಹಾಗೂ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ. 2022-23ನೇ ಆರ್ಥಿಕ ವರ್ಷಕ್ಕೆ ಪಾಲಿಕೆ ಮೇಯರ್ ಆರ್. ಜಯಮ್ಮ ಆದೇಶದ ಮೇರೆಗೆ ಮತ್ತು ಪಾಲಿಕೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ 512.12 ಕೋಟಿ ರೂ.ಗಳ Budget ಅನ್ನು 21.56 ಕೋಟಿ ರೂ. ಗಳ ಉಳಿತಾಯದ ನಿರೀಕ್ಷೆಯೊಂದಿಗೆ ಬಜೆಟ್ನ್ನು ಗುರುವಾರ ಮಂಡಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸದ್ಯ ಇರುವ ಆರಂಭಿಕ ಶಿಲ್ಕು 12256.27 ಲಕ್ಷ ರೂ.ಗಳ ಜೊತೆಗೆ ರಾಜಸ್ವ ಸ್ವೀಕೃತಿಯಿಂದ 13633.80 ಲಕ್ಷ ರೂ. ಬಂಡವಾಳ ಸ್ವೀಕೃತಿಯಿಂದ 8930.36 ಲಕ್ಷ ರೂ. ಅಸಾಮಾನ್ಯ ಸ್ವೀಕೃತಿಯಿಂದ 16392.27 ಲಕ್ಷ ರೂ. ಸೇರಿದಂತೆ 2022-23ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು 51212.70 ಲಕ್ಷ ರೂ. ಆದಾಯ ಕ್ರೂಡೀಕರಿಸುವ ನಿರೀಕ್ಷೆ ಹೊಂದಿದೆ.
ರಾಜಸ್ವ ಪಾವತಿಗಾಗಿ 12504.60 ಲಕ್ಷ ರೂ. ಬಂಡವಾಳ ಪಾವತಿಗಾಗಿ 15566.00 ಲಕ್ಷ ರೂ. ಹಾಗೂ ಅಸಾಮಾನ್ಯ ಪಾವತಿಗಾಗಿ 20986.00 ಲಕ್ಷ ರೂ. ಸೇರಿದಂತೆ ಒಟ್ಟು 49056.60 ಲಕ್ಷ ರೂ.ಗಳನ್ನು ಪಾಲಿಕೆ ಸಿಬ್ಬಂದಿಯ ವೇತನ, ವಿವಿಧ ಅಭಿವೃದ್ದಿ ಕಾಮಗಾರಿ, ನಾಗರೀಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ 21.56 ಕೋಟಿ ರೂ. ಉಳಿಸುವ ಗುರಿಯನ್ನು ಪಾಲಿಕೆ ಹಾಕಿಕೊಂಡಿದೆ.
ಈ ಸಂದರ್ಭದಲ್ಲಿ ಉಪಮಹಾಪೌರರಾದ ಗಾಯತ್ರಿ ಖಂಡೋಜಿರಾವ್, ಉಪ ಆಯುಕ್ತೆ ನಳಿನಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಉದಯ್ ಕುಮಾರ್, ರಾಕೇಶ್ ಜಾಧವ್, ಸಿಎಓ ಪ್ರಶಾಂತ್ ನಾಯ್ಕ್, ಡೌರ್ಯನಾಯ್ಕ್, ಅಧಿಕ್ಷಕ ನಾಮದೇವ್, ಮಾಜಿ ಮೇಯರ್ ಎಸ್.ಟಿ ವೀರೇಶ್, ವಿರೋಧ ಪಕ್ಷದ ನಾಯಕ ಮಂಜುನಾಥ್ ಗಡಿಗುಡಾಳ್, ಎ. ನಾಗರಾಜ್, ವಿನಾಯಕ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನ, ಎಲ್.ಡಿ ಗೋಣೆಪ್ಪ, ಚಮನ್ ಸಾಬ್ ಹಾಗೂ ನಾಮನಿರ್ದೇಶಿತ ಸದಸ್ಯರು ಮತ್ತಿತರರು ಇದ್ದರು.