ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಉಪ ವಿಭಾಗಾಧಿಕಾರಿಳಿಗೆ ಜೆಡಿಎಸ್ ಪಕ್ಷದಿಂದ ಮನವಿ

IMG-20211208-WA0077

ಹಾವೇರಿ: ಹಾವೇರಿ ಜಿಲ್ಲೆ ಮೆಕ್ಕೆಜೋಳ ಕಣಜವಾಗಿದ್ದು, ತಾಲೂಕಿನಲ್ಲಿ ಮಳೆ ಆಶ್ರಿತ ಮತ್ತು ನೀರಾವರಿಯಿಂದ ಸುಮಾರು ೩೮೩೭೫ ಲಕ್ಷ ಹೆಕ್ಟೇರ ಪ್ರದೇಶ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಉತ್ಪಾದನೆಯು ಸುಮಾರು ೫೦.೮೬೭೧ ಮೆ.ಟನ್ ಅಷ್ಟು ಉತ್ಪಾದನೆ ಸಾಧ್ಯತೆವಿದೆ. ಬೇಗನೆ ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಸರ್ಕಾರಕ್ಕೆ ಉಪ ವಿಭಾಗಾಧಿಕಾರಿಗಳ ಮೂಲಕ ಜೆಡಿಎಸ್ ಪಕ್ಷದ ವತಿಯಿಂದ ಮನವಿ ಸಲ್ಲಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೆಕ್ಕೆಜೋಳವನ್ನು ರೂ.೧೮೦೦/- ರಿಂದ ರೂ.೧೮೬೦/-ರವರೆಗೆ ಖರೀದಿ ಮಾಡಬೇಕು. ಅಕಾಲಿಕ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ೧೦೦೦/- ರಿಂದ ೧೫೦೦/- ರವರೆಗೆ ಖರೀದಿ ಆಗುತ್ತಿದ್ದು ರೈತರಿಗೆ ಪ್ರತಿ ಕ್ವಿಂಟಾಲಿಗೆ ೮೦೦ ವರೆಗೆ ನಷ್ಟವಾಗುತ್ತಿದೆ. ರೈತರಿಗೆ ಸಿಗಬೇಕಾದ ಲಾಭ ದಳ್ಳಾಳಿಗಳಿಗೆ ಸಿಗುತ್ತಿದೆ. ಬೀಜ,ರಸಗೊಬ್ಬರ ಬೆಳೆಗೆ ಸಿಂಪಡಿಸುವ ಔಷದಿ, ಡಿಜೈಲ್ ಹೆಚ್ಚಳದ ದರ, ಕೂಲಿ ಕಾರ್ಮಿಕರ ಕೂಲಿ ಹೆಚ್ಚಾಗಿರುವುದರಿಂದ ವ್ಯವಸಾಯದ ಖರ್ಚು ಹೆಚ್ಚಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಮತ್ತು ಅಕಾಲಿಕ ಮಳೆಯಿಂದ ಅತೀವೃಷ್ಟಿ ಅನಾವೃಷ್ಟಿಯಿಂದ ಬೆಳೆದ ಮೆಕ್ಕೆಜೋಳವನ್ನು ಸಂರಕ್ಷಣೆ ಮಾಡಿಕೊಳ್ಳಲು ಆಗದೇ ರೈತರು ಕಂಗೆಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ೮ ದಿನದೊಳಗಾಗಿ ಖರೀದಿ ಕೇಂದ್ರವನ್ನು ಆರಂಭಿಸಬೇಕು ಇಲ್ಲದೇ ಹೊದರೆ ರೈತರೊಂದಿಗೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ.ಈ ನಮ್ಮ ರೈತರ ಬೇಡಿಕೆಯನ್ನು ಆಲಿಸಿ ಈ ಕೂಡಲೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜೆಡಿ ಎಸ್ ರಾಜ್ಯ ಉಪಾಧ್ಯಕ್ಷ ಕೆ ಎಸ್ ಸಿದ್ದಬಸಪ್ಪ ಯಾದವ್.ತಾಲ್ಲೂಕ ಅಧ್ಯಕ್ಷ ಕೆ.ಎಂ.ಸುಂಕದ.ಜೆಡಿಎಸ್ ಪಕ್ಷದ ರೈತ ಘಟಕದ ಅಧ್ಯಕ್ಷ ರಾಜೇಸಾಬ ತರ್ಲಘಟ್,ತಾಲೂಕಾ ಉಪಾಧ್ಯಕ್ಷ ಅಮಿರಜಾನ ಬೇಪಾರಿ ಮುಖಂಡರಾದ ರವಿ ಗಂಗಮ್ಮನವರು, ಸುನೀಲ ದಂಡೆಮ್ಮನವರ. ಮಲ್ಲಿಕಾರ್ಜುನ ಅರಳಿ, ಕೆ. ಹುಲಗೂರ, ಎಂ.ಎಂ ಮದರಂಗಿ,ಗುರಪ್ಪ ಅಮರಪ್ಪನವರ, ಕೆ. ಕಲಾಲ, ಐ. ಹುಬ್ಬಳ್ಳಿ, ಜಯಪ್ಪ ಬ. ಬೋಜಿ, ಶೇಖಪ್ಪ ಹಲಸೂರ, ಫಕೃಸಾಬ ನದಾಫ, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!