ನಿರ್ಜನ ಪ್ರದೇಶದಲ್ಲಿ ಯುವಕನ ಕೊಲೆ, ಓರ್ವ ಬಂಧನ

ದಾವಣಗೆರೆ: ನಿರ್ಜನ ಪ್ರದೇಶದಲ್ಲಿ ಯುವಕನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಹರಿಹರದ ಮೆಹಬೂಬ ಪಾಷಾ ಎಂಬುವವರು ಅವರ ಮಗ ಮಹಮದ್ ಅಲ್ತಾಫ್ ಹಾಗೂ ಅವರ ಅಕ್ಕನ ಮಗ ಇಬ್ರಾಹಿಂ ಎಂಬುವವರು ಕಳೆದ 18 ರಂದು ಸಂಜೆ ಅವರ ದ್ವಿ ಚಕ್ರವಾಹನ ಕೆಎ 17 ಇ ವೈ 3701 ಹೊಂಡಾ ಡಿಯೋ ಗಾಡಿಯಲ್ಲಿ ಇಬ್ರಾಹಿಂನ ಮದುವೆಗೆ ಬಟ್ಟೆಗಳನ್ನು ತೆಗೆದುಕೊಳ್ಳಲು ಹರಿಹರ ನಗರದ ವಿಜಯನಗರ ಬಡಾವಣೆಯಿಂದ ದಾವಣಗೆರೆಗೆ ಹೋಗಿದ್ದು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ . ಮೊಬೈಲ್ಗೆ ಪೋನ್ ಮಾಡಲು ರಿಂಗ್ ಆಗುತ್ತಿದ್ದು ರಿಸಿವ್ ಆಗುತ್ತಿರುವುದಿಲ್ಲ ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಕಾರಣ ನನ್ನ ಮಗನನ್ನು ಹುಡುಕಿ ಕೊಡಿ ಎಂದು 19ರಂದು ಹರಿಹರ ನಗರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಮನುಷ್ಯ ಕಾಣಿ ರೀತ್ಯಾ ಪ್ರಕರಣ ದಾಖಲು ಮಾಡಕೊಂಡಿದ್ದರು.
ನಂತರ ಅದೇ ದಿನ ಸಂಜೆ ದಾವಣಗೆರೆ ವಿದ್ಯಾನಗರ ಠಾಣೆ ಪೊಲೀಸರು ಮೆಹಬೂಬರವರಿಗೆ ದಾವಣಗೆರೆ ಕುಂದವಾಡ ಗ್ರಾಮದ ಸಮೀಪ ಇರುವ ಮಹಾಲಕ್ಷ್ಮಿ ಲೇ ಔಟ್ ಕುಂದುವಾಡ ಕೆರೆಗೆ ಬರುವಂತೆ ತಿಳಿಸಿದ ಮೇರೆಗೆ ಮೆಹಬೂಬರವರು ಬಂದು ನೋಡಲಾಗಿ ಮೆಹಬೂಬರವರ ಮಗ ಮೊಹಮ್ಮದ್ ಅಲ್ತಾಫ್ರವರನ್ನು ಬರ್ಬರವಾಗಿ ಕತ್ತುಕೊಯ್ದು ಕೊಲೆ ಮಾಡಲಾಗಿತ್ತು.
ಅಲ್ಲದೇ ಈ ವೇಳೆ ಮೊಹಮ್ಮದ್ ಅಲ್ತಾಫ್ ನ ಜೊತೆಗೆ ಬಂದಿದ ಇಬ್ರಾಹಿಂ ಮತ್ತು ಬೈಕಿನ ಬಗ್ಗೆ ಮಾಹಿತಿ ಇರುವುದಿಲ್ಲ . ಯಾರೋ ಯಾವುದೋ ವಿಚಾರಕ್ಕೆ ಇಲ್ಲಿಯೇ ಅಥವಾ ಎಲ್ಲಿಯೋ ಕೊಲೆ ಮಾಡಿದಂತೆ ಕಂಡು ಬರುತ್ತಿದೆ. ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದರು. ಅದರಂತೆ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದ ವಿದ್ಯಾ ನಗರ ಠಾಣೆಯ ಪೊಲೀಸರು ಓರ್ವ ಅರೋಪಿಯನ್ನು ಬಂಧಿಸಿದ್ದಾರೆ. ಆರೋಪಿತನನ್ನು ಪತ್ತೆ ಮಾಡುವಲ್ಲಿ ತನಿಖಾಧಿಕಾರಿ ಕೆ.ಟಿ.ಜೆ ನಗರ ವೃತ್ತದ ಸಿಪಿಐ ಹೆಚ್.ಗುರುಬಸವರಾಜ , ವಿದ್ಯಾನಗರ ಠಾಣೆಯ ಪಿಎಸ್ಐ ಪಿ.ಪ್ರಸಾದ, ರೇಣುಕಾ ಜಿ.ಎಂ ಮತ್ತು ಸಿಬ್ಬಂದಿಗಳಾದ ಚಂದ್ರಪ್ಪ, ಗಿರೀಶಗೌಡ, ಬಿ.ಗೋಪಿನಾಥ ನಾಯ್ಕ, ಯೋಗೇಶನಾಯ್ಕ, ಕೆ.ಎಲ್. ತಿಪ್ಪೇಸ್ವಾಮಿ, ತಿಮ್ಮಣ್ಣ, ರಾಘವೇಂದ್ರ, ಶಾಂತರಾಜ್, ಉಮೇಶ ಬಿಸನಾಳ್ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.