ಯುಪಿಎಸ್ಸ್ಸಿ ಪಟ್ಟ ಪ್ರಭಾವದಿಂದ ದಕ್ಕದು! 2013ರ ಬ್ಯಾಚ್ನ ಯುಪಿಎಸ್ಸಿ ಟಾಪರ್ ದಾವಣಗೆರೆ ಎಸ್ಪಿ ಸಿ.ಬಿ. ರಿಷ್ಯಂತ್

ದಾವಣಗೆರೆ : UPSC Exam ಅಂದ್ರೆ ಹಲವು ಜನರಲ್ಲಿ ತಮ್ಮದೇಯಾದ ಊಹಾಪೋಹಗಳಿವೆ. ಹಣ, ಅಧಿಕಾರದ ಪ್ರಭಾವ ಇದ್ರೆ ಸಾಕು UPSC ಹುದ್ದೆ ಅಲಂಕರಿಸಬಹುದು. ಇದರಲ್ಲಿ ಒಳಗೊಳಗೆ ಏನೋ ನಡೆಯುತ್ತದೆ, ಅವರಿಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಮ್ಮಂಥವರಿಗೆ ಇದು ಸಿಗೋದಿಲ್ಲ. ರಾಜಕೀಯ ಪ್ರಭಾವ ಇರಬೇಕು. ನಾನು IPS ಆಫೀಸರ್ ಆಗೋಕೆ ಸಾಧ್ಯವಿಲ್ಲ. ಹಣ ಇದ್ದರೆ ಮಾತ್ರ ಯುಪಿಎಸ್ಸಿ ಹೀಗೆ ನಾನಾ ರೀತಿಯ ತಪ್ಪು ಕಲ್ಪನೆಗಳಿವೆ. ಆದರೆ ಇವೆಲ್ಲ ಶುದ್ದ ಸುಳ್ಳು. ನಿಮ್ಮ ನಿಮ್ಮ ಬುದ್ದಿವಂತಿಕೆ, ತಾಳ್ಮೆ, ಹಾರ್ಡ್ವರ್ಕ್ ಮಾತ್ರ ನಿಮ್ಮನ್ನು UPSC ಎಂಬ ಸಾಧನೆಯ ಮೆಟ್ಟಿಲು ಏರಿಸೋದು. ಹಾಗಾಗಿ ಈ ರೀತಿಯ ಕಲ್ಪನೆಗಳಿಂದ ದೂರವಿರಿ… ಹೀಗೆ ಹೇಳಿದ್ದು 2013ರ ಬ್ಯಾಚ್ನ ಯುಪಿಎಸ್ಸಿ ಎಕ್ಸಾಂನಲ್ಲಿ ಟಾಪರ್ ಆದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್.
UPSC Exam ಇಡೀ ದೇಶದಲ್ಲಿ ಉನ್ನತ ಪರೀಕ್ಷೆಯಾಗಿದ್ದು ಪಾರದರ್ಶಕವಾಗಿ, ಮೆರಿಟ್ ಬೇಸ್ ಮೇಲೆ ನಡೆಯುವ ಪರೀಕ್ಷೆಯಾಗಿದೆ. ಅಷ್ಟೇಅಲ್ಲದೆ Prelims Objective ಮಾದರಿ ಆಗಿರುತ್ತದೆ. ಮನಸ್ಸಿಗೆ ಅನಿಸಿದ್ದನ್ನ ರೌಂಡ್ ಮಾರ್ಕ್ ಹಾಕಿದರೆ ಸಾಕು ಪಾಸ್ ಆಗಬಹುದೆಂಬ ಭ್ರಮೆ ಬಿಡಬೇಕು. KAS, Banking,KPSC ಯ ಹೀಗೆ ಎಲ್ಲಾ ಪರೀಕ್ಷೆ ಬರೆದು ಅದರಲ್ಲಿ ಯಾವುದಾದರೂ ಒಂದು ಸಿಕ್ಕೆ ಸಿಗುತ್ತದೆ ಎಂದುಕೊ0ಡರೆ ಖಂಡಿತ ಆಗೋದಿಲ್ಲ. “ಬೈ ಲಕ್” ಅನ್ನೊದನ್ನು ಬಿಡಬೇಕು. UPSCಗೆ ಓದು ಒಂದೇ ದಾರಿ. ಹಾಗಂತ ಬುಕ್ ಹಿಡಿದು ಇಡೀ ದಿನ ಓದುವುದಲ್ಲ. ಬದಲಾಗಿ ವಾರದಲ್ಲಿ ಯಾವ ವಿಷಯ ಎಷ್ಟು ಓದಬೇಕು ಎಂಬುದನ್ನು ನಿರ್ಧರಿಸಬೇಕು. ಆಗಾಗ ರೆಸ್ಟ್ ಕೊಡಬೇಕು. ನಾನು ಕೂಡ ಹಾಗೇ ಓದಿದ್ದು, ಸ್ವಲ್ಪ ಹೊತ್ತು ಓದು, ಸ್ವಲ್ಪ ಹೊತ್ತು ಫ್ರೆಂಡ್ಸ್ ಜೊತೆ ಹರಟೆ. ನಡು ನಡುವೆ ಸ್ನಾಕ್ಸ್ ತಿನ್ನುತ್ತಿದ್ದೆ. ಹೀಗಾದಾಗ ಮೈಂಡ್ ಫ್ರೀಯಾಗುತ್ತದೆ.
UPSC Exam ಗೆ ಸಿಲಿಬಿಸ್ ಇಡುತ್ತಾರೆ. Prelims, Mains Topic ಇದೆ, ಎಕ್ಸಾಂ ಇದೆ. ಆ ಸಿಲಿಬಸ್ ಪ್ರಕಾರ ಮೆಟಿರಿಯಲ್ ತಗೊಂಡು ಓದಬೇಕು. UPSC ಎಕ್ಸಾಂ ಪಾಸ್ ಆಗೋದಕ್ಕೆ ಶೇ.95ರಷ್ಟು ಹಾರ್ಡ್ ವರ್ಕ್ ಮಾಡಬೇಕು. ಹೆಚ್ಚು ಬುದ್ದಿವಂತರಿದ್ದವರು ಮಾತ್ರ ಯುಪಿಎಸ್ಸಿ ಪಾಸ್ ಆಗುತ್ತಾರೆ ಎಂಬ ಮಾತು ಶುದ್ದ ಸುಳ್ಳು. ನಾನು ಕೂಡ ಆವರೇಜ್ ಅಂಕ ಪಡೆದವನು. ನಾನು ವಾಣಿಜ್ಯ ಶಾಸ್ತ್ರದ ಬಿಕಾಂ ಓದಿ ಸಿಎ ಮಾಡಿದ್ದೇನೆ. ಓದಿದ್ದು ಬೆಂಗಳೂರಿನಲ್ಲಿ. ಪಿಯುಸಿ ನಂತರ ಸಿಎ ಮಾಡುವಾಗ ದೆಹಲಿಯಲ್ಲಿ ಆಡಿಟ್ಗೆ ಹೋಗಿದ್ದೆ. ಅಲ್ಲಿ ಯುಪಿಎಸ್ಸಿ ಬರೆಯಲು ನಿರ್ಧಾರ ಮಾಡಿದೆ. ಮೊದಲು ಪ್ರಿಲಿಮ್ಸ್ಗೆ ‘Commerce and Accounts’ ಐಚ್ಚಿಕ ವಿಷಯ ತಗೊಂಡೆ. ಹೀಗೆ Commerce, Science, ಕಲೆಯಲ್ಲಿ ಡಿಗ್ರಿ ಮಾಡಿದವರು ತಮ್ಮ ಇಚ್ಚಾನುಸಾರ ಐಚ್ಚಿಕ ವಿಷಯಗಳನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಾರೆ.
ಪ್ರಿಲಿಮ್ಸ್ನಲ್ಲಿ ಎರಡು ಪೇಪರ್. ಒಂದು ಪೇಪರ್ಗೆ ಎರಡು ಗಂಟೆ ಸಮಯ ಇರುತ್ತದೆ. ನೆಗೆಟಿವ್ ಮಾರ್ಕ್ ಇರುತ್ತದೆ. 1:3 ನೆಗೆಟಿವ್ ಮಾರ್ಕ್ ಇರುತ್ತದೆ.. ಅಂದ್ರೆ ಮೂರು ತಪ್ಪು ಉತ್ತರ ಬರೆದರೆ, ಒಂದು ಸರಿ ಮಾರ್ಕ್ ಹೋಗುತ್ತದೆ. ಪ್ರಿಲಿಮ್ಸ್ನಲ್ಲಿ ಮೊದಲನೇ ಪೇಪರ್ ನೂರು ಅಂಕಗಳಿಗೆ ಬರೆಯಬೇಕು. General Steadyಗೆ ಎಕ್ಸಾಂ ಬರೆಯಬೇಕು. ಎರಡನೇ ಪೇಪರ್ ಸಿ-ಸ್ಯಾಟ್. 80 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಎರಡಕ್ಕೂ ಎರಡು ಗಂಟೆ ಸಮಯಾವಕಾಶವಿರುತ್ತದೆ.
ಜನರಲ್ ಸ್ಟಡಿ ಪೇಪರ್ಗೋಸ್ಕರ ಸಾಮಾನ್ಯವಾಗಿ ಎಲ್ಲರೂ ತಮ್ಮ ವಿಷಯ ಅನುಸಾರ ಆ ಬಗ್ಗೆಯೇ ಜಾಸ್ತಿ ಓದುವುದು. ಅದರ ಬಗ್ಗೆಯೇ ಹೆಚ್ಚು ಆಸಕ್ತಿ ಕೊಟ್ಟು ಬೇರೆಯದನ್ನ ಓದೋದಿಲ್ಲ. ಆ ರೀತಿ ಮಾಡಬಾರದು. ನಿಮ್ಮ ಆಯ್ಕೆಯ ವಿಷಯದಲ್ಲಿ ಯಾವುದಕ್ಕೆ ಎಷ್ಟು ಅಂಕ ಬರುತ್ತೆ. 2020ರ ಪ್ರಿಲಿಮ್ಸ್ನಲ್ಲಿ ಜನರಲ್ ಪೇಪರ್ಗೆ ಸೈನ್ಸ್ನಿಂದ 5 ಪ್ರಶ್ನೆಗಳು, ಇತಿಹಾಸದಿಂದ 18 ಪ್ರಶ್ನೆಗಳು ಬಂದಿದ್ದವು. ಇತಿಹಾಸದಲ್ಲಿ ಪುರಾತನ, ಮಧ್ಯಮ, ಪ್ರಸ್ತುತ ಮೂರು ಮಾಡಲ್ಗಳಿದ್ದು 18 ಅಂಕಗಳಿಗೆ ಉತ್ತರ ಬರೆಯಬೇಕು. ಜಿಯಾಗ್ರೋಫಿ 14 ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಅರ್ಥಶಾಸ್ತç 10 ರಿಂದ 12 ಪ್ರಶ್ನೆಗಳು. ಪ್ರಸ್ತುತ ವಿದ್ಯಮಾನ ಪ್ರಮುಖವಾಗಿದ್ದು 25 ಅಂಕಗಳಿಗೆ ಉತ್ತರ ಬರೆಯಬೇಕು. Politics 12 ರಿಂದ 13 ಅಂಕ. ಪರಿಸರ 8 ಪ್ರಶ್ನೆ, ಮಿಸ್ಸೆಲೇನಿಯಸ್ 8 ಪ್ರಶ್ನೆಗಳು ಇರುತ್ತವೆ. ಸಾಮಾನ್ಯವಾಗಿ ಎಲ್ಲರೂ ಹೆಚ್ಚಿನ ಅಂಕಗಳು ಇರುವ ಪ್ರಶ್ನೆಗಳಿಗೆ ಹೆಚ್ಚು ಗಮನಕೊಡುತ್ತಾರೆ. ಉಳಿದವನ್ನು ನೆಗ್ಲೇಟ್ ಮಾಡುತ್ತಾರೆ. ಅದು ಆಗಬಾರದು. ಯಾವುದಕ್ಕೆ ಎಷ್ಟು ಸಮಯ ಕೊಡಬೇಕು, ಎಷ್ಟು ಮಾರ್ಕ್ ಗೆ ಏನೇನು ಬರುತ್ತದೆ ಆ ಪ್ರಕಾರ ಸ್ಟೇಡಿ ಮಾಡಬೇಕು ಎನ್ನುತ್ತಾರೆ ರಿಷ್ಯಂತ್.
ಎರಡನೇ ಪೇಪರ್ ಸಿ ಸ್ಯಾಟ್. ಇದು ಕ್ವಾಲಿಫೈಯಿಂಗ್ ಪೇಪರ್ ಆಗಿದ್ದು, ಇದರಲ್ಲಿ ಗಣಿತಕ್ಕೆ ಸಂಬ0ಧಪಟ್ಟ ಸಾಮಾನ್ಯ ಜ್ಞಾನ ಪ್ರಶ್ನೆ, ಬೇಸಿಕ್ ಇಂಗ್ಲೀಷ್ ಪ್ರಶ್ನೆ ಕೇಳಲಾಗುತ್ತದೆ. ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಉತ್ತರ ಬರಿಯಬಹುದು. ಎಂಬತ್ತು ಪ್ರಶ್ನೆಗಳಿಗೆ ಉತ್ತರಿಸಿ ಶೇಕಡ 33ರಷ್ಟು ಅಂಕಗಳನ್ನು ಪಡೆಯಬೇಕು. ಇದರಲ್ಲಿ ಸಿಂಪಲ್ ಪ್ರಶ್ನೆಗಳಿರುತ್ತವೆ. ಆದ್ದರಿಂದ ಪ್ರಿಲಿಮ್ಸ್ ಪಾಸ್ ಆಗಬೇಕಾದರೆ ಎಲ್ಲ ವಿಷಯಗಳನ್ನ ಚೆನ್ನಾಗಿ ಓದಬೇಕು. ಪ್ರಿಲಿಮ್ಸ್ ಪಾಸಾಗಲು ಮೆಟಿರಿಯಲ್ ಬಹಳ ಮುಖ್ಯ. ಎಲ್ಲವನ್ನೂ ಓದುವ ಅಗತ್ಯವಿಲ್ಲ. ನಿಮಗೆ ಅಗತ್ಯವಿರುವ ಮೆಟಿರಿಯಲ್ ಸೆಲೆಕ್ಟ್ ಮಾಡುವುದೂ ಮುಖ್ಯ. ರಿವೀಷನ್ ಇರಬೇಕು. ಆಗ ಮಾತ್ರ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬಹುದು. ಈ ಮೆಟಿರಿಯಲ್ ಅನ್ನು ಮಿನಿಮಮ್ ಎರಡು ಸಲ ಓದಬೇಕು.
ಪ್ರಸ್ತುತ ವಿದ್ಯಮಾನಗಳ ಪ್ರಶ್ನೆಗೆ ಉತ್ತರಿಸಲು ಕಳೆದ ನಾಲ್ಕೈದು ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆ ನೋಡಿ, ಓದಬೇಕು. ಅಲ್ಲದೇ ಪರೀಕ್ಷೆ ಬರೆಯುವ ವರ್ಷದ ಪ್ರಸ್ತುತಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು. ದಿನಪತ್ರಿಕೆಯಲ್ಲಿ ಬರುವ ಕ್ರೈಂ, ರಾಜಕೀಯ ಸುದ್ದಿಗಳೇ ಯುಪಿಎಸ್ಸಿಗೆ ಪ್ರಮುಖವಲ್ಲ. ಬಜೆಟ್, ಎಕಾನಿಮಿಕ್, ಸ್ಯಾಟಲೈಟ್, ವಿಜ್ಞಾನ, ಹಣಕಾಸು, ಮಾನ್ಸೂನ್, ಇತಿಹಾಸ, (Budget, Economic, Satellite, Science, Finance, Monsoon, History), ಇವುಗಳ ಬಗ್ಗೆ ಓದಿ ನೋಟ್ ಮಾಡಿಕೊಳ್ಳಬೇಕು. ದಿನ ಪತ್ರಿಕೆಯ ಸುದ್ದಿ ಕಲೆಕ್ಟ್ ಮಾಡಿ ಇಟ್ಕೊಬೇಕು. ಕರೆಂಟ್ ಅಫೇರ್ಸ್ ಬುಕ್ ಬರುತ್ತದೆ. ದಿನಪತ್ರಿಕೆ ಯಾಕೆ ಓದಬೇಕು ಎಂದು ಅನೇಕರು ಕೇಳುತ್ತಾರೆ.. ಆದರೆ ನಾವು ಸ್ವಂತ ಓದಿ ಪಾಯಿಂಟ್ಸ್ ಮಾಡುವುದಕ್ಕೂ, ಬುಕ್ನ ಪಾಯಿಂಟ್ಸ್ ಓದುವುದಕ್ಕೂ ವ್ಯತ್ಯಾಸವಿದೆ. ನಾವು ಸ್ವಂತ ಓದಿದರೆ ನಾಲ್ಕು ಪ್ಯಾರದಲ್ಲಿ ಎರಡು ಪಾಯಿಂಟ್ಸ್ ನೆನಪಿರುತ್ತದೆ. ಶೇ. 80ರಷ್ಟು ದಿನಪತ್ರಿಕೆಯಲ್ಲಿನ ಪ್ರಸ್ತುತಗಳ ಸುದ್ದಿ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಶೇ.20 ರಷ್ಟು ಮಾತ್ರ ಬುಕ್ನಲ್ಲಿರುವ ಪ್ರಸ್ತುತಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ.
ಪ್ರಿಲಿಮ್ಸ್ ಪಾಸಾದವರಿಗೆ ಮೇನ್ಸ್ ಎಕ್ಸಾಂ :
ಪ್ರಿಲಿಮ್ಸ್ ಪಾಸಾದವರು ಮೇನ್ಸ್ ಎಕ್ಸಾಂ ಬರೆಯಬೇಕು. ಇಲ್ಲಿ ಯಾವುದೇ ಬಹು ಆಯ್ಕೆಯ ವಸ್ತುನಿಷ್ಠ ಪ್ರಶ್ನೆಗಳು ಇರುವುದಿಲ್ಲ. ಇಲ್ಲಿ ಇಷ್ಟು ಅಂಕದ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳುತ್ತಾರೆ. ಆ ಅಂಕಗಳಿಗೆ ತಕ್ಕಂತೆ ಇಂತಿಷ್ಟು ಪದಗಳಲ್ಲಿ ಉತ್ತರಿಸಬೇಕಿದೆ. ಇಲ್ಲಿ ಪಾಸಾದವರು ಮೌಖಿಕ ಸಂದರ್ಶನಕ್ಕೆ ಹೋಗಬೇಕಾಗಿದೆ. ಸಂದರ್ಶನದಲ್ಲಿ ಹತ್ತು ಪ್ಯಾನಲ್ ಟೀಮ್ ಇರುತ್ತದೆ. ಒಂದು ಟೀಮ್ನಲ್ಲಿ ಹತ್ತು ಜನ ಇರುತ್ತಾರೆ. ಸಂದರ್ಶನಕ್ಕೆ ಹೋಗುವ ವೇಳೆ ಅಭ್ಯರ್ಥಿ ಯಾವ ಟೀಮ್ಗೆ ಹೋಗಬೇಕೆಂದು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಯುಪಿಎಸ್ಸಿ ಬೋರ್ಡ್ ಚೇರ್ಮನ್ ಸಂದರ್ಶನದಲ್ಲಿದ್ದು, ತಾಳ್ಮೆ, ಸಿಟ್ಟು, ವೈಯಕ್ತಿಕ, ಹಾಬೀಸ್ ಸೇರಿದಂತೆ ಯುಪಿಎಸ್ಸಿ ಫಾರಂ ತುಂಬುವ ವೇಳೆ ಭರ್ತಿ ಮಾಡಿದ ವಿಷಯಗಳ ಬಗ್ಗೆಯೂ ಇಲ್ಲಿ ಸಂದರ್ಶನ ನಡೆಸಲಾಗುತ್ತದೆ. ಇವೆಲ್ಲದರ ನಂತರ ಆಯ್ಕೆಯಾದವರಿಗೆ ದೆಹಲಿಯಲ್ಲಿ 2 ವರ್ಷ ತರಬೇತಿ ನಡೆಯುತ್ತದೆ. ಅಲ್ಲಿಂದ ಪೊಲೀಸ್, ಕಂದಾಯ, ಕೋರ್ಟ್ ಸೇರಿದಂತೆ ಎಲ್ಲ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಅಂತಿಮವಾಗಿ ಪೊಲೀಸ್ ಠಾಣೆ ಜವಾಬ್ದಾರಿ ನಂತರ ಡಿಎಸ್ಪಿ, ಎಎಸ್ಪಿ, ಎಸ್ಪಿ (DSP, ASP, SP)ಯಾಗಿ ಸಂಪೂರ್ಣ ಅಧಿಕಾರ ನೀಡಲಾಗುತ್ತದೆ.
garudavoice21@gmail.com 9740365719