ಎಪಿಎಂಸಿ ರೈತ ಭವನದ ಪಕ್ಕದ ಗೋಡೆ ಧ್ವಂಸ.! ರೈತರಿಂದ ಪ್ರತಿಭಟನೆ

ಎಪಿಎಂಸಿ ರೈತ ಭವನದ ಪಕ್ಕದ ಗೋಡೆ ಧ್ವಂಸ.! ರೈತರಿಂದ ಪ್ರತಿಭಟನೆ

ದಾವಣಗೆರೆ: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ರೈತ ಭವನ ಪಕ್ಕದಲ್ಲಿ ರಾತ್ರೊರಾತ್ರಿ ಗೋಡೆ ಧ್ವಂಸ ಮಾಡಿದ ಘಟನೆ ಜರುಗಿದೆ.
ಇಲ್ಲಿನ ರೈತ ಭವನದ ಕಚೇರಿ ಪಕ್ಕದಲ್ಲಿನ ಗೋಡೆ ಕೆಡವಲಾಗಿದ್ದು ಸ್ಥಳದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಎಪಿಎಂಸಿ ಕಾರ್ಯದರ್ಶಿಯ ವಿರುದ್ದ ಆಕ್ರೋಶ ಹೊರ ಹಾಕಿ ಘೋಷಣೆಗಳನ್ನು ಕೂಗಿದರು. ಇಲ್ಲಿನ ಮಾರುಕಟ್ಟೆಯ ಸ್ಥಳವನ್ನು ಮಾರಾಟ ಮಾಡಲಾಗಿದೆ ಎಂದು ದೂರಿದರು.

ಎಪಿಎಂಸಿ ರೈತ ಭವನದ ಪಕ್ಕದ ಗೋಡೆ ಧ್ವಂಸ.! ರೈತರಿಂದ ಪ್ರತಿಭಟನೆ
ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಆಗಿರುವ ಸಮಸ್ಯೆ ಸರಿಪಡಿಸಬೇಕು ಎಂದು ಆಕ್ರೋಶ ಹೊರ ಹಾಕಿದರು. ಈ ವೇಳೆ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಚಿನ್ನಸಮುದ್ರ ಶೇಖರ ನಾಯ್ಕ್ ಎಪಿಎಂಸಿ ದಲಾಲರ ಸಂಘದ ಅಧ್ಯಕ್ಷರಾದ ಎಸ್ ಎನ ತಿಪ್ಪೇಸ್ವಾಮಿ ಹಾಗೂ ಖರೀದಿದಾರ ಸಂಘದ ಅಧ್ಯಕ್ಷರಾದ ಬಿ ದಾದಾಪೀರ್. ಕೆ ಬಿ ಸತೀಶ್ NBA ಲೋಕೇಶ SMT ಮಲ್ಲೇಶ್ ಸೇರಿದಂತೆ ಹಲವರಿದ್ದರು.

ಎಪಿಎಂಸಿ ರೈತ ಭವನದ ಪಕ್ಕದ ಗೋಡೆ ಧ್ವಂಸ.! ರೈತರಿಂದ ಪ್ರತಿಭಟನೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!