ಮಹಿಳೆಯರು ಇಲ್ಲದೇ ಈ ರಥ ಮುಂದಕ್ಕೆ ಹೋಗೋದಿಲ್ಲ.! ವಿಶೇಷ ರಥೋತ್ಸವದ ಸುದ್ದಿ

LADIES THERU KARIBASAJJA

ದಾವಣಗೆರೆ : ಒಂದು  ಕಡೆ ಅಯ್ಯಪ್ಪಸ್ವಾಮಿ  ದರ್ಶನ ಮಾಡಲು  ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದ್ರೆ ಅಲ್ಲಿ ದರ್ಶನಕ್ಕೆ ಹೋಗುವುದು ಕಷ್ಟ. ಅಲ್ಲದೇ ಭಯದ ವಾತಾವರಣವಿದೆ. ಇನ್ನು ಸಾಮಾನ್ಯವಾಗಿ ರಥೋತ್ಸವದಲ್ಲಿ ದೇವರ ರಥಕ್ಕೆ ಪೂಜೆ, ಪುನಸ್ಕಾರ ಕೈಗೊಳ್ಳುವುದು ಹೆಣ್ಣು. ಅಲ್ಲದೇ ಊರಿನಲ್ಲಿ ಪುರುಷರು ಮಾತ್ರ ರಥ ಎಳೆಯಬೇಕೆಂಬ ನಿಯಮವೂ ಇದೆ. ಆದರೆ ಇಲ್ಲೊಂದು ಊರಿನಲ್ಲಿ ಮಹಿಳೆಯರು ಇಲ್ಲದೇ ರಥ ಮುಂದಕ್ಕೆ ಹೋಗೋದಿಲ್ಲ.

ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದ ಕರಿಬಸವೇಶ್ವರ ಸ್ವಾಮಿ ಮಠದಲ್ಲಿ ಈ  ವಿಶಿಷ್ಠ ಸಂಪ್ರದಾಯವಿದೆ. ಈ ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಭ್ರಮ ಮನೆ ಮಾಡಿತ್ತು. ಎತ್ತ ನೋಡಿದರೂ ಕನ್ಯಾಮಣಿಗಳೇ ಕಾಣುತ್ತಿದ್ದರು. ಒಂದು  ಕಡೆ  ಕೈಯಲ್ಲಿ  ಹೂವಿನ ಉಂಡೆ ಹಿಡಿದುಕೊಂಡು ತೊಟ್ಟಿಲು ಪೂಜೆಗೆ ಯುವತಿಯರು ಸಜ್ಜಾಗಿದ್ದರು. ಇನ್ನೊಂದು  ಕಡೆ  ದೇವರ ವಿಗ್ರಹಕ್ಕೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಇನ್ನೇನೂ ರಥೋತ್ಸವ ಆರಂಭವಾಯಿತು ಎನ್ನುವಷ್ಟರಲ್ಲಿ ಯುವತಿಯರು, ಮಹಿಳೆಯರು ರಥ ಎಳೆಯಲು ಸಜ್ಜಾದರು.

ಈ ಗ್ರಾಮದಲ್ಲಿ  ಕರಿಬಸವೇಶ್ವರ ಗದ್ದಿಗೆ ಇದ್ದು, ಕರಿಬಸವೇಶ್ವರ ಅಂದ್ರೆ ಪವಾಡ ಪುರುಷ. ಭವಿಷ್ಯತ್ತನ್ನು ಬಲ್ಲವನಾಗಿದ್ದ. ಹೀಗಾಗಿ ಹರಿಹರ ತಾಲೂಕಿನ ಉಕ್ಕಡಗಾತ್ರಿ ಸೇರಿದಂತೆ ದೇಶದ ಬಹುತೇಕ  ಕಡೆ  ಕರಿಬಸಜ್ಜನ ಗದ್ದಿಗೆಗಳು ಇವೆ. ಇದೇ ರೀತಿಯಾಗಿ ಯರ ಗುಂಟೆ ಗ್ರಾಮದಲ್ಲಿ  ಶತಮಾನಗಳಿಂದ ಇಂತಹ ಗದ್ದಿಗೆ ಪೂಜೆ ನಡೆಯುತ್ತಿದೆ.  ವಿಶೇಷವಾಗಿ ಈ ಗದ್ದಿಗೆಗೆ ಪರಮೇಶ್ವರ  ಸ್ವಾಮೀಜಿಗಳು  ಬಂದ ಬಳಿಕ  ಇಲ್ಲೊಂದು ಸಾಮಾಜಿಕ   ಕ್ರಾಂತಿಯಾಗಿದೆ. ಇದೇ   ಗದ್ದಿಗೆಯಲ್ಲಿ ನಡೆಯುವ ಪ್ರತಿಯೊಂದು  ಧಾರ್ಮಿಕ ಕಾರ್ಯಕ್ರಮಕ್ಕೆ  ಮಹಿಳೆಯರಿಗೆ ಸಮಪಾಲು ನೀಡಲಾಗಿದೆ. ಆದ್ದರಿಂದ  ಮಹಿಳೆಯರಿಗಾಗಿ ಮಹಿಳೆಯರೇ ರಥ ಎಳೆದುಕೊಂಡು ಹೋಗಬೇಕು.  ಪುರುಷರು ರಥ ಎಳೆಯುವಂತಿಲ್ಲ.  ಹೀಗಾಗಿ ಇದಕ್ಕೆ ಮಹಿಳಾ ಯಾತ್ರೆ  ಎಂದೇ ಪ್ರಸಿದ್ಧಿ ಪಡೆದಿದೆ.  ಮಹಿಳೆಯರು ಬಂದು ಹಗ್ಗ ಹಿಡಿದರೇ ಮಾತ್ರ ಈ  ದೇವರ ರಥ ಮುಂದೆ ಸಾಗಲಿದ್ದು, ಕಾರ್ತಿಕ ಮಹೋತ್ಸವದಲ್ಲಿ ಜಾತ್ರೆ ನಡೆಯುತ್ತದೆ.

ಹರಿಹರ ತಾಲೂಕಿನ ತುಂಗಭದ್ರಾ ನದಿ ದಂಡೆ ಮೇಲೆ ಉಕ್ಕಡಗಾತ್ರಿ ಅಂತಾ ಬರುತ್ತೇ. ಇಲ್ಲಿನ ಪವಾಡ ಪುರುಷ  ಕರಿಬಸಜ್ಜಯ್ಯ ಎಂದೇ ಪ್ರಸಿದ್ಧಿ.  ದೆವ್ವ, ಭೂತ, ಮಾಟ ಮಂತ್ರ, ಹೀಗೆ  ಹತ್ತು ಹಲವಾರು ಮಾನಸಿಕ ಸಮಸ್ಯೆಗೆ ಗಳಿಗೆ  ಇಲ್ಲಿ ಪರಿಹಾರ ಮತ್ತು ಚಿಕಿತ್ಸೆ ಇದೆ.  ಮೇಲಾಗಿ ಕರಿಬಸಜ್ಜಯ್ಯ ಅಂದ್ರೆ   ದೇಶ ವಿದೇಶಗಳಲ್ಲಿ ಭಕ್ತರನ್ನು ಹೊಂದಿದ್ದಾರೆ. ಈ ಕರಿಬಸಜ್ಜಯ್ಯನ ಗದ್ದಿಗೆ ಯರಗುಂಟೆ ಗ್ರಾಮದಲ್ಲಿ ಇದೆ.  ಇಲ್ಲಿನ ಪರಮೇಶ್ವರ ಸ್ವಾಮೀಜಿ  ಮೊದಲು  ಓರ್ವ ರೈತ. ಇಂತಹ  ಅವರು ಸಂಸಾರ  ಸಹಿತರಾಗಿ   ಕರಿಬಸಜ್ಜಯ್ಯ ಸೇವೆ  ಮಾಡಿದ ಪ್ರತೀಕವಾಗಿ  ವಾರದಲ್ಲಿ ಎರಡು ದಿನ ಇಲ್ಲಿ ಅಪ್ಪಣೆ ಆಗುತ್ತವೆ.  ಆ ಅಪ್ಪಣೆಗೆ ಬಹುತೇಕ ಕಡೆಯಿಂದ ಭಕ್ತರು ಬರುತ್ತಾರೆ. ಇದರಲ್ಲಿ ಮಹಿಳೆಯ ಸಂಖ್ಯೆ  ಹೆಚ್ಚಾಗಿರುತ್ತದೆ.  ಇದೇ ಕಾರಣಕ್ಕೆ ಇಲ್ಲಿ ಯಾವುದೇ  ಪುಣ್ಯ ಕಾರ್ಯ ನಡೆದರೂ ಅದು ಮಹಿಳೆಯರಿಂದ ನಡೆಯಬೇಕು ಎಂಬ ಸಂಕಲ್ಪ ಸ್ವಾಮೀಜಿ ಮಾಡಿದ್ದಾರೆ.

ಕಳೆದ 12 ವರ್ಷಗಳಿಂದ ಈ ರಥೋತ್ಸವ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಜಾತ್ರೆ ಪ್ರಸಿದ್ಧಿಗೆ ಬರುತ್ತಿದೆ. ಕಳೆದ 11 ವರ್ಷಗಳಿಂದ  ಕರಿಬಸವೇಶ್ವರನ ಗದ್ದಿಗೆ  ಜಾತ್ರೆಗೆ ರಥೋತ್ಸವ ಆರಂಭಿಸಲಾಗಿದೆ. ಶಕ್ತಿ ದೇವತೆ ಅಂದ್ರೆ  ಮಹಿಳೆ. ವಾರದಲ್ಲಿ ಎರಡು ದಿನಗಳ ಕಾಲ ಇಲ್ಲಿ ಪೂಜೆ  ಮತ್ತು ಅಪ್ಪಣೆ ನಡೆಯುತ್ತಿದೆ. ಅಂದ್ರೆ ನಿಮ್ಮ ಮನೆಯಲ್ಲಿ ಯಾವುದೇ ತೊಂದರೆಗಳಿದ್ದರೇ  ಅದಕ್ಕೆ ಪರಿಹಾರ ಹೇಳುವ ಕಾಯಕ ಇಲ್ಲಿದೆ.  ಇದೇ ಪರಮೇಶ್ವರ ಸ್ವಾಮೀಜಿಗಳ  ಮನಸ್ಸಿನಲ್ಲಿ  ಕರಿಬಸಜ್ಜಯ್ಯ   ಬಂದು ಸಂದೇಶ ನೀಡುತ್ತಾನೆ ಎಂಬುದು ಜನರ ನಂಬಿಕೆ. ಮೇಲಾಗಿ  ಪರಮೇಶ್ವರ ಸ್ವಾಮೀಜಿ ತಾವು ಸ್ವಾಮೀಜಿ ಆಗುವ  ಮೊದಲು   ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದ ರೈತರಾಗಿದ್ದರು. ಐದು ಎಕರೆ ಗದ್ದೆಯಲ್ಲಿ ಕೇವಲ  20 ಚೀಲ ಭತ್ತ ಬೆಳೆಯುತ್ತಿದ್ದಾಗ,  ಕರಿಬಸಜ್ಜಯ್ಯನ ಕರುಣೆಯಿಂದ  200 ಚೀಲ ಭತ್ತ ಬೆಳೆದು  ಪವಾಡ ಮಾಡಿ ಸ್ವಾಮೀಜಿ ಆದವರು.  ಮೇಲಾಗಿ ಜನರಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನ  ಬೆಳೆಯಲು ಸ್ವಾಮೀಜಿ ನಿರಂತರವಾಗಿ  ಶ್ರಮಿಸುತ್ತಿದ್ದಾರೆ.  ಇವರಿಗೆ ಮಹಿಳೆಯರ ಮೇಲೆಪ್ರೀತಿ ಅಭಿಮಾನ ಮತ್ತು ಭಕ್ತಿ ಇದ್ದೆ ಇದೆ. ಇದೇ ಕಾರಣಕ್ಕೆ 2011ರಲ್ಲಿ  ಈ ಕ್ಷೇತ್ರದಲ್ಲಿ ರಥೋತ್ಸವ ಆರಂಭಿಸಿದರು.

ಬಹುತೇಕ  ಕಡೆ ರಥೋತ್ಸವ  ನಡೆಯುತ್ತದೆ.  ಇದನ್ನ ಪುರುಷರೇ ಎಳೆಯುತ್ತಾರೆ. ಮೇಲಾಗಿ  ನಿರಂತರವಾಗಿ  ಅದೊಂದು ಸಂಪ್ರದಾಯವಾಗಿದೆ. ಇಂತಹ ಪರಿಸ್ಥಿತಿಗಳು ಕರಿಬಸಜ್ಜಯ್ಯನ  ಗದ್ದಿಗೆಯ ರಥೋತ್ಸವ ಎಂಬುದು ಮಹಿಳೆಯರಿಂದಲೇ ಆಗಬೇಕು ಎಂದು ನಿರ್ಧರಿಸಿದರು.  ಇದಕ್ಕೆ ಗ್ರಾಮದ ಪ್ರಮುಖರು ಒಪ್ಪಿಗೆ ಸಹ ನೀಡಿದರು.  ಹೀಗಾಗಿ ಇದೊಂದು ಮಹಿಳಾ ಜಾತ್ರೆ  ಎಂದು ಪ್ರಸಿದ್ಧಿ ಪಡೆಯಿತು.  ಶ್ರೀ ಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಅವಿಸ್ಮರಣೀಯ ಕ್ಷಣಗಳಿಗೆ ಸಾವಿರಾರು ಜನ ಸಾಕ್ಷಿಯಾಗಿ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು. ಕರಿಬಸವೇಶ್ವರ ಸ್ವಾಮಿಯ ರಥೋತ್ಸವವನ್ನು  ವಿವಿಧ ಹೂವಿನಿಂದ ಅಲಂಕಾರ ಮಾಡುವುದು ಇಲ್ಲಿನ ಸಂಪ್ರದಾಯವಾಗಿದ್ದು, ಹೀಗೆ ಶೃಂಗಾರಗೊಂಡ ರಥವನ್ನ ಮಹಿಳೆಯರು ಎಳೆದಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!